ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಸಮೀಪದ ಯಾಣ ಗುಹೆಗಳನ್ನು ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾ (ಜಿಎಸ್‌ಐ) ರಾಷ್ಟ್ರೀಯ ಮಹತ್ವದ ಭೂ-ಪಾರಂಪರಿಕ ತಾಣವಾಗಿ ಅಧಿಕೃತವಾಗಿ ಘೋಷಿಸಿದೆ. ಜಿಎಸ್‌ಐಯ 176ನೇ ಸ್ಥಾಪನಾ ದಿನಾಚರಣೆಯ ಅಂಗವಾಗಿ ಈ ಘೋಷಣೆ ಮಾಡಲಾಗಿದ್ದು, ಈ ಕ್ರಮವನ್ನು ವೈಜ್ಞಾನಿಕ ಸಮುದಾಯವು ಸ್ವಾಗತಿಸಿದೆ. ಪಶ್ಚಿಮ ಘಟ್ಟಗಳೊಳಗೆ ನೆಲೆಸಿರುವ ಬಂಡೆಗಳು ಟೆಕ್ಟೋನಿಕ್ ಹವಾಮಾನ ಮತ್ತು ಕಾರ್ಸ್ಟ್ ಪ್ರಕ್ರಿಯೆಗಳಿಂದ ರೂಪುಗೊಂಡ ಭೂದೃಶ್ಯವಾಗಿದೆ. ಬೃಹತ್ ಕಪ್ಪು ಏಕಶಿಲೆಗಳು ಸುಮಾರು 2,700 ಮಿಲಿಯನ್ (270 ಕೋಟಿ) ವರ್ಷಗಳ ಹಿಂದೆ ರೂಪುಗೊಂಡ ಅಪರೂಪದ ಡೊಲೊಮಿಟಿಕ್ ಸುಣ್ಣದ ಕಲ್ಲುಗಳಾಗಿದ್ದು, ಇವುಗಳ ರಕ್ಷಣೆಗೆ ಈಗ ಕೇಂದ್ರ ಸರಕಾರದ ಬಲವಾದ ಕಾನೂನಿನ ಕವಚ ಸಿಕ್ಕಂತಾಗಿದೆ.