Friday, September 26, 2025
Friday, September 26, 2025

ವಿದೇಶ ತಲುಪಿತು ಬೀಟಲ್ಸ್ ಸಾಂಗ್

ಯೋಗ ಹುಟ್ಟಿಕೊಂಡಿದ್ದು ಭಾರತದಲ್ಲಿ ಎಂಬುದಕ್ಕೆ ಪುರಾಣಗಳು ಮತ್ತು ವೇದಗಳಲ್ಲಿಯೂ ಉಲ್ಲೇಖವಿದೆ. ಯೋಗವು ದೈಹಿಕವಾಗಿ ಮಾತ್ರವಲ್ಲದೆ ಮಾನಸಿಕ ತೃಪ್ತಿಯನ್ನೂ ನೀಡುತ್ತದೆ. ಯೋಗದ ಬಗ್ಗೆ ಮಾತನಾಡುವಾಗಲೆಲ್ಲಾ ಜನರು ಹೃಷಿಕೇಶಕ್ಕೆ ಹೋಗಲು ಬಯಸುತ್ತಾರೆ. ಇದನ್ನು ಯೋಗ ನಗರಿ ಎಂದು ಕರೆಯುವುದರ ಹಿಂದೆ ಅನೇಕ ಕಥೆಗಳಿವೆ.

  • ಜಾಹ್ನವಿ ಎಂ ಸಿ

ಪ್ರತಿ ವರ್ಷ ಜೂನ್ 21 ರಂದು ಅಂತರರಾಷ್ಟ್ರೀಯ ಯೋಗ ದಿನ ಆಚರಿಸಲಾಗುತ್ತದೆ. ಈ ದಿನವನ್ನು ವಿಶೇಷವಾಗಿಸಲು ಪ್ರಪಂಚದಾದ್ಯಂತ ಅನೇಕ ಯೋಗ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಯೋಗಾಭ್ಯಾಸದ ಕುರುಹುಗಳು ಇತಿಹಾಸದ ಪುಟದಲ್ಲಿರುವುದು ನೋಡಬಹುದು. ಯೋಗ ನಮ್ಮ ಮನಸ್ಸು, ದೇಹ ಮತ್ತು ಆತ್ಮ ಸೇರಿದ ಎಲ್ಲ ಮೂರು ಅಂಶಗಳನ್ನು ಶುದ್ಧೀಕರಿಸಲು ನೆರವಾಗುತ್ತದೆ. ಒತ್ತಡಮುಕ್ತ ಬದುಕು, ಪೌಷ್ಟಿಕ ಆಹಾರ ಸೇವನೆ ಹಾಗೂ ದಿನನಿತ್ಯ ಒಂದಷ್ಟು ಸಮಯ ಯೋಗ ಮಾಡುವುದರಿಂದ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಅದೇ ಸಮಯದಲ್ಲಿ, ಯೋಗಕ್ಕಾಗಿ ಪ್ರಪಂಚದಾದ್ಯಂತ ಪ್ರಸಿದ್ಧವಾಗಿರುವ ಕೆಲವು ಸ್ಥಳಗಳಿವೆ. ಅವುಗಳಲ್ಲಿ ಒಂದು ಹೃಷಿಕೇಶ.

ಉತ್ತರಾಖಂಡದಲ್ಲಿರುವ ಹೃಷಿಕೇಶ (ಹೃಷಿಕೇಶ ಅಧ್ಯಾತ್ಮಿಕ ಪ್ರವಾಸೋದ್ಯಮ) ಪ್ರಪಂಚದಾದ್ಯಂತ ಯೋಗದ ನಗರಿ ಎಂದೇ ಖ್ಯಾತಿಯನ್ನು ಪಡೆದಿದೆ. ಈ ಪಟ್ಟಣವು ಉತ್ತರಾಖಂಡ, ಹಿಮಾಲಯದ ಅಂಚಿನಲ್ಲಿ ಮತ್ತು ಗಂಗಾ ನದಿಯ ತಟದಲ್ಲಿ ನೆಲೆಸಿದೆ. ಇದು ಯೋಗ, ಧ್ಯಾನ ಮತ್ತು ಆಧ್ಯಾತ್ಮದ ಪವಿತ್ರ ತಾಣವಾಗಿ ಜಗತ್ತಾದ್ಯಂತ ಪ್ರಸಿದ್ಧವಾಗಿದೆ. ಯೋಗ ಎಂದಾಕ್ಷಣ ಮೊದಲು ನೆನಪಿಗೆ ಬರುವ ಜಾಗವೇ ಹೃಷಿಕೇಶ. ಪ್ರಪಂಚದಾದ್ಯಂತದ ಜನರು ಯೋಗ ಕಲಿಯಲು ಇಲ್ಲಿಗೆ ಬರುತ್ತಾರೆ. ಭಾರತೀಯರಿಗಿಂತ ವಿದೇಶಿಗರನ್ನು ಇಲ್ಲಿ ಹೆಚ್ಚಾಗಿ ಕಾಣಬಹುದು. ಆದರೆ ಹೃಷಿಕೇಶವನ್ನು ಯೋಗದ ನಗರ ಅಥವಾ ಯೋಗದ ರಾಜಧಾನಿ ಎಂದು ಏಕೆ ಕರೆಯುತ್ತಾರೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಹೃಷಿಕೇಶವನ್ನು ಯೋಗ ನಗರಿ ಎಂದು ಕರೆಯುವ ಹಿಂದಿನ ಕಾರಣವೇನು ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.

How did Rishikesh become the 'Yoga Capital'_ 1

ಭಾರತದೊಂದಿಗೆ ಯೋಗದ ಸಂಪರ್ಕ:

ಯೋಗ ಹುಟ್ಟಿಕೊಂಡಿದ್ದು ಭಾರತದಲ್ಲಿ ಎಂಬುದಕ್ಕೆ ಪುರಾಣಗಳು ಮತ್ತು ವೇದಗಳಲ್ಲಿಯೂ ಉಲ್ಲೇಖವಿದೆ. ಯೋಗವು ದೈಹಿಕವಾಗಿ ಮಾತ್ರವಲ್ಲದೆ ಮಾನಸಿಕ ತೃಪ್ತಿಯನ್ನೂ ನೀಡುತ್ತದೆ. ಯೋಗದ ಬಗ್ಗೆ ಮಾತನಾಡುವಾಗಲೆಲ್ಲಾ ಜನರು ಹೃಷಿಕೇಶಕ್ಕೆ ಹೋಗಲು ಬಯಸುತ್ತಾರೆ. ಇದನ್ನು ಯೋಗ ನಗರಿ ಎಂದು ಕರೆಯುವುದರ ಹಿಂದೆ ಅನೇಕ ಕಥೆಗಳಿವೆ.

ಧ್ಯಾನಕ್ಕಾಗಿ ಹಲವು ಆಶ್ರಮಗಳು:

ಉತ್ತರಾಖಂಡ ಪ್ರವಾಸೋದ್ಯಮದ ಪ್ರಕಾರ, ಹೃಷಿಕೇಶದಲ್ಲಿ ನೂರಕ್ಕೂ ಹೆಚ್ಚು ಯೋಗ ಆಶ್ರಮಗಳು ಹಾಗೂ ತರಬೇತಿ ಕೇಂದ್ರಗಳಿವೆ. ಭಾರತ ಮತ್ತು ವಿದೇಶಗಳಿಂದ ಪ್ರತಿ ವರ್ಷ ನೂರಾರು ಜನರು ಯೋಗ ಮತ್ತು ಧ್ಯಾನ ಕಲಿಯಲು ಹೃಷಿಕೇಶಕ್ಕೆ ಬರುತ್ತಾರೆ. ಯೋಗ, ಧ್ಯಾನ ಮತ್ತು ಜ್ಞಾನದ ಕೇಂದ್ರವೆಂದು ಪರಿಗಣಿಸಲಾದ ಅನೇಕ ಆಶ್ರಮಗಳು ಇಲ್ಲಿವೆ. ಪ್ರಪಂಚದಾದ್ಯಂತ ಪ್ರಸಿದ್ಧವಾಗಿರುವ ಕೆಲವು ಆಶ್ರಮಗಳನ್ನೂ ಇಲ್ಲಿ ಕಾಣಬಹುದು. ಉತ್ತರಾಖಂಡದ ಪ್ರವಾಸೋದ್ಯಮ ಇಲಾಖೆಯು ಪ್ರತಿ ವರ್ಷ ಹೃಷಿಕೇಶದಲ್ಲಿ ಅಂತಾರಾಷ್ಟ್ರೀಯ ಯೋಗ ಉತ್ಸವವನ್ನು ಸಹ ಆಯೋಜಿಸುತ್ತದೆ. ಇಲ್ಲಿನ ಆಶ್ರಮಗಳು ಯೋಗ ಶಿಕ್ಷಕರ ತರಬೇತಿ (Yoga Teacher Training – YTT) ಕೋರ್ಸ್‌ಗಳನ್ನು ಒದಗಿಸುತ್ತವೆ. ವಿಶ್ವದ ವಿವಿಧ ರಾಷ್ಟ್ರಗಳಿಂದ ವಿದ್ಯಾರ್ಥಿಗಳು ಬಂದು, ಇಲ್ಲಿ ಯೋಗ ಕಲಿಯುತ್ತಾರೆ. ಇಲ್ಲಿನ ಶಾಂತ ಹವಾಮಾನ, ಪವಿತ್ರ ಗಂಗಾ ನದಿ, ಹಿಮಾಲಯದ ಗಿರಿಶ್ರೇಣಿಗಳು ಧ್ಯಾನ ಮತ್ತು ಆತ್ಮ ಅನ್ವೇಷಣೆಗೆ ಪೂರಕವಾದ ವಾತಾವರಣವನ್ನು ಕಲ್ಪಿಸುತ್ತದೆ. ಪ್ರತಿದಿನ ಸಂಜೆ ಪರಮಾರ್ಥ ನಿಕೇತನದಲ್ಲಿ ನಡೆಯುವ ಆರತಿ ದೃಶ್ಯ ನೋಡುವುದೇ ಕಣ್ಣಿಗೊಂದು ಹಬ್ಬ.

ಪೌರಾಣಿಕ ಕಥೆ ಹೇಳುವುದೇನು?

ಹೃಷಿಕೇಶವನ್ನು ಯೋಗ ನಗರಿ ಎಂದು ಕರೆಯುವುದರ ಹಿಂದೆ ಅನೇಕ ಪೌರಾಣಿಕ ಕಥೆಗಳಿವೆ. ರಾವಣನನ್ನು ಕೊಂದ ನಂತರ, ಭಗವಾನ್ ಶ್ರೀರಾಮ ಮತ್ತು ಅವನ ಸಹೋದರ ಲಕ್ಷ್ಮಣ ಇಲ್ಲಿಗೆ ಧ್ಯಾನ ಮಾಡಲು ಬಂದರು ಎಂದು ಹೇಳಲಾಗುತ್ತದೆ.

ಬೀಟಲ್ಸ್ ಆಶ್ರಮ:

ಹೃಷಿಕೇಶವು ಪ್ರಸಿದ್ಧಇಂಗ್ಲಿಷ್ ಮ್ಯೂಸಿಕ್ ಬ್ಯಾಂಡ್ 'ಬೀಟಲ್ಸ್' ನೊಂದಿಗೆ ವಿಶೇಷ ಸಂಬಂಧವನ್ನು ಹೊಂದಿದೆ. 1968 ರಲ್ಲಿ, ಬೀಟಲ್ಸ್‌ನ ಕೆಲವು ಸದಸ್ಯರು ಧ್ಯಾನ ಕಲಿಯಲು ಹೃಷಿಕೇಶದ ಮಹರ್ಷಿ ಮಹೇಶ್ ಯೋಗಿಯ ಆಶ್ರಮಕ್ಕೆ ಬಂದರು ಎಂದು ಹೇಳಲಾಗುತ್ತದೆ.ಈ ಕಾರಣಕ್ಕಾಗಿ ಹೃಷಿಕೇಶ ಪ್ರಪಂಚದಾದ್ಯಂತ ಪ್ರಸಿದ್ಧವಾಯಿತು. ಅಂದಿನಿಂದ ಈ ಆಶ್ರಮವನ್ನು ಬೀಟಲ್ಸ್ ಆಶ್ರಮ ಎಂದು ಕರೆಯಲಾಯಿತು. ಹೃಷಿಕೇಶದಲ್ಲಿದ್ದಾಗ ಈ ಮ್ಯೂಸಿಕ್ ಬ್ಯಾಂಡ್ ನ ಗಾಯಕರು 48 ಹಾಡುಗಳನ್ನು ಬರೆದಿದ್ದರು. ಜಾನ್ ಲೆನ್ನನ್ 'ದಿ ಹ್ಯಾಪಿ ಹೃಷಿಕೇಶ ಸಾಂಗ್' ಎಂಬ ಹಾಡನ್ನು ಸಹ ರೆಕಾರ್ಡ್ ಮಾಡಿದ್ದಾರೆ. ಅಂದಿನಿಂದ, ಅನೇಕ ವಿದೇಶಿ ಕಲಾವಿದರು ಸಹ ಹೃಷಿಕೇಶಕ್ಕೆ ಬಂದಿದ್ದಾರೆ. ಭಾರತದಲ್ಲಿ ಮಾತ್ರವಲ್ಲದೆ ಇಡೀ ಜಗತ್ತಿನಲ್ಲಿ ಹೃಷಿಕೇಶವನ್ನು ಯೋಗ ಮತ್ತು ಶಾಂತಿಯ ಸಂಕೇತವೆಂದು ಪರಿಗಣಿಸಲು ಇದೇ ಕಾರಣ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!

Read Previous

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!

ತತ್ಕಾಲ್ ಬುಕಿಂಗ್ ಸಮಯದಲ್ಲಿ ಬದಲಾವಣೆಗಲಿಲ್ಲ: IRCTC ಸ್ಪಷ್ಟನೆ

Read Next

ತತ್ಕಾಲ್ ಬುಕಿಂಗ್ ಸಮಯದಲ್ಲಿ ಬದಲಾವಣೆಗಲಿಲ್ಲ: IRCTC ಸ್ಪಷ್ಟನೆ