ಶ್ರೀಲಂಕಾ ಪ್ರವಾಸದ ಅನುಭವ ಕಥನ
ಇದು ನಾನು ಭೇಟಿ ಕೊಡುತ್ತಿರುವ ಎರಡನೇ ದೇಶವಾದರೂ ಏನೋ ಒಂಥರ ಚಡಪಡಿಕೆ ಮತ್ತು ಹೆದರಿಕೆ. ಆದಷ್ಟು ಬೇಗ ವಿಮಾನದಲ್ಲಿ ಕೂರುವ ಬಯಕೆ-ಎನ್. ಆರ್ ವಿನಯ್
ಬೇರೆ ಬೇರೆ ದೇಶ ಸುತ್ತಬೇಕೆಂಬುದು ನನ್ನ ಬಹುದಿನದ ಕನಸು. 15 ದಿನಗಳ ಹಿಂದೆ ನನ್ನ ಕಂಪನಿಯವರು ಫೋನ್ ಮಾಡಿ ನೀವು ಹೋದ ವರ್ಷ sales Target Reach ಆಗಿದ್ದಕ್ಕೆ ಮುಂದಿನ ತಿಂಗಳು ನಿಮಗೆ ಶ್ರೀಲಂಕಾ ಪ್ರವಾಸ ಇದೆ ಎಂದು ಹೇಳಿದ್ದರು. ನಾನು ಆ ಕ್ಷಣದಿಂದ ವಿಮಾನ ಯಾವಾಗ ಹತ್ತುತ್ತೇನೆ ಎಂದು ಚಾತಕಪಕ್ಷಿಯ ಹಾಗೆ ಕಾಯುತ್ತಿದ್ದೆ. ಇದು ನಾನು ಭೇಟಿ ಕೊಡುತ್ತಿರುವ ಎರಡನೇ ದೇಶವಾದರೂ ಏನೋ ಒಂಥರ ಚಡಪಡಿಕೆ ಮತ್ತು ಹೆದರಿಕೆ. ಆದಷ್ಟು ಬೇಗ ವಿಮಾನದಲ್ಲಿ ಕೂರುವ ಬಯಕೆ.
ಆ ಗಳಿಗೆ ಬಂದೇ ಬಿಟ್ಟಿತು. ಬೆಳಗಿನ ಜಾವ ಸುಮಾರು 6:00 ಗಂಟೆಗೆ ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಿದೆವು. ನಮ್ಮ ವಿಮಾನದ ಪ್ರಯಾಣದ ಸಮಯ ಬೆಳಗ್ಗೆ 10:40 ಕೆ ಇದ್ದಿದ್ದರಿಂದ 6 ಗಂಟೆಗೆ ವಿಮಾನ ನಿಲ್ದಾಣದ ಮತ್ತೆ ಹೋದೆವು ಹೋದಮೇಲೆ ವಿಮಾನ ನಿಲ್ದಾಣದ ಎಲ್ಲಾ ಪ್ರಕ್ರಿಯೆ ಮುಗಿಸಿ Bording Pass ಮಲಿದ್ದ ಗೇಟ್ ನಂಬರ್ ನಲ್ಲಿ ಕುಳಿತೆವು. ಒಂದು ಗಂಟೆ ಬಿಟ್ಟು ವಿಮಾನ ಬಂದಿತು. ವಿಮಾನದ ಒಳಗೆ ನಾನು ನನ್ನ ಪತ್ನಿ ಹಾಗೆ ನನ್ನ ಆರು ವರ್ಷದ ಮಗ ಹತ್ತಿದೆವು. ನನ್ನ ಮಗನ ಕಾತುರ ಎಷ್ಟರಮಟ್ಟಿಗೆ ಇತ್ತು ಎಂದರೆ ಹೇಳತೀರದು. ಅಪ್ಪ,,,,, ಏರೋಪ್ಲೇನ್ ಅಪ್ಪ ಏರೋಪ್ಲೇನ್,,, ಅಮ್ಮ ಏರೋಪ್ಲೇನ್,,,, ಎಂದು ನವಿಲಿನ ಹಾಗೆ ಕುಣಿಯುತ್ತಿದ್ದ. ಅದನ್ನು ನೋಡಿ ನಮಗೂ ಏರೋಪ್ಲೇನಲ್ಲಿ ಹತ್ತಿದೆವು ಎಂಬ ಖುಷಿ ಬೇರೆ. ನಾವು ಮಗುವಾಗಿ ಅವನ ಜೊತೆ ಖುಷಿಪಟ್ಟೆವು. ನಮ್ಮ ಅದೃಷ್ಟಕ್ಕೆ ಒಂದು ವಿಂಡೋ ಸೈಡ್ ಸೀಟು ಕೂಡ ಸಿಕ್ಕಿತು. ಅಲ್ಲಿ ನನ್ನ ಮಗನನ್ನು ಕೂರಿಸಿದೆವು. ಆಗ ನನ್ನ ಮಗನ ಖುಷಿಗೆ ಪಾರವೇ ಇಲ್ಲ. ಆ ಸಮಯದಲ್ಲಿ ಅವನ ಖುಷಿಯ ಎದೆ ಬಡಿತ ನನಗೆ ಕೇಳಿಸುತ್ತಿತ್ತು. ಕುಳಿತಲ್ಲಿ ಕೂರುವ ವ್ಯಕ್ತಿ ನನ್ನ ಮಗ ಅಲ್ಲ. ಎಲ್ಲಿ ಹೋದರೂ ಓಡಾಡುತ್ತಿರುತ್ತಿದ್ದ. ಆದರೆ ಈ ವಿಮಾನದಲ್ಲಿ ಕುಳಿತಲ್ಲೇ ಕುಳಿತು ಆಕಾಶದ ಪ್ರತಿಯೊಂದು ಮೋಡವನ್ನು ನೋಡುತ್ತಾ ಅಮ್ಮ ಐಸ್ ಕ್ರೀಮ್ ಇದ್ದ ಹಾಗಿದೆ ಕೇಕಿನ ಮೇಲೆ ಕ್ರೀಮ್ ಇದ್ದ ಹಾಗಿದೆ ಈ ಮೋಡ ಎಂದು ಸಂತೋಷಪಡುತ್ತಿದ್ದ. ನಮ್ಮ ವಿಮಾನ ಆಕಾಶ ಮುಟ್ಟುತ್ತದೆ ಎಂದು ಸಂತೋಷದಿಂದ ಗಟ್ಟಿ ಗಟ್ಟಿಯಾಗಿ ಅಮ್ಮನ ಹತ್ತಿರ ಹೇಳುತ್ತಿದ್ದ. ಅವನು ಆ ಕ್ಷಣವನ್ನು ಆಸ್ವಾದಿಸುವಾಗಲೇ ಶ್ರೀಲಂಕಾ ಬಂತು ಎಂದು ಅನೌನ್ಸ್ ಮಾಡಿದರು. ಬೇಗ ಬಂದು ಬಿಟ್ತಲ್ಲ ಎಂದು ಅಂದುಕೊಳ್ಳುವಾಗಲೇ ಆಗ ನಮಗೆ ನೆನಪಿಗೆ ಬಂದಿದ್ದು ಬೆಂಗಳೂರಿಂದ ಶ್ರೀಲಂಕಾ ಬರೀ 1 ಗಂಟೆ 30 ನಿಮಿಷದ ಪ್ರಯಾಣ ಎಂದು. ವಿಮಾನ ಆಗಸದಿಂದ ಇಳಿಯುವಾಗ ನನ್ನ ಮಗನ ಅರಳಿದ ಮುಖ ಬಾಡಿದ ಹಾಗೆ ಆಯಿತು. ಅಮ್ಮ ಅಪ್ಪ ಇಷ್ಟು ಬೇಗ ವಿಮಾನದಿಂದ ಇಳಿಬೇಕಾ ಎಂದು ಗದ್ಗದಿತ ದನಿಯಲ್ಲಿ ಹೇಳಿದ ನಾವು ಸಾಹಸದ ಸಮಾಧಾನ ಮಾಡಿ ವಿಮಾನದಿಂದ ಇಳಿಸಿದೆವು. ವಿಮಾನದಿಂದ ಹಿಡಿದು ಅಲ್ಲಿಯ ಪ್ರಕ್ರಿಯೆ ಎಲ್ಲ ಮುಗಿಸಿ ಹೊರ ಬರುತ್ತಿರುವಾಗಲೇ ಒಬ್ಬ ಗೈಡ್ ಹಾಗೂ ವಾಹನ ವ್ಯವಸ್ಥೆ ಇತ್ತು. ಆ ದಿನ ರೆಸ್ಟ್ ಮಾಡಿ ಮರುದಿನದಿಂದ ಶ್ರೀಲಂಕದ ವಿಶೇಷತೆಗಳನ್ನು ತಿಳಿದುಕೊಂಡು ಸುತ್ತಾಡಲು ಶುರು ಮಾಡಿದೆವು.
ಈ ದೇಶ ನೋಡಿದ ತಕ್ಷಣ ನನಗೆ ಅನಿಸಿದ್ದು ಸುತ್ತಲೂ ನೀರು ಮಧ್ಯದಲ್ಲಿ ಭೂಮಿ ಎಂದು. ಯಾಕಂದ್ರೆ ಎಲ್ಲಿ ನಿಂತು ಕೊಂಡು ನೋಡಿದರೂ ನೀರು ನೀರು ನೀರು !ಒಂದು ಕಡೆ ನದಿ ಇನ್ನೊಂದು ಕಡೆ ಕೆರೆ ಮತ್ತೊಂದು ಕಡೆ ಸಮುದ್ರ ನನಗೆ ಮಿನಿ ಕೇರಳಕ್ಕೆ ಬಂದಿದ್ದೇನೆ ಎಂಬ ಭಾವನೆ ಬಂತು. ಇನ್ನು ಹೇಳಬೇಕೆಂದರೆ ಕೇರಳ ಒಂದು ಸಲ ಕಣ್ಣು ಮುಂದೆ ಹಾದುಹೋಯಿತು.
ಶ್ರೀಲಂಕಾದ ಇತಿಹಾಸ
ನಮ್ಮ ಗೈಡ್ ಹತ್ತಿರ ಶ್ರೀಲಂಕಾದ ಕಿರು ಇತಿಹಾಸವನ್ನು ತಿಳಿದುಕೊಂಡೆವು. ಈ ಶ್ರೀಲಂಕಾ ಹಲವಾರು ರಾಜವಂಶಸ್ಥರು ಅಕ್ರಮ ಮಾಡಿ ರೂಪಗೊಂಡಿದೆ. ಹಾಗೆ 19 ನೇ ಶತಮಾನದ ಆರಂಭದಲ್ಲಿ ಬ್ರಿಟಿಷ್ ಶಕ್ತಿಯು ಶ್ರೀಲಂಕವನ್ನು ಸ್ವಾದೀನಪಡಿಸಿಕೊಂಡು 1815 ರಲ್ಲಿ ಕನ್ಯಾ ರಾಜರನ್ನು ಸೋಲಿಸಿದರು. ಅಂದು ಇದು ಸಂಪೂರ್ಣ ಬ್ರಿಟಿಷ್ ಆಳ್ವಿಕೆಗೆ ಒಳಗೊಂಡಿತ್ತು. 1948 ರಲ್ಲಿ ಶ್ರೀಲಂಕವನ್ನು ಬ್ರಿಟಿಷರಿಂದ ಸ್ವತಂತ್ರ ದೊರಕಿತು ಎಂದು ಸಂಕ್ಷಿಪ್ತವಾಗಿ ವಿವರಿಸಿದರು
ಈ ದೇಶದ ರಾಜಕೀಯದ ಇತಿಹಾಸ
1983 ರಿಂದ 2009 ರವರೆಗೆ ಶ್ರೀಲಂಕದಲ್ಲಿ ತೀರ ತಮಿಳು ವಿದ್ರೋಹನ ನಡೆಯಿತು LTTE ( ಲಿಬರೇಷನ್ ಟೈಗರ್ಸ್ ಆಫ್ ತಮಿಳ್ ಇಳಂ ) ಸಂಘಟನೆಯು ತಮಿಳು ಸ್ವಂತ ದೇಶಕ್ಕಾಗಿ ಹೋರಾಡಿತು. 2009 ನಲ್ಲಿ ಯುದ್ಧವನ್ನು ಸರ್ಕಾರ ನಿಯಂತ್ರಿಸುತ ಈಗಿನ ಸರ್ಕಾರ ಪ ಪ್ರವಾಸೋದ್ಯಮಕ್ಕೆ ಹೆಚ್ಚು ಪ್ರಾಧ್ಯಾನತೆ ಕೊಡುತ್ತಿದೆ ಎಂದು ಹೇಳಿದರು .
ಶ್ರೀಲಂಕಾದಲ್ಲಿ ಪ್ರಸಿದ್ಧ ಐದು ಹಿಂದೂ ದೇವಾಲಯಗಳು
1 ನಲ್ಲೂರು ಕಾಂಡಸ್ವಾಮಿ ದೇವಾಲಯ
2 ಕೊನೆಶ್ವರಂ ದೇವಾಲಯ
3 ಮುನೇಶ್ವರಂ ದೇವಾಲಯ
4 ತಿರುಕೊನೇಶ್ವರಂ ದೇವಾಲಯ
5 ಮಾವಿ ದಾಪುರಂ ಕಾಂಡ ಸ್ವಾಮಿ ದೇವಾಲಯ ಎಂದು ವಿವರಿಸಿದರು
ಶ್ರೀಲಂಕಾದ ವಿಶೇಷತೆಗಳು
ಶ್ರೀಲಂಕಾದಲ್ಲಿ 2 ಕೋಟಿ ಜನ ವಾಸಿಸುತ್ತಿದ್ದಾರೆ. ಇಲ್ಲಿ ಎಲ್ಲ ಧರ್ಮದ ಜನ ಇದ್ದಾರೆ ಅದರಲ್ಲೂ 40% ತಮಿಳು ಧರ್ಮದವರಿದ್ದರೆ ಉಳಿದ 60% ಜನ ಹಿಂದೂ ಮುಸ್ಲಿಂ ಕ್ರೈಸ್ತ ಜೈನರು ವಾಸವಿದ್ದಾರೆ. ಇಲ್ಲಿಯ ಮಾತು ಭಾಷೆ ಸಿಂಗಳಂ. ಇಲ್ಲಿ ಅತಿ ಹೆಚ್ಚು ಸಾಂಬಾರ ಪದಾರ್ಥಗಳನ್ನು ಬೆಳೆಯುತ್ತಾರೆ ಅದರಲ್ಲೂ ಅತಿ ಹೆಚ್ಚು ಚಕ್ಕೆ ಬೆಳೆಯುತ್ತಾರೆ ಇದನ್ನು ದೇಶ ವಿದೇಶಗಳಿಗೂ ಕಳಿಸುತ್ತಾರೆ ಈ ದೇಶದ ಕರೆನ್ಸಿ ಶ್ರೀಲಂಕನ್ ರುಪೀಸ್ ಹಾಗೆ ಅತಿ ಹೆಚ್ಚು ವೈಟ್ ಬ್ಲೂ ಸ್ಟೋರ್ ಗನೀ ಗಾರಿಕೆ ಮಾಡುತ್ತಾರೆ, ದೇಶದಲ್ಲಿ ಕಾಲಗಳು ಇಲ್ಲ ಅಂದರೆ ಚಳಿಗಾಲ ಮಳೆಗಾಲ ಎಂಬ ವಿಂಗಡನೆ ಇಲ್ಲ ಯಾವಾಗ ಬೇಕಾದರೂ ಮಳೆ ಬರುತ್ತದೆ ಯಾವಾಗ ಬೇಕಾದರೂ ಬಿಸಿಲು ಬರುತ್ತದೆ ಇಲ್ಲಿ ಅತಿ ಹೆಚ್ಚು ಜನ ಮಾಂಸಾಹಾರಿಗಳು ಯಾಕಂದ್ರೆ ಸಮುದ್ರ ಹತ್ತಿರ ಇರುವುದರಿಂದ ತಾಜಾ ತಾಜಾ ಬೇರಿಗಳು ಸಿಗುತ್ತದೆ ಇಲ್ಲಿ ಬಹುತೇಕ ಎಲ್ಲಾ ಕಡೆ ನಮ್ಮ ಭಾರತದ ಕರೆನ್ಸಿ ತೆಗೆದುಕೊಳ್ಳುತ್ತಾರೆ ಇಲ್ಲಿಯ ಸರ್ಕಾರ ಕೆಸಿನೋಗಳಿಗೆ ಅಧಿಕೃತವಾಗಿ ಅವಕಾಶ ಕೊಟ್ಟಿದ್ದಾರೆ, ಇಲಿಯ ಆಹಾರ ಪದ್ಧತಿ ನಮ್ಮ ದೇಶದ ಆಗಿದೆ ನನಗೇನು ತುಂಬಾ ಬೇರೇನು ಅನ್ನಿಸಲಿಲ್ಲ ನಮ್ಮ ದೇಶದಲ್ಲಿ ರಾವಣನ ದ್ವೇಷ ಮಾಡುತ್ತಾರೆ ಈ ದೇಶದಲ್ಲಿ ರಾವಣನನ್ನು ಪೂಜಿಸುತ್ತಾರೆ ಹಾಗೆ ರಾವಣನ ದೇವಸ್ಥಾನವನ್ನು ಕಟ್ಟಿದ್ದಾರೆ ಈ ದೇಶದಲ್ಲಿ ಆಧ್ಯಾತ್ಮಿಕತೆಗೆ ಎತ್ತಿದ ಕೈ ಬೌದ್ಧ ಧರ್ಮದ ಪ್ರಮುಖ ತೀರ್ಥಕ್ಷೇತ್ರಗಳು ಇಲ್ಲಿದೆ
ಶ್ರೀಲಂಕಾದ ಹಬ್ಬಗಳು
ಪೋಯ ದಿನ (Poya Day): ಪ್ರತಿ ತಿಂಗಳ ಪೂರ್ಣಚಂದ್ರ ದಿನವನ್ನು ಬೌದ್ಧರು ಪವಿತ್ರ ದಿನವಾಗಿ ಆಚರಿಸುತ್ತಾರೆ. ಈ ದಿನ ಮದ್ಯ ಸೇವನೆ ಮತ್ತು ಮಾಂಸಾಹಾರ ತಕ್ಷಣ.
ವಿಸಾಖ ಪೂಯ (Vesak Poya): ಬುದ್ಧನ ಜನನ, ಬೋಧಿ ಪ್ರಾಪ್ತಿ, ಮತ್ತು ಪರಿನಿರ್ವಾಣವನ್ನು ಹಬ್ಬವನ್ನಾಗಿ ಆಚರಿಸಲಾಗುತ್ತದೆ. ಶ್ರೀಲಂಕಾದ ಪ್ರಮುಖ ಬೌದ್ಧ ಹಬ್ಬಗಳಲ್ಲಿ ಇದೂ ಒಂದು.
ಪೊಸನ್ ಪೂಯ (Poson Poya): ಶ್ರೀಲಂಕೆಗೆ ಬೌದ್ಧ ಧರ್ಮ ಬರುವಿಕೆಯ ಸ್ಮರಣಾರ್ಥವಾಗಿ ಆಚರಿಸಲಾಗುತ್ತದೆ.
ಹಿಂದೂ ಹಬ್ಬಗಳು
ಥೈಪೂಸಂ (Thai Pongal): ತಮಿಳು ಜನಾಂಗದವರು ಹೊಳೆಕಾಳೆ (ಮಕ್ಕಳಿಗಾಗಿ) ಮತ್ತು ಕೃಷಿಯ ಹಬ್ಬವಾಗಿ ಈ ಹಬ್ಬವನ್ನು ಆಚರಿಸುತ್ತಾರೆ.
ಮಹಾ ಶಿವರಾತ್ರಿ (Maha Shivaratri): ಶಿವನ ಆರಾಧನೆಯ ಹಬ್ಬ.
ದೀಪಾವಳಿ (Diwali): ಬೆಳಕಿನ ಹಬ್ಬ, ಲಂಕಾದ ಹಿಂದೂ ಸಮುದಾಯ ಇದನ್ನು ಹರ್ಷೋಲ್ಲಾಸದಿಂದ ಆಚರಿಸುತ್ತಾರೆ.
ಶ್ರೀಲಂಕಾ ಸ್ವಾತಂತ್ರ್ಯ ದಿನ (Sri Lanka Independence Day): ಫೆಬ್ರವರಿ 4 ರಂದು ದೇಶದ ಸ್ವಾತಂತ್ರ್ಯವನ್ನು ಆಚರಿಸಲಾಗುತ್ತದೆ. ಸಿಂಹಳ-ತಮಿಳು ಹೊಸ ವರ್ಷ (Sinhala and Tamil New Year - Aluth Avurudu): ಏಪ್ರಿಲ್ ಮಧ್ಯದಲ್ಲಿ ಹೊಸ ವರ್ಷವನ್ನು ಸಿಂಹಳ ಮತ್ತು ತಮಿಳು ಜನರು ಆಚರಿಸುತ್ತಾರೆ.
ನಾನು ಯಾವಾಗಲೂ ಭೂಪಟದಲ್ಲಿ ನೋಡುತ್ತಿದ್ದ ಈ ದೇಶಕ್ಕೆ ಬಂದೇ ಎಂಬ ಧನ್ಯತಾ ಭಾವದಿಂದ ಬಹುತೇಕ ಎಲ್ಲ ಸ್ಥಳವನ್ನು ನೋಡಿಕೊಂಡು ಹಿಂತಿರುಗಿದೆವು.