Thursday, November 6, 2025
Thursday, November 6, 2025

“ತಾಯೆ ಬಾರೆ ಮೊಗವ ತೋರೆ…” ರಾಜ್ಯೋತ್ಸವದ ಹಂಬಲ

ಇಂದು ಉದ್ಯಮಿಗಳು, ಸಮಾಜದ ಹೋರಾಟಗಾರರು ಒಂದೇ ಚಿಂತೆಯನ್ನು ವ್ಯಕ್ತಪಡಿಸುತ್ತಿದ್ದಾರೆ – ಪರಿಸರವನ್ನು ಹಾಳುಮಾಡದೇ ಬೆಳವಣಿಗೆ ಸಾಧಿಸಬೇಕು. ಈ ಚಿಂತೆಗೆ ಉತ್ತರವೇ ಪ್ರವಾಸೋದ್ಯಮ. ಇದು ಅತ್ಯಂತ ಕಡಿಮೆ ಮಾಲಿನ್ಯ ಸೃಷ್ಟಿಸುವ ಉದ್ಯಮ, ಆದರೆ ಅತಿ ಹೆಚ್ಚು ಉದ್ಯೋಗ ಸೃಷ್ಟಿಸುವ, ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸುವ, ಕನ್ನಡ ಸಂಸ್ಕೃತಿಗೆ ಜಾಗತಿಕ ಗುರುತನ್ನು ತಂದುಕೊಡುವ ಶಕ್ತಿ ಹೊಂದಿದೆ.

  • ಕೆ. ರಾಧಾಕೃಷ್ಣ ಹೊಳ್ಳ

ಅಧ್ಯಕ್ಷರು, ಕರ್ನಾಟಕ ರಾಜ್ಯ ಟ್ರಾವೆಲ್ಸ ಮಾಲಿಕರ ಸಂಘ (ರಿ)

71ನೇ ಕನ್ನಡ ರಾಜ್ಯೋತ್ಸವದ ಈ ಘಳಿಗೆಯಲ್ಲಿ, ಕನ್ನಡನಾಡಿನ ಆತ್ಮಸ್ಮರಣೆಗೂ, ಭವಿಷ್ಯದ ದಿಕ್ಕಿಗೂ ಮಂಜೇಶ್ವರ ಗೋವಿಂದ ಪೈ ಅವರ ನುಡಿಗಳು ದಾರಿ ತೋರಿಸುತ್ತವೆ. “ತಾಯೆ ಬಾರೆ ಮೊಗವ ತೋರೆ ಕನ್ನಡಿಗರ ಮಾತೆಯೆ, ಹರಸು ತಾಯೆ ಸುತರ ಕಾಯೆ ನಮ್ಮ ಜನ್ಮದಾತೆಯೆ” – ಇದು ಕೇವಲ ಕಾವ್ಯವಲ್ಲ, ಕನ್ನಡಿಗರ ಜೀವನಾಡಿಯನ್ನು ಸ್ಪರ್ಶಿಸುವ ನಿಜವಾದ ಮನವಿ.

ಈ ನುಡಿಯ ಅರ್ಥ ನಮಗೆ ಸ್ಪಷ್ಟ. ತಾಯ್ನಾಡು ತನ್ನ ಮಕ್ಕಳನ್ನು ಕರೆಯುತ್ತಿದೆ – ಪ್ರಕೃತಿಯನ್ನು ಕಾಪಾಡಿ, ಸಂಸ್ಕೃತಿಯನ್ನು ಉಳಿಸಿ, ಚಿನ್ನದ ನಾಡು ಕಟ್ಟೋಣ. ಕರ್ನಾಟಕದ ಸಂಪತ್ತು ಕೇವಲ ತೈಲ, ಕಲ್ಲಿದ್ದಲು, ಉಕ್ಕು ಅಥವಾ ಕಾರ್ಖಾನೆಗಳಲ್ಲ. ಬದಲಾಗಿ ನಮ್ಮ ನಾಡಿನ ಶಕ್ತಿ ಪಶ್ಚಿಮಘಟ್ಟದ ಕಾಡುಗಳಲ್ಲಿ, ಜೋಗದ ಜಲಪಾತದಲ್ಲಿ, ಹಂಪಿಯ ಕಲ್ಲಿನ ಕಾವ್ಯದಲ್ಲಿ, ಬೇಲೂರು-ಹಳೇಬೀಡಿನ ಶಿಲ್ಪದಲ್ಲಿ, ಶ್ರವಣಬೆಳಗೊಳದ ಶಾಂತಿಯ ಪ್ರತಿಮೆಯಲ್ಲಿ ಅಡಗಿದೆ.

western ghats Karnataka

ಇಂದು ಉದ್ಯಮಿಗಳು, ಸಮಾಜದ ಹೋರಾಟಗಾರರು ಒಂದೇ ಚಿಂತೆಯನ್ನು ವ್ಯಕ್ತಪಡಿಸುತ್ತಿದ್ದಾರೆ – ಪರಿಸರವನ್ನು ಹಾಳುಮಾಡದೇ ಬೆಳವಣಿಗೆ ಸಾಧಿಸಬೇಕು. ಈ ಚಿಂತೆಗೆ ಉತ್ತರವೇ ಪ್ರವಾಸೋದ್ಯಮ. ಇದು ಅತ್ಯಂತ ಕಡಿಮೆ ಮಾಲಿನ್ಯ ಸೃಷ್ಟಿಸುವ ಉದ್ಯಮ, ಆದರೆ ಅತಿ ಹೆಚ್ಚು ಉದ್ಯೋಗ ಸೃಷ್ಟಿಸುವ, ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸುವ, ಕನ್ನಡ ಸಂಸ್ಕೃತಿಗೆ ಜಾಗತಿಕ ಗುರುತನ್ನು ತಂದುಕೊಡುವ ಶಕ್ತಿ ಹೊಂದಿದೆ.

ಹೋಂ ಸ್ಟೇಗಳಿಂದ ಹಿಡಿದು ಜನಪದ ಕಲೆಗಳ ಮೇಳಗಳವರೆಗೆ, ಸಾಹಸ ಕ್ರೀಡೆಗಳಿಂದ ಹಿಡಿದು ಆಧ್ಯಾತ್ಮಿಕ ಯಾತ್ರಾಸ್ಥಳಗಳವರೆಗೆ – ಪ್ರವಾಸೋದ್ಯಮವು ಎಲ್ಲ ಕ್ಷೇತ್ರಗಳಿಗೂ ಜೀವ ತುಂಬಬಲ್ಲದು. ಆದರೆ ಅದರ ಮೂಲತತ್ವ ಒಂದೇ: ಪ್ರಕೃತಿಯ ನಾಶವಿಲ್ಲದೆ ಅಭಿವೃದ್ಧಿ.

ಆದ್ದರಿಂದ ಈ ರಾಜ್ಯೋತ್ಸವದ ಹಂಬಲ ಹೀಗಿರಲಿ –

“ಭಾರತದ ಪ್ರವಾಸೋದ್ಯಮದಲ್ಲಿ ಮೊದಲ ಸ್ಥಾನ ಕರ್ನಾಟಕದ ಹಕ್ಕು; ಪ್ರಕೃತಿಯನ್ನು ಕಾಪಾಡಿ, ಸಂಸ್ಕೃತಿಯನ್ನು ಉಳಿಸಿ, ಕನ್ನಡನಾಡನ್ನು ಪರಿಸರ ಸ್ನೇಹಿ ಚಿನ್ನದ ನಾಡಾಗಿಸೋಣ.”

ಮಂಜೇಶ್ವರ ಪೈ ಅವರ ನುಡಿಗಳು ಇಂದು ಮತ್ತೆ ಪ್ರತಿಧ್ವನಿಸಲಿ –

“ತಾಯೆ ಬಾರೆ ಮೊಗವ ತೋರೆ… ನಮ್ಮ ಜನ್ಮದಾತೆಯೆ.”

ಇದು ಕೇವಲ ಭಾವಗೀತೆ ಅಲ್ಲ, ನಮ್ಮೆಲ್ಲರ ಬದುಕಿನ ಸಂಕಲ್ಪವಾಗಲಿ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

Read Previous

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ  ಹೊತ್ತ ಬೆಟ್ಟಗಳ ತವರೂರ..

Read Next

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ ಹೊತ್ತ ಬೆಟ್ಟಗಳ ತವರೂರ..