Thursday, July 2, 2026
Thursday, July 2, 2026

ಸ್ಪೈಸ್‌ಜೆಟ್‌ಗೆ 62,000 ರು. ದಂಡ

ದಂಪತಿಗಳು ನಿಗದಿತ ಸಮಯಕ್ಕಿಂತ ಸಾಕಷ್ಟು ಮುಂಚಿತವಾಗಿಯೇ ದೆಹಲಿ ವಿಮಾನ ನಿಲ್ದಾಣಕ್ಕೆ ತಲುಪಿ, ಚೆಕ್-ಇನ್ ಫಾರ್ಮಾಲಿಟಿಗಳನ್ನು ಮುಗಿಸಿ, ಲಗೇಜ್ ಒಪ್ಪಿಸಿ, ತಮ್ಮ ಬೋರ್ಡಿಂಗ್ ಪಾಸ್‌ಗಳನ್ನು ಪಡೆದುಕೊಂಡು ಬೋರ್ಡಿಂಗ್ ಗೇಟ್ ಬಳಿ ಕಾಯುತ್ತಿದ್ದರು.

ಹಜ್ ಯಾತ್ರೆ ಮುಗಿಸಿ ಹಿಂದಿರುಗುತ್ತಿದ್ದ ವೃದ್ಧ ದಂಪತಿಗೆ ಮಾನ್ಯ ಬೋರ್ಡಿಂಗ್ ಪಾಸ್ ಇದ್ದರೂ ವಿಮಾನ ಹತ್ತಲು ಅವಕಾಶ ನೀಡದೆ, ದೆಹಲಿ ವಿಮಾನ ನಿಲ್ದಾಣದಲ್ಲಿ ಇಡೀ ರಾತ್ರಿ ಪರದಾಡುವಂತೆ ಮಾಡಿದ ಸ್ಪೈಸ್‌ಜೆಟ್ ವಿಮಾನಯಾನ ಸಂಸ್ಥೆಗೆ ಗ್ರಾಹಕ ನ್ಯಾಯಾಲಯವು ಭಾರಿ ದಂಡ ವಿಧಿಸಿದೆ. ಸಂತ್ರಸ್ತ ದಂಪತಿಗೆ ಟಿಕೆಟ್ ಹಣವನ್ನು ಮರುಪಾವತಿಸುವಂತೆ ಹಾಗೂ ಪರಿಹಾರ ಸೇರಿದಂತೆ ಒಟ್ಟು ರು. 62,000 ಕ್ಕಿಂತ ಹೆಚ್ಚು ಹಣವನ್ನು ಪಾವತಿಸುವಂತೆ ಶ್ರೀನಗರದ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ಆದೇಶಿಸಿದೆ.

ಶ್ರೀನಗರದ ನಿವಾಸಿಗಳಾದ ಗುಲಾಮ್ ನಬಿ ಫಾಫೂ ಮತ್ತು ಅವರ ಪತ್ನಿ ರಾಜಾ ಬೇಗಂ ಅವರು ಜುಲೈ 8, 2024 ರಂದು ಹಜ್ ಯಾತ್ರೆ ಮುಗಿಸಿ ದೆಹಲಿ ಮೂಲಕ ಶ್ರೀನಗರಕ್ಕೆ ಮರಳುತ್ತಿದ್ದರು. ಅವರ ಮಗ ಅವರಿಗಾಗಿ ದೆಹಲಿಯಿಂದ ಸಂಜೆ 6:45 ಕ್ಕೆ ಹೊರಟು ರಾತ್ರಿ 8:20 ಕ್ಕೆ ಶ್ರೀನಗರ ತಲುಪಬೇಕಾಗಿದ್ದ ಸ್ಪೈಸ್‌ಜೆಟ್ ವಿಮಾನದಲ್ಲಿ ಟಿಕೆಟ್ ಕಾಯ್ದಿರಿಸಿದ್ದರು.

ಇದನ್ನೂ ಓದಿ: ನೋಯ್ಡಾದಲ್ಲಿ ಇಂಡಿಗೋ ವಿಮಾನಯಾನ ಸೇವೆ ಆರಂಭ

ದಂಪತಿಗಳು ನಿಗದಿತ ಸಮಯಕ್ಕಿಂತ ಸಾಕಷ್ಟು ಮುಂಚಿತವಾಗಿಯೇ ದೆಹಲಿ ವಿಮಾನ ನಿಲ್ದಾಣಕ್ಕೆ ತಲುಪಿ, ಚೆಕ್-ಇನ್ ಫಾರ್ಮಾಲಿಟಿಗಳನ್ನು ಮುಗಿಸಿ, ಲಗೇಜ್ ಒಪ್ಪಿಸಿ, ತಮ್ಮ ಬೋರ್ಡಿಂಗ್ ಪಾಸ್‌ಗಳನ್ನು ಪಡೆದುಕೊಂಡು ಬೋರ್ಡಿಂಗ್ ಗೇಟ್ ಬಳಿ ಕಾಯುತ್ತಿದ್ದರು.

ಬೋರ್ಡಿಂಗ್ ಪ್ರಕ್ರಿಯೆ ಪ್ರಾರಂಭವಾದಾಗ, ಗೇಟ್‌ನಲ್ಲಿದ್ದ ಸ್ಪೈಸ್‌ಜೆಟ್ ಸಿಬ್ಬಂದಿ ದಂಪತಿಯನ್ನು ತಡೆದು ನಿಲ್ಲಿಸಿದರು. ಕಾರಣ ಕೇಳಿದಾಗ ಯಾವುದೇ ಸಮರ್ಪಕ ವಿವರಣೆ ನೀಡದೆ ಅವರ ಬೋರ್ಡಿಂಗ್ ಪಾಸ್‌ಗಳನ್ನು ರದ್ದುಗೊಳಿಸಲಾಯಿತು. ತಮ್ಮ ಬದಲಿಗೆ ಬೇರೆ ʼಪ್ರಭಾವಿ ವ್ಯಕ್ತಿಗಳನ್ನುʼ ವಿಮಾನದಲ್ಲಿ ಕೂರಿಸಲಾಯಿತು ಎಂದು ದಂಪತಿಗಳು ನ್ಯಾಯಾಲಯಕ್ಕೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.

ಅಷ್ಟೇ ಅಲ್ಲದೆ, ವಿಮಾನಯಾನ ಸಂಸ್ಥೆಯು ಅವರ ಲಗೇಜ್ ಅನ್ನು ವಾಪಸ್ ನೀಡಲು ಹಲವು ಗಂಟೆಗಳ ಕಾಲ ವಿಳಂಬ ಮಾಡಿತು. ಲಗೇಜ್ ಕೈ ಸೇರುವಷ್ಟರಲ್ಲಿ ಶ್ರೀನಗರಕ್ಕೆ ಹೋಗುವ ಎಲ್ಲಾ ವಿಮಾನಗಳು ಹೊರಟುಹೋಗಿದ್ದವು. ಇದರಿಂದಾಗಿ ವೃದ್ಧ ದಂಪತಿಗಳು ಇಡೀ ರಾತ್ರಿ ದೆಹಲಿ ವಿಮಾನ ನಿಲ್ದಾಣದಲ್ಲೇ ಕಳೆಯಬೇಕಾಯಿತು. ಮರುದಿನ ಬೆಳಿಗ್ಗೆ ಅವರು ಮತ್ತೊಂದು ವಿಮಾನಯಾನ ಸಂಸ್ಥೆಯಾದ ಇಂಡಿಗೋ ಮೂಲಕ Rs 13,450 ನಷ್ಟು ದುಬಾರಿ ದರ ತೆತ್ತು ಟಿಕೆಟ್ ಬುಕ್ ಮಾಡಿ ಶ್ರೀನಗರ ತಲುಪಬೇಕಾಯಿತು.

Pramod Mohan Hegde

Pramod Mohan Hegde

A media professional with four years of experience in journalism, having worked with leading Kannada publications such as Vistara, Vijayavani, and Vijaya Karnataka as a cinema journalist. Also an author with a keen interest in travel and cinema. Currently serving as Senior Sub Editor at Pravasi Prapancha, contributing editorial expertise and engaging storytelling to the media industry.

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

Read Previous

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

ಬೇಸಿಗೆಯ ಪ್ರವಾಸಕ್ಕಿದು ಸೂಕ್ತ ಸಮಯ; ತೆರಳುವ ಮುನ್ನ ಪೊಲೀಸರ ಈ ಸಲಹೆಗಳನ್ನು ಪಾಲಿಸಿ

Read Next

ಬೇಸಿಗೆಯ ಪ್ರವಾಸಕ್ಕಿದು ಸೂಕ್ತ ಸಮಯ; ತೆರಳುವ ಮುನ್ನ ಪೊಲೀಸರ ಈ ಸಲಹೆಗಳನ್ನು ಪಾಲಿಸಿ