Thursday, June 12, 2025
Thursday, June 12, 2025

ಮರದಿಂದ ಚಿಮ್ಮುವ ನೀರು; ಇದು ʻಜೀವಂತ ಬಾವಿʼ..!

ಶತಶತಮಾನಗಳಿಂದ, ಮಧ್ಯಭಾರತ ಮತ್ತು ಕರ್ನಾಟಕದ ಕೆಲವು ಬುಡಕಟ್ಟು ಜನಾಂಗದವರು ಬೇಸಿಗೆ ಕಾಲದಲ್ಲಿ ನೈಸರ್ಗಿಕ ನೀರಿನ ಮೂಲವಾಗಿ ಮತ್ತಿ ಮರವನ್ನು ಅವಲಂಬಿಸಿದ್ದಾರೆ. ಮರದ ಕಾಂಡದಲ್ಲಿ ಉತ್ತಮ ಗುಣಮಟ್ಟದ ನೀರು ಸಂಗ್ರಹವಾಗುವ ವಿದ್ಯಮಾನ ವಿಸ್ಮಯಕಾರಿ. -‌ ಡಾ.ಕಾರ್ತಿಕ ಜೆ.ಎಸ್

ಭಾರತದ ಪಶ್ಚಿಮ ಕರಾವಳಿಯುದ್ದಕ್ಕೂ ಹರಡಿಕೊಂಡಿರುವ ಪಶ್ಚಿಮ ಘಟ್ಟಗಳು ನೋಡಲು ಎಷ್ಟು ಸುಂದರವೋ ಅಷ್ಟೇ ನಿಗೂಢಮಯವೂ ಹೌದು. ಅದು ತನ್ನೊಳಗೆ ಅನೇಕ ರಹಸ್ಯಗಳನ್ನು ಹುದುಗಿಸಿಟ್ಟುಕೊಂಡಿದೆ. ಇಲ್ಲಿರುವ ದಟ್ಟಾರಣ್ಯಗಳಲ್ಲಿ ಒಂದು ವಿಶಿಷ್ಟ ಮರವಿದೆ. ಈ ಮರವನ್ನು ಕೊರೆದರೆ ಸಾಕು, ನೀರು ಕಾರಂಜಿಯಂತೆ ಹೊರಚಿಮ್ಮುತ್ತದೆ! 'ಜೀವಂತ ಬಾವಿ' ಎಂದೇ ಗುರುತಿಸಲ್ಪಟ್ಟ ಈ ವಿಶಿಷ್ಟ ಮರವೇ 'ಮತ್ತಿ ಮರ'. ಈ ಮರ ಬಿರು ಬೇಸಿಗೆಯಲ್ಲಿ ಅರಣ್ಯವಾಸಿ ಗಳ ದಾಹ ತಣಿಸುವುದು ವಿಶೇಷ. ಮತ್ತಿ ಮರವು ಕೊಡಗಿನ ಸ್ಥಳೀಯ ಮರಗಳಲ್ಲಿ ಒಂದಾಗಿದೆ. ಈ ಮರದ ದಪ್ಪನೆಯ ತೊಗಟೆ ಮೊಸಳೆ ಚರ್ಮದಂತೆ ಬಿರುಕು ಬಿಟ್ಟಿದೆ. ಆದ್ದರಿಂದ ಈ ಮರವನ್ನು ಮೊಸಳೆ ತೊಗಟೆ ಮರ (ಕ್ರೋಕಡೈಲ್ ಬಾರ್ಕ್ ಟ್ರಿ) ಎಂದೂ ಕರೆಯುತ್ತಾರೆ.

ಮತ್ತಿ ಮರ

ವೈಜ್ಞಾನಿಕವಾಗಿ 'ಟರ್ಮಿನೇಲಿಯ ಟೊಮೆಂಟೋಸ' ಎಂದು ಕರೆಯಲ್ಪಡುವ ಮತ್ತಿ ಮರವು 'ಕೊಂಬ್ರೆಟೇಸಿಯ' ಕುಟುಂಬ ಕ್ಕೆ ಸೇರಿದೆ. ಮತ್ತಿ ಮರಕ್ಕೆ ತನ್ನ ಕಾಂಡದೊಳಗೆ, ವಿಶೇಷವಾಗಿ ಮಳೆಗಾಲದಲ್ಲಿ ನೀರನ್ನು ಶೇಖರಿಸಿಡುವ ಅಪರೂಪದ ಸಾಮರ್ಥ್ಯವಿದೆ. ಈ ಮರವು 4-6 ಲೀಟರ್‌ನಷ್ಟು ನೀರನ್ನು ಶೇಖರಿಸಿಡಬಲ್ಲದು. ಕುಡಿಯಲು ಯೋಗ್ಯವಾದ ಗುಣಮಟ್ಟ ವಿರುವ ಈ ನೀರಿಗೆ ಔಷಧೀಯ ಗುಣಗಳಿವೆ ಎಂದು ಗುರುತಿಸಲಾಗಿದೆ.

ಶತಶತಮಾನಗಳಿಂದ, ಮಧ್ಯಭಾರತ ಮತ್ತು ಕರ್ನಾಟಕದ ಕೆಲವು ಬುಡಕಟ್ಟು ಜನಾಂಗದವರು ಬೇಸಿಗೆ ಕಾಲದಲ್ಲಿ ನೈಸರ್ಗಿಕ ನೀರಿನ ಮೂಲವಾಗಿ ಮತ್ತಿ ಮರವನ್ನು ಅವಲಂಬಿಸಿದ್ದಾರೆ. ಮುಖ್ಯವಾಗಿ, ಕಾಡಿನಲ್ಲಿ ಬಹುಹೊತ್ತು ಕೆಲಸ ಮಾಡುವಾಗ ಅಥವಾ ನಡೆದು ಹೋಗುವಾಗ, ದಾಹವಾದರೆ, ಇದರ ಬೇಸಿಗೆ ಕಾಲದಲ್ಲಿ ನೈಸರ್ಗಿಕ ನೀರಿನ ಮೂಲವಾಗಿ ಮತ್ತಿ ಮರವನ್ನು ಅವಲಂಬಿಸಿದ್ದಾರೆ. ಮುಖ್ಯವಾಗಿ, ಕಾಡಿನಲ್ಲಿ ಬಹುಹೊತ್ತು ಕೆಲಸ ಮಾಡುವಾಗ ಅಥವಾ ನಡೆದು ಹೋಗುವಾಗ, ದಾಹವಾದರೆ, ಇದರ ಕಾಂಡದಿಂದ ಸಂಗ್ರಹಿಸಿದ ನೀರನ್ನು ಕುಡಿಯುವುದುಂಟು.

ಮತ್ತಿ ಮರದ ನೀರು ಸಂಗ್ರಹಣಾ ವ್ಯವಸ್ಥೆ ಕುತೂಹಲಕಾರಿ. ಮರದಲ್ಲಿರುವ ವಿಶೇಷ ಅಂಗಾಂಶಗಳು (ಕೈಲೆಮ್) ನೀರನ್ನು ಶೇಖರಿಸಿಡಲು ನೆರವಾಗುತ್ತದೆ. ಈ ಅಂಗಾಂಶಗಳು ನೀರಿರುವ ಸಂದರ್ಭ ಉಬ್ಬಿಕೊಳ್ಳುತ್ತವೆ ಮತ್ತು ನೀರಿನ ಕೊರತೆ ಇದ್ದಾಗ ಸಂಕುಚಿತಗೊಳ್ಳುತ್ತದೆ. ಇದರಿಂದಾಗಿ ಮರದಲ್ಲಿ ತೇವಾಂಶ ಉಳಿಯುತ್ತದೆ. ಈ ಮರದ ದಪ್ಪ ತೊಗಟೆ ಬೇಸಿಗೆ ಸಂದರ್ಭದಲ್ಲಿ ನೀರು ಆವಿಯಾಗುವುದನ್ನು ತಡೆಯುತ್ತದೆ. ಮತ್ತಿ ಮರವು ಆಳವಾದ ಮತ್ತು ವಿಸ್ತಾರವಾದ ಬೇರುಗಳನ್ನು ಹೊಂದಿದೆ. ಈ ಬೇರುಗಳು ಬೇಸಿಗೆ ಸಮಯದಲ್ಲಿ ಆಳವಾದ ಮಣ್ಣಿನ ಪದರದಲ್ಲಿರುವ ತೇವಾಂಶವನ್ನು ಹೀರಲು ನೆರವಾಗುತ್ತದೆ. ಈ ಮರದ ಎಲೆಗಳ ಮೇಲೆ ಮೇಲೆ ಮೇಣದ ಲೇಪನವಿದೆ. ಇದರಿಂದಾಗಿ ಬಾಷ್ಪೀಕರಣ ಪ್ರಕ್ರಿಯೆ ಕುಂಠಿತಗೊಳ್ಳುತ್ತದೆ ಎಂಬುದು ಸಸ್ಯಶಾಸ್ತ್ರಜ್ಞರ ಅಭಿಮತ.

ಆದಾಗ್ಯೂ ಈ ವಿಶಿಷ್ಟ ಮರದ ನೀರಿನ ಸಂಗ್ರಹಣಾ ವ್ಯವಸ್ಥೆಯ ಕುರಿತು ಇನ್ನಷ್ಟು ಅಧ್ಯಯನದ ಅವಶ್ಯಕತೆ ಇದೆ. ಇದೇ ರೀತಿ, ಕುಡಿಯಲು ಯೋಗ್ಯವಾದ ನೀರನ್ನು ನೀಡುವ ಬಳ್ಳಿಗಳೂ ನಮ್ಮ ರಾಜ್ಯದ ಕಾಡಿನಲ್ಲಿವೆ. ಮತ್ತಿ ಮರ ಬಹುಪಯೋಗಿ. ತನ್ನ ದೃಢತೆಯಿಂದಾಗಿ ಗೃಹ ನಿರ್ಮಾಣ ಕಾರ್ಯದಲ್ಲಿ ಹೆಚ್ಚಾಗಿ ಬಳಕೆಯಾಗುತ್ತದೆ. ಪ್ರಸ್ತುತ ಅರಣ್ಯನಾಶ ಮತ್ತು ಹವಾಮಾನ ವೈಪರೀತ್ಯದಿಂದಾಗಿ ಈ ಮರಗಳ ಸಂಖ್ಯೆ ಕುಸಿಯುತ್ತಿದೆ.

Bhagyalakshmi N

Bhagyalakshmi N

Travel blogger and adventurer passionate about exploring new cultures and sharing travel experiences.

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

Read Next

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..