ಗಲ್ಫ್ ರಾಷ್ಟ್ರಗಳಿಂದ (ದುಬೈ, ಕತಾರ್, ಸೌದಿ ಅರೇಬಿಯಾ ಇತ್ಯಾದಿ) ಮಂಗಳೂರು ಮತ್ತು ಬೆಂಗಳೂರಿಗೆ ಬರುವ ವಿಮಾನಗಳ ಸಂಖ್ಯೆಯಲ್ಲಿ ಕಡಿತ ಅಥವಾ ವೇಳಾಪಟ್ಟಿಯಲ್ಲಿನ ಪದೇ ಪದೆ ಬದಲಾವಣೆಗಳು ಪ್ರವಾಸಿಗರ ಆತಂಕಕ್ಕೆ ಕಾರಣವಾಗಿವೆ. ತಾಂತ್ರಿಕ ಕಾರಣಗಳು ಅಥವಾ ಏರ್‌ಲೈನ್ಸ್ ಸಂಸ್ಥೆಗಳ ಆಂತರಿಕ ನಿರ್ಧಾರಗಳಿಂದಾಗಿ ಅನೇಕ ವಿಮಾನಗಳು ರದ್ದಾಗುತ್ತಿವೆ ಅಥವಾ ವಿಳಂಬವಾಗುತ್ತಿವೆ.

ಪ್ರಸ್ತುತ ಮಧ್ಯಪ್ರಾಚ್ಯ ದೇಶದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮದಿಂದಾಗಿ ಶೇ. 75ರಷ್ಟು ಬುಕಿಂಗ್‌ ಕಳೆದ ಹತ್ತು ದಿನಗಳಲ್ಲಿ ಕ್ಯಾನ್ಸಲ್‌ ಮಾಡಲಾಗಿದೆ. ಹಾಗೆಯೇ ಯಾವುದೇ ಹೊಸ ಬುಕಿಂಗ್‌ ಕೂಡ ಆಗಿಲ್ಲ ಎನ್ನಲಾಗಿದೆ. ತಜ್ಞರ ಪ್ರಕಾರ ಮಾರ್ಚ್‌ ಮತ್ತು ಮೇ ತಿಂಗಳ ನಡುವೆ ರಜಾ ದಿನಗಳು ಇರುವ ಕಾರಣದಿಂದಾಗಿ ಸಾಮಾನ್ಯವಾಗಿ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿತ್ತು. ಹಾಗೇ ಈದ್‌ ಹಬ್ಬ ಇರುವುದರಿಂದ ಮುಸ್ಲಿಮರು ಪ್ರಯಾಣ ಮಾಡುತ್ತಿದ್ದರು. ಈಗ ಇದರ ಮೇಲೂ ಪರಿಣಾಮ ಬೀರುತ್ತಿದೆ ಎನ್ನಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶೇ. 80ರಷ್ಟು ಪ್ರಯಾಣಿಗರ ಸಂಖ್ಯೆ ಕುಸಿದಿದೆ.

ಬಿಎಲ್ಎಸ್ ಇಂಟರ್‌ನ್ಯಾಷನಲ್‌ನಿಂದ ಕಝಾಕಿಸ್ತಾನ್‌ನಲ್ಲಿ ಸಿಪ್ರಸ್ ವೀಸಾ ಸೇವೆ ಆರಂಭ

ಕರ್ನಾಟಕಕ್ಕೆ ಬರುವ ಅನಿವಾಸಿ ಕನ್ನಡಿಗರು ಮತ್ತು ಗಲ್ಫ್ ಭಾಗದ ಪ್ರವಾಸಿಗರು ನೇರ ವಿಮಾನ ಸೌಲಭ್ಯದ ಕೊರತೆಯಿಂದಾಗಿ ತಮ್ಮ ಪ್ರವಾಸಗಳನ್ನು ರದ್ದುಗೊಳಿಸುತ್ತಿದ್ದಾರೆ ಅಥವಾ ನೆರೆಯ ರಾಜ್ಯಗಳತ್ತ (ಕೇರಳದಂತಹ) ಮುಖ ಮಾಡುತ್ತಿದ್ದಾರೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಗಲ್ಫ್‌ನಿಂದ ಬರುವವರೇ ಹೆಚ್ಚು. ಇಲ್ಲಿನ ಹೊಟೇಲ್‌ಗಳು, ಟ್ಯಾಕ್ಸಿ ಚಾಲಕರು ಮತ್ತು ಪ್ರವಾಸಿ ತಾಣಗಳು ಈ ಅನಿಶ್ಚಿತತೆಯಿಂದಾಗಿ ಆರ್ಥಿಕ ನಷ್ಟ ಅನುಭವಿಸುತ್ತಿವೆ.

ಹೆಚ್ಚಿನ ವಿಮಾನ ದರ:

ಲಭ್ಯವಿರುವ ವಿಮಾನಗಳ ದರವು ಗಗನಕ್ಕೇರಿರುವುದು ಪ್ರವಾಸಿಗರನ್ನು ಮತ್ತಷ್ಟು ದೂರ ತಳ್ಳುತ್ತಿದೆ. ತುರ್ತು ಸಂದರ್ಭಗಳಲ್ಲಿ ಅಥವಾ ರಜಾದಿನಗಳಲ್ಲಿ ಊರಿಗೆ ಬರಲು ಬಯಸುವವರಿಗೆ ಈ ದುಬಾರಿ ದರವು ದೊಡ್ಡ ಹೊರೆ. ಇದು ಪ್ರವಾಸೋದ್ಯಮ ಪ್ಯಾಕೇಜ್‌ಗಳ ಮೇಲೂ ಪರಿಣಾಮ ಬೀರಿದೆ. ಶೇ. 50ರಿಂದ 60ರಷ್ಟು ನಷ್ಟ ಆಗಲಿದೆ ಎನ್ನಲಾಗುತ್ತಿದೆ.

ಕರ್ನಾಟಕದ ಪ್ರವಾಸೋದ್ಯಮ ಸಂಘಟನೆಗಳು ಈ ಬಗ್ಗೆ ಕಳವಳ ವ್ಯಕ್ತಪಡಿಸಿವೆ. ವಿಮಾನಗಳ ಕಾರ್ಯಾಚರಣೆ ಸ್ಥಿರವಾಗಿಲ್ಲದಿದ್ದರೆ, ಹೊಟೇಲ್ ಬುಕಿಂಗ್‌ಗಳು ಕಡಿಮೆಯಾಗುತ್ತವೆ ಮತ್ತು ಇದರಿಂದ ಸರಕಾರಕ್ಕೆ ಬರುವ ಆದಾಯಕ್ಕೂ ಕತ್ತರಿ ಬೀಳುತ್ತದೆ ಎಂದು ಅವು ಎಚ್ಚರಿಸಿವೆ.

ರಾಜ್ಯ ಮತ್ತು ಕೇಂದ್ರ ಸರಕಾರಗಳು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಪ್ರವಾಸೋದ್ಯಮ ತಜ್ಞರು ಒತ್ತಾಯಿಸಿದ್ದಾರೆ. ಗಲ್ಫ್ ದೇಶಗಳಿಂದ ಹೆಚ್ಚಿನ ವಿಮಾನಗಳನ್ನು ಓಡಿಸಲು ವಿಮಾನಯಾನ ಸಂಸ್ಥೆಗಳೊಂದಿಗೆ ಮಾತುಕತೆ ನಡೆಸುವಂತೆ ಮತ್ತು ವಿಮಾನ ನಿಲ್ದಾಣಗಳಲ್ಲಿ ಮೂಲಸೌಕರ್ಯಗಳನ್ನು ವೃದ್ಧಿಸುವಂತೆ ಮನವಿ ಮಾಡಲಾಗಿದೆ.