ವಿಂಟರ್ ಟೂರಿಸಂ ಉತ್ತೇಜನಕ್ಕೆ ಉತ್ತರಾಖಂಡ ಸಜ್ಜು
ಕೇದಾರಕಾಂಠಾ ಟ್ರೆಕ್ಗೆ ಪ್ರವೇಶ ದ್ವಾರವಾಗಿರುವ ಸಾಂಕ್ರಿ, ಇತ್ತೀಚಿನ ವರ್ಷಗಳಲ್ಲಿ ದೇಶಿ ಹಾಗೂ ವಿದೇಶಿ ಪ್ರವಾಸಿಗರ ನೆಚ್ಚಿನ ತಾಣವಾಗಿ ಹೊರಹೊಮ್ಮುತ್ತಿದೆ. ವಿಂಟರ್ ಟೂರಿಸಂ ಬೆಳವಣಿಗೆಯಿಂದ ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶಗಳು ಹೆಚ್ಚಾಗುತ್ತಿದ್ದು, ಹೋಮ್ಸ್ಟೇ, ಹೊಟೇಲ್, ಟ್ರೆಕ್ಕಿಂಗ್ ಮಾರ್ಗದರ್ಶಕರು ಮತ್ತು ಸ್ಥಳೀಯ ವ್ಯಾಪಾರಗಳಿಗೆ ಲಾಭವಾಗುತ್ತಿದೆ ಎಂದು ಮುಖ್ಯಮಂತ್ರಿ ಹೇಳಿದರು.
ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ರಾಜ್ಯದ ಉತ್ತರಕಾಶಿ ಜಿಲ್ಲೆಯ ಸಾಂಕ್ರಿ ಗ್ರಾಮದಲ್ಲಿ ವಿಂಟರ್ ಟೂರಿಸಂ ಮಹೋತ್ಸವವನ್ನು ಉದ್ಘಾಟಿಸಿದರು. ಈ ಮೂಲಕ ರಾಜ್ಯದಲ್ಲಿ ವಿಂಟರ್ ಟೂರಿಸಂ ಉತ್ತೇಜಿಸುವ ಸರಕಾರದ ಪ್ರಯತ್ನಕ್ಕೆ ಅಧಿಕೃತ ಚಾಲನೆ ದೊರೆತಿದೆ.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಧಾಮಿ, ವಿಂಟರ್ ಟೂರಿಸಂ ಅನ್ನು ಜನಾಂದೋಲನವಾಗಿ ರೂಪಿಸುವ ಅಗತ್ಯವಿದೆ ಎಂದು ಹೇಳಿದರು. ಉತ್ತರಾಖಂಡವು ವರ್ಷಪೂರ್ತಿ ಪ್ರವಾಸೋದ್ಯಮಕ್ಕೆ ಸೂಕ್ತವಾದ ರಾಜ್ಯವಾಗಿದ್ದು, ಚಳಿಗಾಲದಲ್ಲೂ ಪ್ರವಾಸಿಗರನ್ನು ಆಕರ್ಷಿಸಲು ಸಮರ್ಥ ಎಂದು ಅವರು ತಿಳಿಸಿದರು.

ಕೇದಾರಕಾಂಠಾ ಟ್ರೆಕ್ಗೆ ಪ್ರವೇಶ ದ್ವಾರವಾಗಿರುವ ಸಾಂಕ್ರಿ, ಇತ್ತೀಚಿನ ವರ್ಷಗಳಲ್ಲಿ ದೇಶಿ ಹಾಗೂ ವಿದೇಶಿ ಪ್ರವಾಸಿಗರ ನೆಚ್ಚಿನ ತಾಣವಾಗಿ ಹೊರಹೊಮ್ಮುತ್ತಿದೆ. ವಿಂಟರ್ ಟೂರಿಸಂ ಬೆಳವಣಿಗೆಯಿಂದ ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶಗಳು ಹೆಚ್ಚಾಗುತ್ತಿದ್ದು, ಹೋಮ್ಸ್ಟೇ, ಹೊಟೇಲ್, ಟ್ರೆಕ್ಕಿಂಗ್ ಮಾರ್ಗದರ್ಶಕರು ಮತ್ತು ಸ್ಥಳೀಯ ವ್ಯಾಪಾರಗಳಿಗೆ ಲಾಭವಾಗುತ್ತಿದೆ ಎಂದು ಮುಖ್ಯಮಂತ್ರಿ ಹೇಳಿದರು.
ಮಹೋತ್ಸವದ ಅಂಗವಾಗಿ ಸ್ಥಳೀಯ ಸಂಸ್ಕೃತಿ, ಜನಪದ ನೃತ್ಯ, ಸಂಗೀತ ಹಾಗೂ ಪಾರಂಪರಿಕ ಆಹಾರ ಪ್ರದರ್ಶನಗಳನ್ನು ಆಯೋಜಿಸಲಾಗಿದ್ದು, ಪ್ರವಾಸಿಗರ ಗಮನ ಸೆಳೆಯುತ್ತಿವೆ. ರಾಜ್ಯ ಸರಕಾರವು ಮುಂದಿನ ದಿನಗಳಲ್ಲಿ ಹರ್ಷಿಲ್, ಔಳಿ, ಮುನ್ಸಿಯಾರಿ ಸೇರಿದಂತೆ ಇತರ ಪರ್ವತ ಪ್ರದೇಶಗಳಲ್ಲಿ ಸಹ ವಿಂಟರ್ ಟೂರಿಸಂ ಚಟುವಟಿಕೆಗಳನ್ನು ವಿಸ್ತರಿಸಲು ಯೋಜನೆ ರೂಪಿಸಿದೆ.