Thursday, June 12, 2025
Thursday, June 12, 2025

ವೃಂದಾವನದಲ್ಲಿ ಭೇಟಿ ನೀಡಲೇಬೇಕಾದ 5 ಪ್ರಸಿದ್ಧ ದೇವಾಲಯಗಳಿವು

ವೃಂದಾವನವನ್ನೊಮ್ಮೆ ಸುತ್ತಾಡಿ ಬರಬೇಕು, ವೃಂದಾವನವನ್ನು ಸಂಪೂರ್ಣವಾಗಿ ಆವರಿಸಿರುವ ಶ್ರೀ ಕೃಷ್ಣನ ಇರುವಿಕೆಯನ್ನು ಅನುಭವಿಸಬೇಕೆಂದಕೊಳ್ಳದವರಿಲ್ಲ. ವೃಂದಾವನದಲ್ಲಿ ಭೇಟಿ ನೀಡಲೇಬೇಕಾದ ಪವಿತ್ರ ತಾಣಗಳ ಮಾಹಿತಿ ಇಲ್ಲಿದೆ.

ವೃಂದಾವನವನ್ನು ಪ್ರತ್ಯೇಕವಾಗಿ ಯಾರಿಗೂ ಪರಿಚಸಬೇಕಾಗಿಲ್ಲ. ಉತ್ತರ ಪ್ರದೇಶದ ಈ ಸುಂದರವಾದ ಪಟ್ಟಣವು ಶ್ರೀಕೃಷ್ಣನ ನೆಲೆಬೀಡು. ಕೃಷ್ಣನಿಗೆ ಸಂಬಂಧಿಸಿದ ಪೌರಾಣಿಕ ತಾಣಗಳು, ಆಧ್ಯಾತ್ಮಿಕ ಕೇಂದ್ರಗಳೇ ಇಲ್ಲಿನ ಪ್ರಮುಖ ಆಕರ್ಷಣೆ. ಇಲ್ಲಿನ ಪವಿತ್ರ ಘಾಟ್‌ಗಳು ಮತ್ತು ಪ್ರಾಚೀನ ದೇವಾಲಯಗಳು ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುತ್ತದೆ. ವೃಂದಾವನವು ಶ್ರೀಕೃಷ್ಣನ ಬಾಲ್ಯದ ನೆನಪುಗಳನ್ನು ಹೊಂದಿದ್ದು, ಇದು ಹಿಂದೂಗಳಿಗೆ ಪ್ರಮುಖ ಯಾತ್ರಾ ಸ್ಥಳವಾಗಿದೆ.

ವೃಂದಾವನದಲ್ಲಿ ಭೇಟಿ ನೀಡಬೇಕಾದ ಅನೇಕ ಪವಿತ್ರ ಸ್ಥಳಗಳಿವೆ. ಆದರೂ ಅವುಗಳ ಇತಿಹಾಸ, ವಾಸ್ತುಶಿಲ್ಪದ ಸೌಂದರ್ಯ ಮತ್ತು ಆಧ್ಯಾತ್ಮಿಕ ಪ್ರಾಮುಖ್ಯತೆಗಾಗಿ ಭೇಟಿ ನೀಡಲೇಬೇಕಿರುವ ಐದು ದೇವಾಲಯಗಳಿವೆ.

ಬಂಕೆ ಬಿಹಾರಿ ದೇವಸ್ಥಾನ, ವೃಂದಾವನ

ವೃಂದಾವನದಲ್ಲಿ ಭೇಟಿ ನೀಡಲೇಬೇಕಾದ ಪ್ರಮುಖ ದೇವಾಲಯಗಳಲ್ಲಿ ಬಂಕೆ ಬಿಹಾರಿ ದೇವಾಲಯ ಪ್ರಮುಖವಾದುದು. ಶ್ರೀಕೃಷ್ಣನಿಗೆ ಸಮರ್ಪಿತವಾದ ಈ ದೇವಾಲಯದಲ್ಲಿ ಬಾಲಗೋಪಾಲನ ಬಾಲ್ಯಕಾಲದ ಮೂರ್ತಿಯನ್ನೇ ಪೂಜಿಸಲಾಗುತ್ತದೆ. ಈ ದೇವಾಲಯದಲ್ಲಿರುವ ರಾಧಾ ಕೃಷ್ಣನ ಕಪ್ಪು ಬಣ್ಣದ ಪ್ರತಿಮೆಯನ್ನು ವಿಶಿಷ್ಟ ಭಂಗಿಯಲ್ಲಿ ಚಿತ್ರಿಸಲಾಗಿರುವುದು ಮತ್ತೊಂದು ವಿಶೇಷತೆಯಾಗಿದೆ.

Banke-Bihari-Temple-3

ನಿಧಿವನ

ವೃಂದಾವನದ ಅತ್ಯಂತ ವಿಶಿಷ್ಟ ಸ್ಥಳಗಳಲ್ಲಿ ಇದು ಒಂದು, ನಿಧಿವನ. ಈ ಸ್ಥಳವು ಶ್ರೀಕೃಷ್ಣನ ದೈವಿಕ ಲೀಲೆಗಳೊಂದಿಗಿನ ಸಂಬಂಧಕ್ಕೆ ಹೆಸರುವಾಸಿಯಾಗಿದೆ. ಅದರಲ್ಲೂ ಶ್ರೀಕೃಷ್ಣನು ತನ್ನ ಬಾಲ್ಯದಲ್ಲಿ ರಾಧೆ ಮತ್ತು ಸಾವಿರಕ್ಕೂ ಹೆಚ್ಚು ಗೋಪಿಯರೊಂದಿಗೆ ತನ್ನ ಲೀಲಾ ವಿನೋದವನ್ನು ಪ್ರದರ್ಶಿಸುತ್ತಿದ್ದ ಸ್ಥಳವೇ ಇದೆಂದು ನಂಬಲಾಗಿದೆ. ಸ್ಥಳೀಯ ದಂತಕಥೆಯ ಪ್ರಕಾರ, ಕೃಷ್ಣನ ದೈವಿಕ ನೃತ್ಯವನ್ನು ನೋಡಿದ ನಂತರ ಗೋಪಿಕೆಯರೇ ಮರಗಳಾಗಿ ರೂಪಾಂತರಗೊಂಡ ಅಲ್ಲಿ ನೆಲೆ ನಿಂತರೆಂದು ನಂಬಲಾಗಿದೆ.

nidhivana-vrindavan-images-5-1024x768

ಪ್ರೇಮ ಮಂದಿರ

"ದೈವಿಕ ಪ್ರೀತಿಯ ದೇಗುಲ" ಎಂದೂ ಕರೆಯಲ್ಪಡುವ ಪ್ರೇಮ ಮಂದಿರವು ವೃಂದಾವನದಲ್ಲಿ ಹೊಸದಾಗಿ ನಿರ್ಮಿಸಲಾದ ದೇವಾಲಯ. 2001 ರಲ್ಲಿ ಜಗದ್ಗುರು ಕೃಪಾಲುಜಿ ಮಹಾರಾಜ್ ಅವರು ನಿರ್ಮಿಸಿದ ಇದು ರಾಧಾ ಮತ್ತು ಕೃಷ್ಣನ ನಡುವಿನ ಶಾಶ್ವತ ಪ್ರೀತಿಯನ್ನು ಪ್ರದರ್ಶಿಸುವ ಸುಂದರವಾದ ಅಮೃತಶಿಲೆಯ ದೇವಾಲಯವಾಗಿದೆ. ಇಲ್ಲಿನ ವಾಸ್ತುಶಿಲ್ಪದ ಅದ್ಭುತವಾಗಿದ್ದು, ದೇವಾಲಯದ ಬೆಳಕು ಮತ್ತು ಧ್ವನಿ ಪ್ರದರ್ಶನವು ಸಾಕಷ್ಟು ಪ್ರಸಿದ್ಧವಾಗಿದೆ.

prem_mandir

ಇಸ್ಕಾನ್‌ ದೇವಾಲಯ

ಶ್ರೀ ಕೃಷ್ಣ-ಬಲರಾಮ್ ಮಂದಿರ ಎಂದೂ ಕರೆಯಲ್ಪಡುವ ಇಸ್ಕಾನ್ ದೇವಾಲಯವು ವೃಂದಾವನದ ಅತ್ಯಂತ ಪ್ರಸಿದ್ಧ ದೇವಾಲಯಗಳಲ್ಲಿ ಒಂದು. ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು ಯಮುನಾ ನದಿಯ ದಡದಲ್ಲಿ ಸ್ಥಾಪಿಸಿರುವ ಈ ದೇವಾಲಯವು, ಕೃಷ್ಣ ಮತ್ತು ಬಲರಾಮರ ಸಹೋದರ ಪ್ರೀತಿಯ ಸಂಕೇತವೂ ಹೌದು.

ISCKON-4-1024x702

ರಾಧಾ ರಾಮನ್ ದೇವಾಲಯ

16 ನೇ ಶತಮಾನದಲ್ಲಿ ಗೋಪಾಲ ಭಟ್ಟ ಗೋಸ್ವಾಮಿ ನಿರ್ಮಿಸಿರುವ ರಾಧಾ ರಾಮನ್ ದೇವಾಲಯ ವೃಂದಾವನದ ಅತ್ಯಂತ ಹಳೆಯ ದೇವಾಲಯಗಳಲ್ಲಿ ಒಂದು. ಈ ದೇವಾಲಯವು ರಾಧಾ ರಾಮನಿಗೆ ಸಮರ್ಪಿತವಾಗಿದ್ದು, ಆಧ್ಯಾತ್ಮಿಕ ತಾಣವನ್ನು ಅರಸಿ ಬರುವ ಭಕ್ತರ ನೆಚ್ಚಿನ ತಾಣಗಿದೆ.

Bhagyalakshmi N

Bhagyalakshmi N

Travel blogger and adventurer passionate about exploring new cultures and sharing travel experiences.

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

Read Previous

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

ವಿಹಂಗಮ ಸಂಗಮ

Read Next

ವಿಹಂಗಮ ಸಂಗಮ