ಕರ್ನಾಟಕ ಪ್ರವಾಸೋದ್ಯಮದ ಭರ್ಜರಿ ಪ್ರಚಾರ
ಪಶ್ಚಿಮ ಭಾರತದ ಪ್ರಮುಖ ಪ್ರವಾಸೋದ್ಯಮ ಮಾರುಕಟ್ಟೆಯಾದ ಮುಂಬೈನಲ್ಲಿ ನಡೆದ Travel & Tourism Fair (TTF) Mumbai 2026ರಲ್ಲಿ ಕರ್ನಾಟಕ ಪ್ರವಾಸೋದ್ಯಮವು ಪಾಲುದಾರ ರಾಜ್ಯವಾಗಿ ಭಾಗವಹಿಸಿ, ರಾಜ್ಯದ ವೈವಿಧ್ಯಮಯ ಪ್ರವಾಸಿ ತಾಣಗಳು ಮತ್ತು ಅನುಭವಗಳನ್ನು ಪ್ರವಾಸೋದ್ಯಮ ವಲಯದ ಮುಂದೆ ಪರಿಚಯಿಸಿದೆ.
ಪಶ್ಚಿಮ ಭಾರತದ ಪ್ರಮುಖ ಪ್ರವಾಸೋದ್ಯಮ ಮಾರುಕಟ್ಟೆಯಾದ ಮುಂಬೈನಲ್ಲಿ ನಡೆದ Travel & Tourism Fair (TTF) Mumbai 2026ರಲ್ಲಿ ಕರ್ನಾಟಕ ಪ್ರವಾಸೋದ್ಯಮವು ಪಾಲುದಾರ ರಾಜ್ಯವಾಗಿ ಭಾಗವಹಿಸಿ, ರಾಜ್ಯದ ವೈವಿಧ್ಯಮಯ ಪ್ರವಾಸಿ ತಾಣಗಳು ಮತ್ತು ಅನುಭವಗಳನ್ನು ಪ್ರವಾಸೋದ್ಯಮ ವಲಯದ ಮುಂದೆ ಪರಿಚಯಿಸಿದೆ. ಆಗಸ್ಟ್ 20ರಿಂದ 22ರವರೆಗೆ ಮುಂಬಯಿನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್ನಲ್ಲಿ ನಡೆದ ಮೂರು ದಿನಗಳ ಮೇಳದಲ್ಲಿ ಕರ್ನಾಟಕ ಪ್ರವಾಸೋದ್ಯಮ ಹಾಗೂ ವಿವಿಧ ಪ್ರವಾಸೋದ್ಯಮ ಕ್ಷೇತ್ರದ ಪಾಲುದಾರರು ಭಾಗವಹಿಸಿದ್ದರು.
ಮೇಳದಲ್ಲಿ ಕರ್ನಾಟಕದ ಮಳಿಗೆಗೆ ಜಮ್ಮು ವಿಭಾಗದ ಪ್ರವಾಸೋದ್ಯಮ ನಿರ್ದೇಶಕ ಡಾ. ವಿಕಾಸ್ ಗುಪ್ತಾ ಚಾಲನೆ ನೀಡಿದರು. ಮಹಾರಾಷ್ಟ್ರ ಹಾಗೂ ಪಶ್ಚಿಮ ಭಾರತದ ಟ್ರಾವೆಲ್ ಏಜೆಂಟ್ಗಳು, ಟೂರ್ ಆಪರೇಟರ್ಗಳು, ಡೆಸ್ಟಿನೇಷನ್ ಮ್ಯಾನೇಜ್ಮೆಂಟ್ ಕಂಪನಿಗಳು ಮತ್ತು ಕಾರ್ಪೊರೇಟ್ ಟ್ರಾವೆಲ್ ಪ್ರತಿನಿಧಿಗಳೊಂದಿಗೆ ಹಲವು B2B ಸಭೆಗಳು ನಡೆದವು. ಈ ಸಭೆಗಳಲ್ಲಿ ಕರ್ನಾಟಕದ ಪ್ರವಾಸೋದ್ಯಮ ಉತ್ಪನ್ನಗಳು, ಹೊಸ ಸಹಭಾಗಿತ್ವಗಳು ಮತ್ತು ಪ್ರವಾಸಿಗರ ಬದಲಾಗುತ್ತಿರುವ ಆದ್ಯತೆಗಳ ಕುರಿತು ಚರ್ಚಿಸಲಾಯಿತು.
ಕರ್ನಾಟಕದ ಮಳಿಗೆಯಲ್ಲಿ ಪಾರಂಪರಿಕ ತಾಣಗಳು, ವನ್ಯಜೀವಿ, ಪರಿಸರ ಪ್ರವಾಸೋದ್ಯಮ, ಕರಾವಳಿ, ಸಂಸ್ಕೃತಿ, ವೆಲ್ನೆಸ್, ಜವಾಬ್ದಾರಿಯುತ ಪ್ರವಾಸೋದ್ಯಮ ಹಾಗೂ MICE ಪ್ರವಾಸೋದ್ಯಮವನ್ನು ಪ್ರಮುಖವಾಗಿ ಪ್ರದರ್ಶಿಸಲಾಯಿತು. ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳು, ವನ್ಯಜೀವಿ ಪ್ರದೇಶಗಳು ಮತ್ತು ವೈವಿಧ್ಯಮಯ ಭೌಗೋಳಿಕ ಪರಿಸರಗಳನ್ನೂ ಪರಿಚಯಿಸಲಾಯಿತು. ಈಗಾಗಲೇ ಜನಪ್ರಿಯವಾಗಿರುವ ಪ್ರವಾಸಿ ಮಾರ್ಗಗಳ ಹೊರತಾಗಿ, ಕಡಿಮೆ ಪರಿಚಿತ ತಾಣಗಳನ್ನು ಕಸ್ಟಮೈಸ್ ಮಾಡಿದ ಪ್ರವಾಸ ಪ್ಯಾಕೇಜ್ಗಳಲ್ಲಿ ಸೇರಿಸುವ ಸಾಧ್ಯತೆಗಳ ಬಗ್ಗೆಯೂ ಚರ್ಚೆ ನಡೆಯಿತು.
TTF ಮುಂಬಯಿ 2026ರಲ್ಲಿ 500 ಪ್ರದರ್ಶಕರು, 20 ಭಾರತೀಯ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು, ಐದು ದೇಶಗಳ ಪ್ರತಿನಿಧಿಗಳು ಹಾಗೂ 10,000ಕ್ಕೂ ಹೆಚ್ಚು ಟ್ರೇಡ್ ವಿಸಿಟರ್ಗಳು ಭಾಗವಹಿಸಿದ್ದರು. ಈ ಮೂಲಕ ಮಹಾರಾಷ್ಟ್ರ ಮತ್ತು ಪಶ್ಚಿಮ ಭಾರತದ ಪ್ರಮುಖ ಪ್ರವಾಸೋದ್ಯಮ ಮಾರುಕಟ್ಟೆಯಲ್ಲಿ ಕರ್ನಾಟಕದ ಸ್ಥಾನವನ್ನು ಮತ್ತಷ್ಟು ಬಲಪಡಿಸುವ ಅವಕಾಶ ದೊರೆತಿದೆ.