• ಬೆಂ. ಮು. ಮಾರುತಿ

ಪರವೂರಿನಿಂದ ಬೆಂಗಳೂರಿಗೆ ಬರುವವರು ಬೆಂಗಳೂರಲ್ಲಿ ಏನೇನಿದೆ ಅಂತ ಕೇಳಿದಾಗ ಸಾಮಾನ್ಯ ಪ್ರವಾಸಿ ತಾಣಗಳ ಬಗ್ಗೆ ಎಲ್ಲರೂ ಹೇಳುತ್ತಾರೆ. ಆದರೆ ಕೆಲವು ಸ್ಥಳಗಳು ತೆರೆಮರೆಯಲ್ಲೇ ಉಳಿದುಬಿಡುತ್ತವೆ. ಅಂಥ ಒಂದು ಸ್ಥಳ ದೊಮ್ಮಲೂರಿನ ಸೂರ್ಯನಾರಾಯಣ ದೇವಾಲಯ. ಭಾರತದ ಕೆಲವೇ ಕೆಲವು ಸೂರ್ಯದೇವರ ದೇವಾಲಯಗಳಲ್ಲಿ ಇದೂ ಒಂದು.

ಈ ದೇವಾಲಯವ ಭಗವಾನ್ ಸೂರ್ಯ ನಾರಾಯಣನಿಗೆ ಸಮರ್ಪಿತವಾಗಿದೆ. ಇದನ್ನು 1995 ರಲ್ಲಿ ಶ್ರೀ ಪಟೇಲ್ ಡಿ ಆರ್ ಕೃಷ್ಣಾ ರೆಡ್ಡಿ ಅವರು ನಿರ್ಮಿಸಿದರು ಮತ್ತು ತುಮಕೂರಿನ ಸಿದ್ದಗಂಗಾ ಮಠದ ಶ್ರೀ ಶಿವ ಕುಮಾರ ಸ್ವಾಮೀಜಿ ಅವರು ಉದ್ಘಾಟಿಸಿದರು. ಕೋಟ್ಯಾಂತರ ದೇವಾಲಯಗಳಿರುವ ಈ ನಾಡಿನಲ್ಲಿ ಈ ದೇವಾಲಯದ ವಿಶೇಷತೆ ಏನು?

surya temple 1

ದೊಮ್ಮಲೂರಿನ ಸೂರ್ಯನಾರಾಯಣ ದೇವಾಲಯವು ಭಾರತದ ಅತ್ಯಂತ ಸುಂದರವಾದ ಆಧುನಿಕ ದೇವಾಲಯಗಳಲ್ಲಿ ಒಂದಾಗಿದೆ! ಶ್ರೀಮಂತ ಚೋಳ ದೇವಾಲಯದ ವಾಸ್ತುಶಿಲ್ಪ ಶೈಲಿಯಲ್ಲಿ ಪರಿಣಿತ ಕುಶಲಕರ್ಮಿಗಳಿಂದ ಇದನ್ನು ಅದ್ಭುತವಾಗಿ ನಿರ್ಮಿಸಲಾಗಿದೆ. ಈ ದೇವಾಲಯವು ಪ್ರತಿ ದಿನವೂ ಹೆಚ್ಚಿನ ಸಂಖ್ಯೆಯ ಭಕ್ತರನ್ನು ಆಕರ್ಷಿಸುತ್ತದೆ, ವಿಶೇಷವಾಗಿ ಮಾಘ ಮಾಸದ ಸುಧಾ ತೃತೀಯ 8 ದಿನಗಳ ಉತ್ಸವ - ಬ್ರಹ್ಮೋತ್ಸವ - ಸಮಯದಲ್ಲಿ.

ಸೂರ್ಯನಾರಾಯಣನ ಭವ್ಯವಾದ ವಿಗ್ರಹವನ್ನು ಬದರೀನಾಥದಿಂದ ಖರೀದಿಸಲಾಗಿದೆ. ಇದು ಪ್ರಭಾವಳಿ ಜೊತೆಗೆ 3.25 ಅಡಿ ಎತ್ತರವಿದೆ. ತಳದಲ್ಲಿ ನೀವು ಕಶ್ಯಪ ಮತ್ತು ಅದಿತಿಯ ವಿಗ್ರಹಗಳನ್ನು ನೋಡಬಹುದು.

ಗರ್ಭಗುಡಿಯ ಹೊರಗೆ ವೈಷ್ಣವಿ, ಬ್ರಹ್ಮ, ನಾಗರಾಜ, ಉಗ್ರನರಸಿಂಹ, ಸರಸ್ವತಿ, ಪಂಚಮುಖಿ ಗಣೇಶ, ಸೂರ್ಯ ಮತ್ತು ಮಲಗಿರುವ ಆದಿ ಶೇಷಶಾಯಿ, ಕೆಳಗೆ ಭಕ್ತರಿಗೆ ಕರುಣೆ ತೋರುತ್ತಿರುವುದನ್ನು ಕಾಣಬಹುದು. ಆವರಣದಲ್ಲಿ ಅದ್ಭುತವಾದ ಉದ್ಭವ ಹುತ್ತವಿದೆ, ಇದು ವೇದಿಕೆಯನ್ನು ನಿರ್ಮಿಸಿದ ನಂತರ ರೂಪುಗೊಂಡಿತು!

ಅಂದ ಹಾಗೆ ಇದು ದೇಶದಲ್ಲೇ ಅತ್ಯಂತ ಸ್ವಚ್ಛವಾದ ದೇವಾಲಯದ ಆವರಣಗಳಲ್ಲಿ ಒಂದಾಗಿದೆ. ಇಲ್ಲಿ ಸ್ವಚ್ಛತೆ ದಿನಚರಿಯಂತೆ ಪಾಲನೆ ಮಾಡಲಾಗುತ್ತಿದೆ. ಈ ದೇವಾಲಯದ ದರ್ಶನ ಸಮಯ ಹೀಗಿದೆ.

ಸೋಮವಾರದಿಂದ ಶನಿವಾರ : ಪ್ರಾತಃಕಾಲ 5-00 ರಿಂದ 11-00 ಹಾಗೂ ಸಂಜೆ 5-00 ರಿಂದ 8-30 ಗಂಟೆ.

ಭಾನುವಾರ ಪ್ರಾತಃಕಾಲ 5-30 ರಿಂದ 1-00 ಹಾಗೂ ಸಂಜೆ 5-00 ರಿಂದ 8-30 ಗಂಟೆ.