ಬೆಂಗಳೂರು-ಮಂಗಳೂರು ಈಗ ಪ್ರಯಾಣ ಬೇಗ
ಪ್ರಸ್ತುತ ಬೆಂಗಳೂರು ಮತ್ತು ಮಂಗಳೂರು ನಡುವಿನ ರೈಲು ಪ್ರಯಾಣವು ಪಶ್ಚಿಮ ಘಟ್ಟಗಳ ಕಡಿದಾದ ಹಳಿಗಳ ಕಾರಣದಿಂದಾಗಿ ಸುಮಾರು 9 ರಿಂದ 12 ಗಂಟೆಗಳ ಕಾಲ ತೆಗೆದುಕೊಳ್ಳುತ್ತದೆ. ಹೊಸ ವಂದೇ ಭಾರತ್ ರೈಲು ತನ್ನ ಹೆಚ್ಚಿನ ವೇಗ ಮತ್ತು ಸುಧಾರಿತ ಎಂಜಿನ್ ಸಾಮರ್ಥ್ಯದಿಂದಾಗಿ ಈ ಸಮಯವನ್ನು ಗಮನಾರ್ಹವಾಗಿ ಕಡಿಮೆ ಮಾಡಲಿದೆ.
ಬೆಂಗಳೂರು ಮತ್ತು ಮಂಗಳೂರು ನಡುವಿನ ಪ್ರಯಾಣ ಇನ್ನು ಮುಂದೆ ಮತ್ತಷ್ಟು ವೇಗ ಮತ್ತು ಐಷಾರಾಮಿ ಆಗಲಿದೆ. ನೈಋತ್ಯ ರೈಲ್ವೆಯು ಈ ಎರಡು ಪ್ರಮುಖ ನಗರಗಳ ನಡುವೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲನ್ನು ಪರಿಚಯಿಸಲು ಸಜ್ಜಾಗಿದ್ದು, ಇದು ಪ್ರಯಾಣದ ಸಮಯವನ್ನು 1 ರಿಂದ 2 ಗಂಟೆಗಳಷ್ಟು ಕಡಿತಗೊಳಿಸುವ ಭರವಸೆ ನೀಡಿದೆ.
ಇದನ್ನೂ ಓದಿ: ಭಾರತೀಯ ರೈಲ್ವೆಯ ಪ್ರಗತಿಯ ಪಯಣ
ಪ್ರಸ್ತುತ ಬೆಂಗಳೂರು ಮತ್ತು ಮಂಗಳೂರು ನಡುವಿನ ರೈಲು ಪ್ರಯಾಣವು ಪಶ್ಚಿಮ ಘಟ್ಟಗಳ ಕಡಿದಾದ ಹಳಿಗಳ ಕಾರಣದಿಂದಾಗಿ ಸುಮಾರು 9 ರಿಂದ 12 ಗಂಟೆಗಳ ಕಾಲ ತೆಗೆದುಕೊಳ್ಳುತ್ತದೆ. ಹೊಸ ವಂದೇ ಭಾರತ್ ರೈಲು ತನ್ನ ಹೆಚ್ಚಿನ ವೇಗ ಮತ್ತು ಸುಧಾರಿತ ಎಂಜಿನ್ ಸಾಮರ್ಥ್ಯದಿಂದಾಗಿ ಈ ಸಮಯವನ್ನು ಗಮನಾರ್ಹವಾಗಿ ಕಡಿಮೆ ಮಾಡಲಿದೆ.
ವಂದೇ ಭಾರತ್ ಎಕ್ಸ್ಪ್ರೆಸ್ ಸಂಪೂರ್ಣವಾಗಿ ಹವಾನಿಯಂತ್ರಿತವಾಗಿದ್ದು, ದಕ್ಷಿಣ ಭಾರತದ ಸುಂದರ ಪಕೃತಿಯನ್ನು ಸವಿಯಲು ಅನುಕೂಲವಾಗುವಂತೆ ದೊಡ್ಡ ಕಿಟಕಿಗಳು ಮತ್ತು 180 ಡಿಗ್ರಿ ತಿರುಗುವ ಆಸನಗಳನ್ನು ಹೊಂದಿದೆ. ರೈಲಿನಲ್ಲಿ 'ಕವಚ' (Kavach) ತಂತ್ರಜ್ಞಾನವಿದ್ದು, ಇದು ರೈಲುಗಳು ಮುಖಾಮುಖಿ ಡಿಕ್ಕಿಯಾಗುವುದನ್ನು ತಡೆಯುತ್ತದೆ. ಜೊತೆಗೆ ಪ್ರತಿ ಬೋಗಿಯಲ್ಲೂ ಸಿಸಿಟಿವಿ ಕ್ಯಾಮೆರಾಗಳಿವೆ. ಪ್ರತಿ ಆಸನದಲ್ಲೂ ಮೊಬೈಲ್ ಚಾರ್ಜಿಂಗ್ ಪಾಯಿಂಟ್ಗಳು ಮತ್ತು ಇನ್ಫೋಟೈನ್ಮೆಂಟ್ ವ್ಯವಸ್ಥೆ ಇರಲಿದೆ. ರೈಲು ಚಲಿಸುವಾಗ ಸುರಕ್ಷತೆಗಾಗಿ ಸ್ವಯಂಚಾಲಿತ ಬಾಗಿಲು ಮತ್ತು ಸ್ಲೈಡಿಂಗ್ ಫುಟ್ಸ್ಟೆಪ್ಗಳನ್ನು ಅಳವಡಿಸಲಾಗಿದೆ.
ಬೆಂಗಳೂರು-ಮಂಗಳೂರು ಮಾರ್ಗವು ಸಕಲೇಶಪುರ ಮತ್ತು ಸುಬ್ರಹ್ಮಣ್ಯ ನಡುವಿನ ಸುಂದರ ಪಶ್ಚಿಮ ಘಟ್ಟಗಳ ಮೂಲಕ ಹಾದುಹೋಗುತ್ತದೆ. ವಂದೇ ಭಾರತ್ನ ದೊಡ್ಡ ಗಾಜಿನ ಕಿಟಕಿಗಳು ಪ್ರವಾಸಿಗರಿಗೆ ಹಸಿರು ಕಾಡುಗಳು, ಜಲಪಾತಗಳು ಮತ್ತು ಕಣಿವೆಗಳ ವಿಹಂಗಮ ನೋಟವನ್ನು ಸವಿಯಲು ವಿಶೇಷ ಅನುಭವ ನೀಡಲಿವೆ.