ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿರುವ ಮಾತಾ ವೈಷ್ಟೋ ದೇವಿಯ ಗುಹಾ ದೇವಾಲಯ ಯಾತ್ರೆಯು ಭಾರಿ ಮಳೆಯ ಕಾರಣದಿಂದ ಮತ್ತೆ ಸ್ಥಗಿತಗೊಂಡಿದೆ. ಹಲವು ಸಾವು-ನೋವುಗಳಿಗೆ ಕಾರಣವಾಗಿದ್ದ ಭೀಕರ ಭೂಕುಸಿತದಿಂದಾಗಿ ಕೆಲವು ದಿನ ನಿಂತಿದ್ದ ಯಾತ್ರೆ ಭಾನುವಾರ ಪುನರಾರಂಭಗೊಳ್ಳಬೇಕಿತ್ತು.

ಆದರೆ ಈ ವಲಯದಲ್ಲಿ ಧಾರಾಕಾರ ಮಳೆಯಾಗುತ್ತಿರುವುದರಿಂದ ಯಾತ್ರೆಯನ್ನು ಪುನಃ ಆರಂಭಿಸಲು ಸಾಧ್ಯವಾಗಿಲ್ಲ ಎಂದು ಮಾತಾ ವೈಷ್ಟೋ ದೇವಿ ಮಂದಿರ ಮಂಡಳಿ ಶನಿವಾರ ಪ್ರಕಟಿಸಿದೆ.

ಪ್ರತಿಕೂಲ ಹವಾಮಾನದ ಹಿನ್ನೆಲೆಯಲ್ಲಿ, ಯಾತ್ರಿಕರ ಭದ್ರತೆಯ ದೃಷ್ಟಿಯಿಂದ ಯಾತ್ರೆಯನ್ನು ಪುನರಾರಂಭಿಸಿಲ್ಲ ಎಂದು ವಿವರಿಸಿದೆ. ಪರಿಸ್ಥಿತಿ ಸುಧಾರಿಸಿದ ನಂತರ ಯಾತ್ರೆ ಕುರಿತ ಮಾಹಿತಿಯನ್ನು ಇಂದುಗೊಳಿಸುವುದಾಗಿಯೂ ಮಂಡಳಿ ಹೇಳಿದೆ. ಆಗಸ್ಟ್ 26ರ ಭೂಕುಸಿತದ ನಂತರ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿತ್ತು.