ದೇವರ ನಾಡಿನಲ್ಲಿ ಕೆಎಸ್ಟಿಡಿಸಿ ಅಂಬಾರಿ….
ಕೆಎಸ್ಟಿಡಿಸಿ ವಿಶೇಷ ಟೂರ್ ಪ್ಯಾಕೇಜ್ನಡಿ ಪ್ರವಾಸಿಗರನ್ನು ಬರೋಬ್ಬರಿ ಒಂದು ವಾರದ ಕಾಲ ಮುನ್ನಾರ್ನತ್ತ ಕರೆದೊಯ್ಯಲಿದೆ. ಹೇಳಿ ಕೇಳಿ ಕೇರಳ ಇಡೀ ಪ್ರಕೃತಿಯ ಸೌಂದರ್ಯವನ್ನು ತನ್ನ ಸೆರಗಿನಲ್ಲಿ ಇಟ್ಟುಕೊಂಡಿದೆ. ಅದರಲ್ಲೂ ಮುನ್ನಾರ್ ನಿಸರ್ಗದ ಮಾಯಾ ಕಿನ್ನರಿ. ನಮ್ಮನ್ನು ನಾವು ಕಳೆದುಕೊಳ್ಳಲು ಇದು ಸುಂದರ ಅವಕಾಶ. ಫಾನ್ ಇನ್ ಲವ್ ವಿಥ್ ಮುನ್ನಾರ್ ಎಂದು ಹೇಳಬೇಕಷ್ಟೇ.
ಪ್ರವಾಸವೆಂದರೆ ಪ್ರಯಾಸವನ್ನು ಕಳೆಯುವುದು ಎಂಬುದನ್ನು ಅರ್ಥ ಮಾಡಿಕೊಂಡಿದ್ದೀರಿ ಅಲ್ಲವೇ? ಜೀವನದ ಜಂಜಾಟಗಳನ್ನು ಪಕ್ಕಕ್ಕೆ ಒಗೆದು ಆರಾಮವಾಗಿ ಜೀವಿಸುವ, ನಗರದ ಗದ್ದಲಗಳನ್ನು ನೂಕಿ ನಗಿಸುವ, ಪ್ರತಿದಿನದ ಸಂಕಟಗಳನ್ನು ಮರೆಸುವ ಜೀವನಪ್ರೀತಿ ಮತ್ತು ಜೀವನೋತ್ಸಾಹ ಅರಳುವಂತೆ ಮಾಡುವ ಒಂದು ಸಾಧನವೆಂದರೆ ಅದು ಪ್ರವಾಸ. ಇಷ್ಟಬಂದಂತೆ ಓಡಾಡುವುದು ಪ್ರವಾಸವಲ್ಲ. ನಮ್ಮನ್ನು ಮಾನಸಿಕ ಮತ್ತು ಬೌದ್ಧಿಕ ಶ್ರೀಮಂತರನ್ನಾಗಿಸುವುದು ಪ್ರವಾಸ. ನಾವು ಏನನ್ನು ನೋಡುತ್ತೇವೆ, ಏನನ್ನು ಅಲ್ಲಿ ತಿಳಿಯುತ್ತೇವೆ ಮತ್ತು ಇನ್ನೇನನ್ನು ಮಾಡುತ್ತೇವೆ ಎಂಬುದು ಬಹಳ ಮುಖ್ಯ.
ಬಂದ ಪುಟ್ಟ ಹೋದ ಪುಟ್ಟ ಎನ್ನುವಂತೆ ನೀವು ಪ್ರವಾಸ ಮಾಡಿದರೆ ಅದು ನಿಜವಾದ ಪ್ರವಾಸವಲ್ಲ. ಅದಕ್ಕೆ ಸ್ಥಳೀಯತೆಯ ಸ್ವಾದ ಬೇಕೇಬೇಕು. ನೋಟ ಅದೂ ಕೇವಲ ಕಲ್ಲು, ಮಣ್ಣು, ಪ್ರಾಣಿಗಳನ್ನು ನೋಡುವುದಲ್ಲ. ಅಲ್ಲಿನ ಇತಿಹಾಸ, ವನವಾಸ ಅಷ್ಟೇಕೆ ಜನಮನಗಳನ್ನೂ ನೋಡಬೇಕು. ನಮ್ಮ ನಾಡೇ ನಮಗೆ ಈ ಎಲ್ಲ ಅವಕಾಶಗಳನ್ನು ನೀಡುತ್ತದೆ. ಇಲ್ಲಿ ವೈವಿಧ್ಯ ಜನಾಂಗಗಳಿವೆ, ವೈವಿಧ್ಯ ಭೌಗೋಳಿಕ ವಾತಾವರಣಗಳಿವೆ. ಕರ್ನಾಟಕದ ಆಚೆಗೂ ನಮ್ಮನ್ನು ಚೈತನ್ಯ ರೂಪಿಯಾಗಿಸಬಲ್ಲ ತಾಣಗಳಿವೆ. ಓಕೆ ಸರ್, ಅಂಥ ತಾಣಗಳಿಗೆ ನಮ್ಮನ್ನು ಕೈಗೆಟುಕುವ ಹಣದಲ್ಲಿ ಕರೆದೊಯ್ಯುವವರು ಯಾರು? ಎಂದು ಕೇಳಿದ್ರಾ? ನಮ್ಮಂಥವರಿಗಾಗಿಯೇ ಕೆಎಸ್ಟಿಡಿಸಿ ಇದೆ. ನಾಡು, ಹೊರನಾಡು ಎಲ್ಲ ಕಡೆಗೂ ನಮ್ಮನ್ನು ಕರೆದೊಯ್ಯುತ್ತದೆ. ಸರ್ವವನ್ನೂ ಅರಿತ ಸರ್ವಜ್ಞನಂತೆ ಕೆಎಸ್ಟಿಡಿಸಿ ನಿಮ್ಮನ್ನು ಮುನ್ನಡೆಸುತ್ತದೆ. ಪ್ರವಾಸದಲ್ಲಿ ನೀವು ಕಂಡು, ಕೇಳಿ, ಅನುಭವಿಸಿ ಅರಿತು ಅಳವಡಿಸಿಕೊಳ್ಳಬಹುದಾದ ಹಲವು ವಿಷಯಗಳನ್ನು ಮರಳಿ ಬರುವಾಗ ಹೊತ್ತು ತರುತ್ತೀರಿ. ಅಷ್ಟರಮಟ್ಟಿಗೆ ಪ್ರವಾಸಿ ತಾಣವೊಂದರ ಪ್ರಸ್ತುತ ಮತ್ತು ಪುರಾತನ ಸ್ಥಿತಿಗತಿಗಳನ್ನು ಕೆಎಸ್ಟಿಡಿಸಿ ಬಲ್ಲದು. ನುರಿತ ಟೂರ್ ಗೈಡ್ಗಳು ನಿಮಗೆ ಮಾರ್ಗದರ್ಶನ ನೀಡುತ್ತಾರೆ. ಇಂಥ ಪ್ರವಾಸಕ್ಕೆ ಸಹಕರಿಸುವ ಹಲವು ಇತಿಹಾಸ, ವನವಾಸ, ಊಟೋಪಚಾರ, ಆಚರಣೆ, ಸಂಸ್ಕೃತಿ, ಉಡುಗೆ-ತೊಡುಗೆ, ಸ್ಥಳ ಪುರಾಣಗಳನ್ನು ಪರಿಚಯಿಸುತ್ತಾ ನಿಮ್ಮನ್ನು ಸುತ್ತಿಸುತ್ತಾರೆ. ಆಯಾಸ ಮರೆಸಲು ಮನಮೋಹಿಸುವ ತಾಣಗಳಲ್ಲಿ ಉಳಿದುಕೊಳ್ಳಲು ವಾಸ್ತವ್ಯಗಳನ್ನು ಕಲ್ಪಿಸಿ ಕೆಎಸ್ಟಿಡಿಸಿ ಈಗಾಗಲೇ ಜನಮನಗಳನ್ನು ಗೆದ್ದಿದೆ.

ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಈ ಕಾರ್ಯಕ್ಕೆ ಈಗಾಗಲೇ ಹಲವು ವರ್ಷಗಳ ಇತಿಹಾಸವಿದೆ. ಹೀಗೆಂದ ಮೇಲೆ ಇನ್ನೂ ಹೇಳುವ ಅವಶ್ಯಕತೆಯಿಲ್ಲ. ರಾಜ್ಯದಲ್ಲಿನ ಎಲ್ಲಾ ಪ್ರವಾಸಿ ತಾಣಗಳನ್ನು ಬಲ್ಲ ಅನುಭವಿ ನಿಮ್ಮ ಕೈಹಿಡಿದು ನಡೆಸುತ್ತಾನೆ ಎಂದಮೇಲೆ ಮತ್ತೆ ಕಾಯುವುದೇಕೆ? ನಮ್ಮ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ತೋರಿಸದ ತಾಣವಿಲ್ಲ. ಪ್ರವಾಸಿ ತಾಣಗಳ ನೈಜ ಸ್ಥಳೀಯತೆಯ ಸ್ವಾದವನ್ನು ನಿಮಗೆ ನೀಡುವ ತವಕದಲ್ಲಿದೆ. ನಿಮಗೆ ಗೊತ್ತಾ? ನಮ್ಮ ಕೆಎಸ್ಟಿಡಿಸಿ ಈಗ ದಾಪುಗಾಲು ಇಟ್ಟಿದೆ. ಕರ್ನಾಟಕಕ್ಕಷ್ಟೇ ಸೀಮಿತವಾಗಿದ್ದ ಪ್ರವಾಸಗಳು ಈಗ ಹೊರ ರಾಜ್ಯದತ್ತಲೂ ಸಾಗಿದೆ. ಕರ್ನಾಟಕದ ಪ್ರವಾಸಿಗರಿಗೆ ಬೇರೆ ರಾಜ್ಯಗಳ ಅದ್ಭುತ ಪ್ರವಾಸಿ ತಾಣಗಳನ್ನು ತೋರಿಸುವ ಇಂಗಿತ ಕೆಎಸ್ಟಿಡಿಸಿಯದ್ದು. ಹಾಗಾಗಿ ವಿಶೇಷ ಟೂರ್ ಪ್ಯಾಕೇಜ್ನಡಿ ಪ್ರವಾಸಿಗರನ್ನು ಬರೋಬ್ಬರಿ ಒಂದು ವಾರದ ಕಾಲ ಮುನ್ನಾರ್ನತ್ತ ಕರೆದೊಯ್ಯಲಿದೆ.
ಹೇಳಿ ಕೇಳಿ ಕೇರಳ ಇಡೀ ಪ್ರಕೃತಿಯ ಸೌಂದರ್ಯವನ್ನು ತನ್ನ ಸೆರಗಿನಲ್ಲಿ ಇಟ್ಟುಕೊಂಡಿದೆ. ಅದರಲ್ಲೂ ಮುನ್ನಾರ್ ನಿಸರ್ಗದ ಮಾಯಾ ಕಿನ್ನರಿ. ನಮ್ಮನ್ನು ನಾವು ಕಳೆದುಕೊಳ್ಳಲು ಇದು ಸುಂದರ ಅವಕಾಶ. ಫಾನ್ ಇನ್ ಲವ್ ವಿಥ್ ಮುನ್ನಾರ್ ಎಂದು ಹೇಳಬೇಕಷ್ಟೇ. ʼಪರವಶನಾದೆನು ಅರಿಯುವ ಮುನ್ನವೇʼ ಎಂದು ಮುನ್ನಾರ್ನ ಬೆಟ್ಟಗಳ ತುದಿಯಲ್ಲಿ ನಿಂತು ದನಿ ಬಿಚ್ಚಿ ಹಾಡಬೇಕು. ಮುನ್ನಾರ್ಗೆ ಹೋದ ಮೇಲೆ ಬೋಟ್ ಹೌಸ್ ಇದ್ದೇ ಇರುತ್ತದೆ. ಅದರ ಅನುಭವವಂತೂ ಸ್ವರ್ಗಕ್ಕೆ ಕಿಚ್ಚು ಹಚ್ಚಿದಂತೆ. ಮುನ್ನಾರ್ ಅನ್ನು ಎಷ್ಟು ವರ್ಣಿಸಿದರೂ ಪದಗಳು ಮುಗಿಯುವುದಿಲ್ಲ. ಜಗತ್ತಿನ ಹಲವು ಅದ್ಭುತ ಸೃಷ್ಟಿಗಳಲ್ಲಿ ಮುನ್ನಾರ್ ಕೂಡ ಒಂದು. ಅದಕ್ಕೆ ಅಲ್ಲವೇ ನಮ್ಮ ಕ್ರೇಜಿ ಯುವಕರು ಅತ್ತ ಕಡೆಗೆ ಪ್ರಯಾಣ ಬೆಳೆಸುವುದು.

ಕಳೆದು ಹೋಗುವ ಮುನ್ನ
ಕೇರಳದ ಅತ್ಯಂತ ಪ್ರಸಿದ್ಧ ಗಿರಿಧಾಮಗಳಲ್ಲಿ ಮುನ್ನಾರ್ ಕೂಡ ಒಂದು. ಮುನ್ನಾರ್ ಹೆಸರು ಕೇಳದ ಪ್ರವಾಸ ಪ್ರಿಯರು ಯಾರೊಬ್ಬರೂ ಇರಲಿಕ್ಕಿಲ್ಲ. ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುವಂಥ ಅದ್ಭುತ ತಾಣವಿದು. ಇಡುಕ್ಕಿ ಜಿಲ್ಲೆಯ ಜನಪ್ರಿಯ ತಾಣವಿದು. ಸಮುದ್ರಮಟ್ಟದಿಂದ ಸರಿ ಸುಮಾರು 1,600 ಮೀಟರ್ ಎತ್ತರದಲ್ಲಿ ಪಶ್ಚಿಮ ಘಟ್ಟಗಳ ಪರ್ವತ ಶ್ರೇಣಿಯಲ್ಲಿರುವ ಮುನ್ನಾರ್ ದಕ್ಷಿಣ ಭಾರತದ ಕಾಶ್ಮೀರ. ಕಾಶ್ಮೀರ ಪ್ರವಾಸದಲ್ಲಿ ಸಿಗುವ ಮಜವಾದ ಅನುಭೂತಿ ಮುನ್ನಾರ್ನಲ್ಲೂ ಸಿಗುತ್ತದೆ ಎಂದರೆ ಖಂಡಿತ ಅತಿಶಯ ಆಗಲಾರದು.
ದಿನ-1
ಸಂಜೆ 7.00 ಗಂಟೆಗೆ ಕೆಎಸ್ಟಿಡಿಸಿ ಬುಕಿಂಗ್ ಕೌಂಟರ್, ಬಿಎಂಟಿಸಿ ಬಸ್ ನಿಲ್ದಾಣ ಯಶವಂತಪುರದಿಂದ ಹೊರಡಲಾಗುತ್ತದೆ.
ದಿನ-2
ಬೆಳಗ್ಗೆ 6.00-8.00 ರವರೆಗೆ ತೇಣಿಯಲ್ಲಿ ಉಪಾಹಾರ
ಬೆಳಗ್ಗೆ 9.30-12.30 ರವರೆಗೆ ತೇಕ್ಕಡಿ ಅರಣ್ಯ ಭೇಟಿ
ಮಧ್ಯಾಹ್ನ 1.00-2.00 ರವರೆಗೆ ಊಟ
2.00-4.00 ರವರೆಗೆ ಸ್ಪೈಸಸ್ ಗಾರ್ಡನ್ಸ್ಗೆ ಭೇಟಿ
ಸಂಜೆ 4.30 ರವರೆಗೆ ಕುಮಿಲಿ ಹೊಟೇಲ್ನಲ್ಲಿ ವಾಸ್ತವ್ಯ
ದಿನ-3
ಬೆಳಗ್ಗೆ 5.30 ಕುಮಿಲಿಯಿಂದ ಹೊರಡಲಾಗುತ್ತದೆ
ಬೆಳಗ್ಗೆ 8.00 - 9.00 ಉಪಹಾರ
ಮಧ್ಯಾಹ್ನ 12.00 - 4.00 ಕುಮಾರ್ಕಮ್ ಮತ್ತು ಅಲೆಪ್ಪಿಯಲ್ಲಿ ಬೋಟ್ ವ್ಯೂವ್(ವೆಂಬನಾಡ್ ಸರೋವರ ವ್ಯೂವ್ , ಪ್ಯಾಡಿ ಫೀಲ್ಡ್ ಸ್ನೇಕ್ ವೀಕ್ಷಣೆ, ಹಿನ್ನೀರು) ಅಲೆಪ್ಪಿ ಹೌಸ್ ಬೋಟ್ನಲ್ಲಿ ವಾಸ್ತವ್ಯ.
ದಿನ-4
ಬೆಳಗ್ಗೆ 6.00 ಗಂಟೆಗೆ ಬೋಟ್ ಹೌಸ್ ನಿಂದ ಹೊರಡಲಾಗುತ್ತದೆ
ಬೆಳಗ್ಗೆ 8.00 - 8.45 ಉಪಾಹಾರ
1.00 - 1.45 ಮುನ್ನಾರ್ ನಲ್ಲಿರುವ ಬ್ಲಾಸಮ್ ಪಾರ್ಕ್ಗೆ ಭೇಟಿ
ಮಧ್ಯಾಹ್ನ 2.00 - 2.30 ಗಂಟೆಗೆ ಊಟ
3.00 - 5.00 ಗಂಟೆಗೆ ರಾಜಮಲೈ ಅರಣ್ಯಕ್ಕೆ ಭೇಟಿ
ಸಂಜೆ 5.30 ಗಂಟೆಗೆ ಮುನ್ನಾರ್ ನಲ್ಲಿ ವಾಸ್ತವ್ಯ
ದಿನ-5
ಬೆಳಗ್ಗೆ 8.00 ಉಪಾಹಾರ
ಬೆಳಗ್ಗೆ 8.30 - ಮಧ್ಯಾಹ್ನ 3.30 ಮುನ್ನಾರ್ ವ್ಯೂವ್, ಮಡುಪಟ್ಟಿ ಡ್ಯಾಮ್, ಇಕೋ ಪಾಯಿಂಟ್ಸ್, ಟಾಟಾ ಟೀ ಎಸ್ಟೇಟ್, ಕುಂಡಲಿ ಡ್ಯಾಮ್ ಮತ್ತು ಮಧ್ಯಾಹ್ನದ ಹೊತ್ತಿಗೆ ಊಟ
3.30 - ಸಂಜೆ 4.00 ಮುನ್ನಾರ್ ಸಿಟಿಯ ಕಡೆಗೆ
ಸಂಜೆ 4.00 ಮುನ್ನಾರ್ನಿಂದ ಹೊರಡಲಾಗುತ್ತದೆ
ದಿನ-6(ಪ್ರವಾಸ ಮುಕ್ತಾಯ)
ಬೆಳಗ್ಗೆ 6.00 ಗಂಟೆಗೆ ಬೆಂಗಳೂರಿಗೆ ತಲುಪಲಾಗುತ್ತದೆ.
ಇಲ್ಲಿ ಗಮನಿಸಿ
ಕೆಎಸ್ಟಿಡಿಸಿ ಬುಕ್ ಮಾಡುವವರಿಗೆ ವಿಶೇಷ ಅವಕಾಶಗಳಿವೆ.
ಡಿಲಕ್ಸ್ ಎಸಿ ಬಸ್ನಲ್ಲಿ ಆರಾಮದಾಯಕ ಮತ್ತು ಸುಖಕರ ಪ್ರಯಾಣ.
ಆಯ್ಕೆ ಮಾಡಿಕೊಂಡ ಪ್ಯಾಕೇಜ್ ಅನ್ವಯ ಪ್ರವಾಸ
ರಾಜ್ಯ, ಕೇಂದ್ರ ಮತ್ತು ಸಾರ್ವಜನಿಕ ವಲಯದ ಉದ್ಯೋಗಿಗಳಿಗೆ ಎಲ್ಟಿಸಿ ಸೌಲಭ್ಯ
ಕೆಎಸ್ಟಿಡಿಸಿ ನಿಮ್ಮ ಆಯ್ಕೆಯಾಗಲಿ
ಕೆಎಸ್ಟಿಡಿಸಿಯ ಪ್ಯಾಕೇಜ್ ಬಜೆಟ್ ಸ್ನೇಹಿಯಾಗಿದೆ.
ಪ್ರವಾಸಿಗರಿಗೆ ಆರಾಮದಾಯಕ, ಸುರಕ್ಷಿತ ಮತ್ತು ಸುಸಜ್ಜಿತ ಯೋಜಿತ ಪ್ರವಾಸದ ಭರವಸೆಯನ್ನು ನೀಡುತ್ತದೆ.
ಆರಾಮದಾಯಕ ಪ್ರಯಾಣ:
ಆಧುನಿಕ ಬಸ್ಗಳು ಮತ್ತು ಅನುಭವಿ ಚಾಲಕರೊಂದಿಗೆ ಇಡೀ ದಿನ ಸುರಕ್ಷಿತ ಪ್ರಯಾಣ ಮಾಡಬಹುದು.
ವಿಶೇಷ ಗೈಡ್ಗಳು:
ತಾಣಗಳ ಇತಿಹಾಸ ಮತ್ತು ಮಹತ್ವವನ್ನು ವಿವರಿಸುವ ತಜ್ಞ ಗೈಡ್ಗಳು ಪ್ರವಾಸಿಗರೊಂದಿಗೆ ಇರುತ್ತಾರೆ.
ಸಮಗ್ರ ಯೋಜನೆ
ಪ್ಯಾಕೇಜ್ನಲ್ಲಿ ಇರುವ ಎಲ್ಲ ತಾಣಗಳನ್ನೂ ಮನತಣಿಯುವವರೆಗೂ ನೋಡಬಹುದು. ಹಿತಾನುಭವ ಪಡೆಯಬಹುದು. ಸಮಯದ ಪ್ಲ್ಯಾನಿಂಗ್ ಕೂಡ ಅತ್ಯಂತ ಶಿಸ್ತಿನಿಂದ ರೂಪಿಸಿರಲಾಗುತ್ತದೆ.
ಕೈಗೆಟುಕುವ ಬೆಲೆ
ಎಲ್ಲರಿಗೂ ಒಗ್ಗುವ, ಮಧ್ಯಮ ವರ್ಗದವರ ಕನಸು ನನಸು ಮಾಡುವ, ಕೈಗೆಟುಕುವ ದರದಲ್ಲಿ ಪ್ರಯಾಣ ಸೇವೆ ಸಿಗುತ್ತದೆ. ಮತ್ತೇನು ಯೋಚನೆ ಮಾಡ್ತಿದ್ದೀರಿ? ಕೆಎಸ್ಟಿಡಿಸಿ ನಿಮ್ಮ ಪ್ರವಾಸ ಸಂಗಾತಿ. ಈಗಲೇ ಬುಕ್ ಮಾಡಿ. ಹೊರಡಿ. ಜಗತ್ತು ಕೈ ಬೀಸಿ ಕರೆಯುತ್ತಿದೆ.
ಮೇಕೆದಾಟುವಿನಲ್ಲಿ ಮಯೂರ ಸಂಗಮ

ಆತಿಥ್ಯಕ್ಕೆ ಮಯೂರ ಕರ್ನಾಟಕದಾದ್ಯಂತ ಹೆಸರುವಾಸಿಯಾಗಿದೆ. ದೇಶ-ವಿದೇಶದಿಂದ ಬರುವ ಪ್ರವಾಸಿಗರು ಮಯೂರವನ್ನು ಮೆಚ್ಚಿಕೊಂಡು ಅಪ್ಪಿಕೊಂಡಿದ್ದಾರೆ. ಶುಚಿ ಮತ್ತು ರುಚಿಯಾದ ಊಟದ ಜತೆಗೆ ಪ್ರವಾಸಿಗನ ಎಲ್ಲ ಬೇಕು ಬೇಡಗಳನ್ನು ಮಯೂರ ಈಡೇರಿಸುತ್ತದೆ. ಊಟೋಪಚಾರದ ಜತೆಗೆ ಆಟೋಪಾಟ ಚಟುವಟಿಕೆಗಳು, ಮನರಂಜಿಸುವ ಸುತ್ತಮುತ್ತಲಿನ ಹಿತವಾದ ವಾತಾವರಣ ಪ್ರವಾಸಿಗನ ಮನಸೆಳೆಯುತ್ತವೆ. ರಾಜ್ಯದ ಮೂಲೆ ಮೂಲೆಯಲ್ಲೂ ಹೊಟೇಲ್ ಮಯೂರ ಮನೆ ಮಾತಾಗಿದೆ. ಮಯೂರವೆಂದರೆ ಅದು ಬಜೆಟ್ ಫ್ರೆಂಡ್ಲಿ ಹೊಟೇಲ್ ಎಂದು ಪ್ರತಿಯೊಬ್ಬರೂ ಹೇಳುತ್ತಾರೆ. ಹತ್ತಾರು ವರ್ಷಗಳಿಂದ ಹೊಟೇಲ್ ಉದ್ಯಮದ ರಾಜನಂತೆ ಕಾರ್ಯ ನಿರ್ವಹಿಸುತ್ತಿದ್ದು, ಅಷ್ಟು ಜಾಗಗಳ, ಅಷ್ಟು ವರ್ಷಗಳ ಅನುಭವದ ಬುತ್ತಿಯೊಂದಿಗೆ ಮಯೂರ ತನ್ನಲ್ಲಿಗೆ ಬರುವ ಪ್ರವಾಸಿಯನ್ನು ಉಪಚರಿಸುತ್ತದೆ. ಹೀಗಾಗಿಯೇ ಇಷ್ಟು ಆತಿಥ್ಯ ಕ್ಷೇತ್ರದಲ್ಲಿ ಎಷ್ಟೋ ಸಂಸ್ಥೆಗಳು ಅವಿರತ ಶ್ರಮಿಸುತ್ತಿದ್ದರೂ ಅವುಗಳಿಗಿಂತ ಕೊಂಚ ಭಿನ್ನ ಮತ್ತು ವಿಭಿನ್ನವಾಗಿ ಮಯೂರ ತಲೆಯೆತ್ತಿ ನಿಂತಿದೆ. ಇಲ್ಲಿ ವಾಸ್ತವ್ಯಕ್ಕಂತೂ ಹೇಳಿ ಮಾಡಿಸಿದ ವಾತಾವರಣ ಇದೆ. ಅಲ್ಲಿನ ಸಿಬ್ಬಂದಿ ತಕ್ಷಣಕ್ಕೆ ಆತ್ಮೀಯರಾಗಿ ಸತ್ಕರಿಸುತ್ತಾರೆ. ಕೆಎಸ್ಟಿಡಿಸಿ ಪ್ಯಾಕೇಜ್ನಡಿ ಪ್ರವಾಸಕ್ಕೆ ಹೊರಡುವ ಎಲ್ಲ ಪ್ರವಾಸಿಗನಿಗೂ ಹೊಟೇಲ್ ಮಯೂರದಲ್ಲಿ ರಾಜಾತಿಥ್ಯವಿದೆ. ಇನ್ನು ಪ್ರತಿ ಜಿಲ್ಲೆಯಲ್ಲೂ ಮಯೂರ ಹೊಟೇಲ್ನ ಶಾಖೆಗಳಿವೆ. ಹಲವರಿಗೆ ಮೇಕೆದಾಟು ಗೊತ್ತೇ ಇದೆ. ಒಂದಿಷ್ಟು ಕಾರಣಗಳಿಂದಾಗಿ ಅದರಲ್ಲೂ ನೀರಾವರಿ ವಿಚಾರದಲ್ಲಿ ಮೇಕೆದಾಟು ಹೆಸರುವಾಸಿ. ಮೇಕೆದಾಟುವಿನಲ್ಲೂ ಮಯೂರ ತನ್ನ ಕಬಂಧ ಬಾಹುವನ್ನು ಚಾಚಿ ಪ್ರವಾಸಿ ಅತಿಥಿಗಳನ್ನು ಆಲಿಂಗಿಸುತ್ತಿದೆ. ಕನಕಪುರ ತಾಲೂಕು, ರಾಮನಗರ ಜಿಲ್ಲೆಗೆ ಅಂಟಿಕೊಂಡಿರುವ ಈ ಮಯೂರ ಸಂಗಮ ಆಕರ್ಷಕವಾಗಿದೆ. ನೀವು ಬೆಂಗಳೂರಿಗೆ ಹೋಗುವುದಾದರೆ ತಪ್ಪದೇ ಕನಕಪುರಕ್ಕೆ ಹೋಗಬೇಕು. ಅಲ್ಲಿಂದ ಸಂಗಮಕ್ಕೆ ಹೋಗಿ. ಅರ್ಕಾವತಿ ಕಾವೇರಿಯೊಂದಿಗೆ ವಿಲೀನಗೊಂಡು ನಂತರ ಮೇಕೆದಾಟುವಿಗೆ ತಲುಪುವ ಸ್ಥಳ ಇದು. ಈ ಸ್ಥಳಕ್ಕೆ ಒಂದು ಪೌರಾಣಿಕ ಕಥೆಯೂ ಇದೆ. ಕಾವೇರಿಯನ್ನು ದಾಟಲು ಶಿವನು ಮೇಕೆ ವೇಷ ಹಾಕಿದ್ದ ಎನ್ನಲಾಗುತ್ತದೆ. ಹಾಗಾಗಿ ಇದನ್ನು ಮೇಕೆದಾಟು ಹೆಸರಿನಿಂದ ಕರೆಯಲಾಗುತ್ತದೆ. ಇನ್ನು ಹೊಟೇಲ್ ಮಯೂರ ಸಂಗಮವು ಮೇಕೆದಾಟುವಿಗೆ ತೀರಾ ಹತ್ತಿರದಲ್ಲಿದೆ. ಹೊಟೇಲ್ನಲ್ಲಿ 10 ಹವಾನಿಯಂತ್ರಿತ ರೂಮ್ಸ್, 4 ಡಬಲ್ ರೂಮ್ಗಳು ಮತ್ತು 14 ಹಾಸಿಗೆಗಳ 1 ಡಾರ್ಮಿಟರಿಯಿಂದ ಹಿಡಿದು ವಿವಿಧ ವಸತಿ ಆಯ್ಕೆಗಳನ್ನು ಒದಗಿಸುತ್ತದೆ.
ಹತ್ತಿರದಲ್ಲಿರುವ ಪ್ರೇಕ್ಷಣೀಯ ಸ್ಥಳಗಳು
ಮೇಕೆದಾಟು
ಚುಂಚಿ ಜಲಪಾತ
ಸಂಪರ್ಕ:
Yogesh MK
Manager (Tours)
Mob No: +91 960 6987 822 | Email ID: tour.manager@kstdc.co
Karnataka State Tourism Development Corporation Ltd. (KSTDC)
Corporate Office: 5th Floor | Indhana Bhavan|Race Cource Road | Opposite to Renaissance Hotel,
Bangalore- 560009 | Karnataka | India
Office: 080-43344334 | Fax: 080-43344376
Email: feedback@kstdc.co | info@kstdc.co | website: www.kstdc.co | www.goldenchariot.org