Wednesday, July 8, 2026
Wednesday, July 8, 2026

ಜಗನ್ನಾಥ ರಥಯಾತ್ರೆಗೆ ವಿಶೇಷ ರೈಲುಗಳು

ಭುವನೇಶ್ವರದ ರೈಲ್ ಸದನದಿಂದ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಈ ಮಾಹಿತಿ ನೀಡಿದ ಸಚಿವರು, ಹಬ್ಬಗಳ ಸಂದರ್ಭದಲ್ಲಿ ನಾಗರಿಕರಿಗೆ ಸುರಕ್ಷಿತ, ಕೈಗೆಟುಕುವ ಮತ್ತು ಸುಗಮ ಪ್ರಯಾಣದ ಸೌಲಭ್ಯವನ್ನು ಒದಗಿಸುವುದು ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.

ಒಡಿಶಾದ ಪುರಿಯಲ್ಲಿ ನಡೆಯುವ ವಿಶ್ವಪ್ರಸಿದ್ಧ ಜಗನ್ನಾಥ ರಥಯಾತ್ರೆ ಮತ್ತು ಕೇರಳದ ಸಾಂಪ್ರದಾಯಿಕ ಓಣಂ ಹಬ್ಬದ ಪ್ರಯುಕ್ತ ಪ್ರಯಾಣಿಕರ ದಟ್ಟಣೆಯನ್ನು ನಿಯಂತ್ರಿಸಲು ಭಾರತೀಯ ರೈಲ್ವೆಯು ನೂರಾರು ವಿಶೇಷ ರೈಲುಗಳನ್ನು ಕಾರ್ಯಾಚರಣೆಗೊಳಿಸಲಿದೆ. ಒಡಿಶಾದ ರಥಯಾತ್ರೆಗಾಗಿ 300 ಕ್ಕೂ ಹೆಚ್ಚು ವಿಶೇಷ ರೈಲುಗಳು ಮತ್ತು ಕೇರಳದ ಓಣಂ ಹಬ್ಬಕ್ಕಾಗಿ 100 ಕ್ಕೂ ಹೆಚ್ಚು ವಿಶೇಷ ರೈಲುಗಳನ್ನು ಓಡಿಸಲಾಗುವುದು ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಪ್ರಕಟಿಸಿದ್ದಾರೆ.

ಭುವನೇಶ್ವರದ ರೈಲ್ ಸದನದಿಂದ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಈ ಮಾಹಿತಿ ನೀಡಿದ ಸಚಿವರು, ಹಬ್ಬಗಳ ಸಂದರ್ಭದಲ್ಲಿ ನಾಗರಿಕರಿಗೆ ಸುರಕ್ಷಿತ, ಕೈಗೆಟುಕುವ ಮತ್ತು ಸುಗಮ ಪ್ರಯಾಣದ ಸೌಲಭ್ಯವನ್ನು ಒದಗಿಸುವುದು ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.

ಹಬ್ಬದ ಪ್ರಯಾಣಿಕರಿಗಾಗಿ ವಿಶೇಷ ರೈಲುಗಳ ಯೋಜನೆ:

ಜಗನ್ನಾಥ ರಥಯಾತ್ರೆ (ಒಡಿಶಾ): ಪುರಿ ರಥಯಾತ್ರೆಗಾಗಿ ಪ್ರಸ್ತುತ ಓಡುತ್ತಿರುವ 800 ಕ್ಕೂ ಹೆಚ್ಚು ನಿಯಮಿತ ರೈಲುಗಳ ಜತೆಗೆ ಹೆಚ್ಚುವರಿಯಾಗಿ 300ಕ್ಕೂ ಹೆಚ್ಚು ವಿಶೇಷ ರೈಲುಗಳನ್ನು ಓಡಿಸಲಾಗುತ್ತದೆ.

ಇದನ್ನೂ ಓದಿ: ಅಮರನಾಥ ಯಾತ್ರೆಯನ್ನು ಆಧ್ಯಾತ್ಮಿಕ ಪ್ರವಾಸೋದ್ಯಮದ ಮಾದರಿಯನ್ನಾಗಿ ರೂಪಿಸೋಣ

ಪುರಿ ನಿಲ್ದಾಣದಲ್ಲಿ ಬೃಹತ್ ವ್ಯವಸ್ಥೆ: ಭಕ್ತರ ಅತಿಯಾದ ದಟ್ಟಣೆಯನ್ನು ನಿರ್ವಹಿಸಲು ಪುರಿ ರೈಲ್ವೆ ನಿಲ್ದಾಣದಲ್ಲಿ ಸುಮಾರು 30,000 ಪ್ರಯಾಣಿಕರು ಏಕಕಾಲದಲ್ಲಿ ತಂಗಬಹುದಾದ ತಾತ್ಕಾಲಿಕ ವಿಶ್ರಾಂತಿ ಪ್ರದೇಶ (holding area), ಹೆಚ್ಚುವರಿ ಟಿಕೆಟ್ ಕೌಂಟರ್ ಮತ್ತು ಆಹಾರದ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ.

ಓಣಂ ಹಬ್ಬ: ಮುಂದಿನ ತಿಂಗಳು ಬರಲಿರುವ ಓಣಂ ಹಬ್ಬದ ಸಂದರ್ಭದಲ್ಲಿ ಕೇರಳದಾದ್ಯಂತ ಇರುವ ತಮ್ಮ ಸ್ವಂತ ಊರುಗಳಿಗೆ ತೆರಳುವ ಪ್ರಯಾಣಿಕರ ಅನುಕೂಲಕ್ಕಾಗಿ 100 ಕ್ಕೂ ಹೆಚ್ಚು ವಿಶೇಷ ರೈಲು ಸೇವೆಗಳನ್ನು ಒದಗಿಸಲಾಗುವುದು.

ದಾಖಲೆಯ ಬೇಸಗೆ ರೈಲುಗಳು: ಜೂನ್ 30 ಕ್ಕೆ ಕೊನೆಗೊಂಡ ಪ್ರಸಕ್ತ ವರ್ಷದ ಬೇಸಗೆಯ ಸೀಸನ್‌ನಲ್ಲಿ ಭಾರತೀಯ ರೈಲ್ವೆಯು ದಾಖಲೆಯ 15,000 ವಿಶೇಷ ರೈಲುಗಳನ್ನು ಯಶಸ್ವಿಯಾಗಿ ಓಡಿಸಿದೆ ಎಂದು ಸಚಿವರು ಮಾಹಿತಿ ನೀಡಿದರು.

ಹೊಸ ರೈಲುಗಳ ಲೋಕಾರ್ಪಣೆ ಮತ್ತು ವಿಸ್ತರಣೆ:

ಇದೇ ಸಂದರ್ಭದಲ್ಲಿ ಸಚಿವರು ದೇಶದ ವಿವಿಧ ಭಾಗಗಳ ಸಂಪರ್ಕವನ್ನು ವೃದ್ಧಿಸಲು ಪ್ರಮುಖ ರೈಲು ಸೇವೆಗಳನ್ನು ಉದ್ಘಾಟಿಸಿದರು:

  1. ನಾಂದೇಡ್-ಮುಂಬೈ ಎಕ್ಸ್‌ಪ್ರೆಸ್: ಈ ವಿಮಾನವು ಮಹಾರಾಷ್ಟ್ರದ ವಿದರ್ಭ ಮತ್ತು ಮರಾಠವಾಡ ಪ್ರದೇಶಗಳ ವಾಶಿಮ್, ಹಿಂಗೋಲಿ ಮತ್ತು ಬಾಸ್ಮತ್ ಜಿಲ್ಲೆಗಳ ಪ್ರಯಾಣಿಕರಿಗೆ ಮುಂಬೈ ಸಂಪರ್ಕವನ್ನು ಸುಲಭಗೊಳಿಸಲಿದೆ.
  2. ಟನಕ್‌ಪುರ-ನಾಂದೇಡ್ ಎಕ್ಸ್‌ಪ್ರೆಸ್: ಉತ್ತರ ಪ್ರದೇಶ ಮತ್ತು ಉತ್ತರಾಖಂಡದ ತೇರಾಯಿ ಪ್ರಾಂತ್ಯದಲ್ಲಿ ವಾಸಿಸುವ ಸಿಖ್ ಸಮುದಾಯದವರ ದೀರ್ಘಕಾಲದ ಬೇಡಿಕೆಯನ್ನು ಇದು ಈಡೇರಿಸಿದೆ. ಸಿಖ್ ಧರ್ಮದ ಪವಿತ್ರ ತಾಣವಾದ 'ಹಜೂರ್ ಸಾಹಿಬ್ʼಗೆ ಸಂಪರ್ಕ ಕಲ್ಪಿಸುವ ಮೂಲಕ 'ಪಂಜ್ ತಖ್ತ್' ಜತೆ ಜನರನ್ನು ಜೋಡಿಸಲು ಇದು ನೆರವಾಗಲಿದೆ. ಜತೆಗೆ ಈ ರೈಲಿಗೆ ಖತಿಮಾ ಮತ್ತು ಬನ್‌ಬಾಸಾಗಳಲ್ಲಿ ಸ್ಟಾಪೇಜ್ ನೀಡುವ ಬೇಡಿಕೆಯನ್ನು ಶೀಘ್ರದಲ್ಲೇ ಪರಿಶೀಲಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.
  3. ಸೇವೆಗಳ ವಿಸ್ತರಣೆ ಮತ್ತು ನಿಯಮಿತಗೊಳಿಸುವಿಕೆ: ಟನಕ್‌ಪುರ-ಪಿಲಿಭಿತ್ ಪ್ಯಾಸೆಂಜರ್ ರೈಲನ್ನು ಈಗ ಷಹಜಹಾನ್‌ಪುರದವರೆಗೆ ವಿಸ್ತರಿಸಲಾಗಿದೆ. ಹಾಗೆಯೇ, ಈ ಹಿಂದೆ ವಿಶೇಷ ರೈಲಾಗಿ ಚಲಿಸುತ್ತಿದ್ದ ಟನಕ್‌ಪುರ-ಆಗ್ರಾ ಸೇವೆಯನ್ನು ಈಗ ಕಾಯಂ ಅಥವಾ ನಿಯಮಿತ ಸೇವೆಯಾಗಿ ಪರಿವರ್ತಿಸಲಾಗಿದೆ.
Pramod Mohan Hegde

Pramod Mohan Hegde

A media professional with four years of experience in journalism, having worked with leading Kannada publications such as Vistara, Vijayavani, and Vijaya Karnataka as a cinema journalist. Also an author with a keen interest in travel and cinema. Currently serving as Senior Sub Editor at Pravasi Prapancha, contributing editorial expertise and engaging storytelling to the media industry.

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

Read Previous

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!

Read Next

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!