ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಆಗಸ್ಟ್ 11ರಂದು ನವದೆಹಲಿಯಿಂದ ಜೈಪುರಕ್ಕೆ ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸಿದರು. ಆಗಸ್ಟ್ 12 ಮತ್ತು 13ರಂದು ಜೈಪುರದಲ್ಲಿ ನಡೆಯುತ್ತಿರುವ BRICS ಹಣಕಾಸು ಸಚಿವರು ಮತ್ತು ಕೇಂದ್ರ ಬ್ಯಾಂಕ್ ಗವರ್ನರ್‌ಗಳ ಸಭೆಯಲ್ಲಿ ಭಾಗವಹಿಸಲು ಅವರು ನಗರಕ್ಕೆ ತೆರಳಿದ್ದಾರೆ. ರೈಲು ಪ್ರಯಾಣದ ಕೆಲವು ಚಿತ್ರಗಳನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಪ್ರಯಾಣದ ವೇಳೆ ಸೀತಾರಾಮನ್ ಅವರು ಸಹ ಪ್ರಯಾಣಿಕರೊಂದಿಗೆ ಮಾತುಕತೆ ನಡೆಸಿದರು. ಇಬ್ಬರು ಸ್ನಾತಕೋತ್ತರ ಮಾಧ್ಯಮ ಅಧ್ಯಯನ ವಿದ್ಯಾರ್ಥಿಗಳು ಹಾಗೂ ಇಬ್ಬರು ಯುವ ಮಾಧ್ಯಮ ವೃತ್ತಿಪರರೊಂದಿಗೆ ಭೌಗೋಳಿಕ ರಾಜಕೀಯ, ಆರ್ಥಿಕತೆ ಮತ್ತು ಯುವಜನರ ವಿಚಾರಗಳ ಕುರಿತು ಚರ್ಚಿಸಿದರು. ಯುವಜನರ ದೃಷ್ಟಿಕೋನ ಹಾಗೂ ಆಶಯಗಳನ್ನು ತಿಳಿದುಕೊಳ್ಳುವುದು ಎಂದು ಅವರು ಹೇಳಿದ್ದಾರೆ.

ದೆಹಲಿ– ಜೈಪುರ ವಂದೇ ಭಾರತ್ ರೈಲು ದೆಹಲಿ ಕ್ಯಾಂಟ್, ಗುರುಗ್ರಾಮ, ರೇವಾರಿ, ಅಲ್ವಾರ್ ಮತ್ತು ಗಾಂಧೀನಗರ ಜೈಪುರ ನಿಲ್ದಾಣಗಳ ಮೂಲಕ ಸಂಚರಿಸುತ್ತದೆ. ಈ ರೈಲು ವಾರದ ಏಳು ದಿನವೂ ಕಾರ್ಯನಿರ್ವಹಿಸುತ್ತದೆ. ದೆಹಲಿಯಿಂದ ಜೈಪುರಕ್ಕೆ ಸುಮಾರು 3 ಗಂಟೆ 50 ನಿಮಿಷಗಳಲ್ಲಿ ತಲುಪಬಹುದು. AC ಚೇರ್ ಕಾರ್ ಟಿಕೆಟ್ ದರ 750 ರು. ರಿಂದ ಆರಂಭವಾಗಲಿದ್ದು, ಎಕ್ಸಿಕ್ಯೂಟಿವ್ ಕ್ಲಾಸ್ ದರ 1,486 ರು. ಇದೆ. ಪ್ರಯಾಣಿಕರು ಅಗತ್ಯವಿದ್ದರೆ IRCTC ಇ-ಕೇಟರಿಂಗ್ ಮೂಲಕ ಆಹಾರವನ್ನು ಬುಕ್ ಮಾಡಬಹುದು.