Wednesday, July 29, 2026
Wednesday, July 29, 2026

ಅಮೃತಸರ: ಅಂತಾರಾಷ್ಟ್ರೀಯ ವಿಮಾನ ಸಂಪರ್ಕದ ಹೊಸ ಕೇಂದ್ರ

ಅಮೃತಸರ ಉತ್ತರ ಭಾರತದ ಅಂತಾರಾಷ್ಟ್ರೀಯ ವಿಮಾನ ಸಂಪರ್ಕದ ಹೊಸ ಕೇಂದ್ರವಾಗಲಿದೆ.

ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕಿಂಜರಾಪು ರಾಮ್ ಮೋಹನ್ ನಾಯ್ಡು ಅಮೃತಸರದಲ್ಲಿ ಹೊಸ 'ಹಬ್ ಅಂಡ್ ಸ್ಪೋಕ್' ವಿಮಾನ ಸಂಪರ್ಕ ಮಾದರಿಯನ್ನು ಉದ್ಘಾಟಿಸಿದ್ದು, ಅಮೃತಸರವನ್ನು ಉತ್ತರ ಭಾರತದ ಪ್ರಮುಖ ಅಂತಾರಾಷ್ಟ್ರೀಯ ಪ್ರವೇಶ ದ್ವಾರವಾಗಿ ಘೋಷಿಸಿದ್ದಾರೆ. ಈ ವ್ಯವಸ್ಥೆಯಡಿ ಪ್ರಯಾಣಿಕರು ಅಮೃತಸರ ವಿಮಾನ ನಿಲ್ದಾಣದಲ್ಲೇ ಚೆಕ್-ಇನ್, ವಲಸೆ (ಇಮಿಗ್ರೇಷನ್), ಕಸ್ಟಮ್ಸ್ ಹಾಗೂ ಬ್ಯಾಗೇಜ್ ಡ್ರಾಪ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ, ದೆಹಲಿ ಮೂಲಕ ತಮ್ಮ ಅಂತಾರಾಷ್ಟ್ರೀಯ ವಿಮಾನಗಳಿಗೆ ಸುಗಮವಾಗಿ ಸಂಪರ್ಕ ಪಡೆಯಬಹುದು.

Untitled design - 2026-07-28T171256.248

ಈ ಹೊಸ ವ್ಯವಸ್ಥೆಯಿಂದ ಪಂಜಾಬ್ ಹಾಗೂ ಉತ್ತರ ಭಾರತದ ಪ್ರಯಾಣಿಕರಿಗೆ ವಿದೇಶ ಪ್ರಯಾಣ ಮತ್ತಷ್ಟು ಸುಲಭವಾಗಲಿದೆ. ದೆಹಲಿಯಲ್ಲಿ ಮತ್ತೆ ಚೆಕ್-ಇನ್ ಅಥವಾ ಬ್ಯಾಗೇಜ್ ಮರುಹಸ್ತಾಂತರದ ಅಗತ್ಯವಿಲ್ಲದೆ ಸಮಯ ಉಳಿತಾಯವಾಗಲಿದೆ. ಇದೇ ಸಂದರ್ಭದಲ್ಲಿ ಏರ್ ಇಂಡಿಯಾ ಅಮೃತಸರದಿಂದ ದೆಹಲಿ ಮೂಲಕ 27 ಅಂತಾರಾಷ್ಟ್ರೀಯ ತಾಣಗಳಿಗೆ 'ಈಸಿ ಕನೆಕ್ಟ್' ಸೇವೆಯನ್ನು ಆರಂಭಿಸಿದೆ. ಸರಕಾರದ ಈ ಕ್ರಮವು ವಿದೇಶಿ ವಿಮಾನ ನಿಲ್ದಾಣಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ, ಭಾರತದ ವಿಮಾನಯಾನ ಜಾಲವನ್ನು ಮತ್ತಷ್ಟು ಬಲಪಡಿಸುವ ಉದ್ದೇಶ ಹೊಂದಿದೆ. ಮುಂದಿನ ದಿನಗಳಲ್ಲಿ ಈ ಮಾದರಿಯನ್ನು ದೇಶದ ಇತರ ಪ್ರಮುಖ ನಗರಗಳಿಗೂ ವಿಸ್ತರಿಸುವ ಯೋಜನೆ ಇದೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

Read Previous

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!

Read Next

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!