Thursday, December 4, 2025
Thursday, December 4, 2025

ವಿಶಾಖಪಟ್ಟಣದಲ್ಲಿ ʼಪದ್ಮನಾಭಂ ಟೂರಿಸಂ ಸರ್ಕ್ಯುಟ್ʼ ಆರಂಭಕ್ಕೆ ಸಿದ್ಧತೆ

ಪದ್ಮನಾಭಂ ಮತ್ತು ಆನಂದಪುರಂ ಪ್ರದೇಶಗಳ ಸಾಂಪ್ರದಾಯಿಕ ದೇವಸ್ಥಾನಗಳು, ಐತಿಹಾಸಿಕ ತಾಣಗಳು, ನದಿ ತೀರದ ಸುಂದರ ಜಾಗಗಳು, ಸಮುದ್ರತೀರ ಪ್ರದೇಶಗಳನ್ನು ಈ ಟೂರಿಸಂ ಸರ್ಕ್ಯುಟ್‌ನ ಭಾಗವಾಗಿಸಲು ತೀರ್ಮಾನಿಸಲಾಗಿದೆ. ಈ ಮೂಲಕ ಭೇಟಿ ನೀಡುವ ಪ್ರವಾಸಿಗರಿಗೆ ನಗರದ ಸುಂದರ ಜಾಗಗಳ ವೀಕ್ಷಣೆಯೊಂದಿಗೆ ಹಳ್ಳಿ ಸೊಗಡಿನ ಸವಿಯನ್ನು ಉಣಬಡಿಸುವುದು ಈ ಯೋಜನೆಯ ಪ್ರಮುಖ ಉದ್ದೇಶ.

ಆಂಧ್ರಪ್ರದೇಶ ರಾಜ್ಯ ಸರಕಾರವು ಪದ್ಮನಾಭಂ ಮತ್ತು ಸಮೀಪದ ಆನಂದಪುರಂ ಪ್ರದೇಶಗಳನ್ನು ಒಳಗೊಂಡ ಹೊಸ ʼಪದ್ಮನಾಭಂ ಟೂರಿಸಂ ಸರ್ಕ್ಯುಟ್‌ʼ ನಿರ್ಮಾಣಕ್ಕೆ ಚಿಂತನೆ ನಡೆಸಿದೆ. ಈ ಬಗ್ಗೆ ಅಧ್ಯಯನ ಮುಂದುವರೆದಿದ್ದು, ಯೋಜನೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಕಾರ್ಯಸೂಚಿಗಳನ್ನು ನಿರ್ಮಿಸುವ ಚಟುವಟಿಕೆಗಳು ಚುರುಕಿನಿಂದ ಸಾಗಿವೆ.

ಪದ್ಮನಾಭಂ ಮತ್ತು ಆನಂದಪುರಂ ಪ್ರದೇಶಗಳ ಸಾಂಪ್ರದಾಯಿಕ ದೇವಸ್ಥಾನಗಳು, ಐತಿಹಾಸಿಕ ತಾಣಗಳು, ನದಿ ತೀರದ ಸುಂದರ ಜಾಗಗಳು, ಸಮುದ್ರತೀರ ಪ್ರದೇಶಗಳನ್ನು ಈ ಟೂರಿಸಂ ಸರ್ಕ್ಯುಟ್‌ನ ಭಾಗವಾಗಿಸಲು ತೀರ್ಮಾನಿಸಲಾಗಿದೆ. ಈ ಮೂಲಕ ಭೇಟಿ ನೀಡುವ ಪ್ರವಾಸಿಗರಿಗೆ ನಗರದ ಸುಂದರ ಜಾಗಗಳ ವೀಕ್ಷಣೆಯೊಂದಿಗೆ ಹಳ್ಳಿ ಸೊಗಡಿನ ಸವಿಯನ್ನು ಉಣಬಡಿಸುವುದು ಈ ಯೋಜನೆಯ ಪ್ರಮುಖ ಉದ್ದೇಶ.

Padmanabham tourism


ಜಿಲ್ಲಾ ಮತ್ತು ರಾಜ್ಯ ಪ್ರವಾಸೋದ್ಯಮ ಇಲಾಖೆ ಈ ಯೋಜನೆಗೆ ಸಂಬಂಧಿಸಿದಂತೆ ಮೂಲಸೌಕರ್ಯ ಅಭಿವೃದ್ಧಿ, ಪ್ರವಾಸಿಗರಿಗೆ ಅಗತ್ಯವಿರುವ ಸೌಕರ್ಯಗಳು, ರಾತ್ರಿ ಸಮಯದಲ್ಲಿ ಪ್ರವಾಸಿಗರು ಬೀಚ್‍ರೋಡ್ ಮೇಲೆ ಅಡ್ಡಾಡಲು ಬೆಳಕಿನ ವ್ಯವಸ್ಥೆ, ಪ್ರವಾಸಿಗರಿಗಾಗಿ ಮಾಹಿತಿ ಕೇಂದ್ರಗಳು ಮತ್ತು ಪ್ರವಾಸಿ ತಾಣಗಳ ಪ್ರವೇಶ ಮಾರ್ಗಗಳ ಸುಧಾರಣೆ ಸೇರಿದಂತೆ ವಿವಿಧ ಕಾರ್ಯಗಳನ್ನು ಆರಂಭಿಸಲು ಸಿದ್ಧವಾಗಿದೆ.

ಈ ಯೋಜನೆಯು ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸುವುದರ ಜತೆಗೆ ಆಂಧ್ರಪ್ರದೇಶದ ಪ್ರವಾಸೋದ್ಯಮಕ್ಕೆ ಚೈತನ್ಯ ತುಂಬಲಿದೆ ಎಂದು ರಾಜ್ಯ ಸರ್ಕಾರದ ಅಧಿಕಾರಿಗಳು ತಿಳಿಸಿದರು.

Soumya

Soumya

I am Soumya Shindhe, an engineering graduate with a strong passion for literature and journalism. I have contributed interview articles to Chittara cine magazine and possess keen interest in writing, communication, and creative expression, aspiring to grow professionally.

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

Read Previous

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!

Read Next

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!