Thursday, June 12, 2025
Thursday, June 12, 2025

ಪವಿತ್ರ ಮಾನಸ ಸರೋವರ ಯಾತ್ರೆ

ಐದು ವರ್ಷಗಳ ಬಳಿಕ ಕೈಲಾಸ ಪರ್ವತ ಯಾತ್ರೆ ಆರಂಭವಾಗಲಿದೆ. ಜೂನ್ 30 ರಂದು ಯಾತ್ರೆಯ ಪುನಾರಂಭಕ್ಕೆ ದಿನ ನಿಗದಿಯಾಗಿದೆ. ಯಾತ್ರೆಯನ್ನು ಮರಳಿ ಆರಂಭಿಸುವ ಕುರಿತು ಉತ್ತರಾಖಂಡ ರಾಜ್ಯ ಸರಕಾರ ಮತ್ತು ಭಾರತೀಯ ವಿದೇಶಾಂಗ ಸಚಿವಾಲಯ ಜತೆಗೂಡಿ ದೆಹಲಿಯಲ್ಲಿ ಸೋಮವಾರ ಸಭೆ ನಡೆಸಿ ಚರ್ಚಿಸಿವೆ.

ಪರಬ್ರಹ್ಮನ ಮನಸ್ಸಿನಿಂದ ಸೃಷ್ಟಿಯಾಗಿರುವುದೇ 'ಮಾನಸ ಸರೋವರ'. ಕೈಲಾಸ ಪರ್ವತದಲ್ಲಿರುವ ಈ ಮಾನಸ ಸರೋವರ ಶಿವಪುರಾಣದಲ್ಲಿಯೂ ಉಲ್ಲೇಖವಾಗಿದೆ. ಪರಶಿವ ಮತ್ತು ಪಾರ್ವತಿ ದಾಂಪತ್ಯ ಜೀವನದ ಆರಂಭದ ಘಟ್ಟದಲ್ಲಿ ಮಾನಸ ಸರೋವರದ ಪ್ರಸ್ತಾಪವಿದೆ. ಇದು ಶಿವ-ಪಾರ್ವತಿ ಇಬ್ಬರಿಗೂ ಬಲು ಇಷ್ಟದ ಸ್ಥಳವಾಗಿದೆ ಎಂಬ ನಂಬಿಕೆ ಇದೆ. ಸನಾತನ ಧರ್ಮದ ಅನುಯಾಯಿಗಳಿಗೆ ಕೈಲಾಸ ಮಾನಸ ಸರೋವರ ಯಾತ್ರೆ ಪರಮ ಪವಿತ್ರ. ಆದರೆ, ಈ ಯಾತ್ರೆ ಬಲು ಕಠಿಣ. ದೈಹಿಕವಾಗಿ ಬಹಳ ಸಮರ್ಥರಾದವರು, ಶ್ವಾಸಕೋಶ ಮತ್ತು ಹೃದಯ ಸಂಬಂಧಿ ಸಮಸ್ಯೆ ಇದ್ದವರಿಗಂತೂ ಈ ಯಾತ್ರೆ ಅಸಾಧ್ಯ. ಈ ಯಾತ್ರೆಗೆ ಮುನ್ನ ಸಾಕಷ್ಟು ತಯಾರಿ, ತರಬೇತಿಯೂ ಅಗತ್ಯ.

ವೈದ್ಯರ ಪ್ರಮಾಣಪತ್ರ ಮುಖ್ಯ

ಕೈಲಾಸ ಮಾನಸ ಸರೋವರ ಯಾತ್ರೆ ಕೈಗೊಳ್ಳುವ ಎಲ್ಲಾ ಯಾತ್ರಿಕರ ಆರೋಗ್ಯ ತಪಾಸಣೆಯನ್ನು ಮೊದಲು ದೆಹಲಿಯಲ್ಲಿ ನಂತರ ಗುಂಜಿಯಲ್ಲಿ ಒಮ್ಮೆ ನಡೆಸಲಾಗುತ್ತದೆ. ಸದೃಢವಾಗಿದ್ದಾರೆ, ಆರೋಗ್ಯದಿಂದ ಇದ್ದಾರೆ. ಯಾತ್ರೆ ಮುಂದುವರಿಸಲು ಸಮರ್ಥರಿದ್ದಾರೆ ಎಂದು ವೈದ್ಯರು ಪ್ರಮಾಣೀಕರಿಸಿದರೆ ಮಾತ್ರವೇ ಯಾತ್ರೆ ಆರಂಭಿಸಲು ಮತ್ತು ಮುಂದುವರಿಸಲು ಅವಕಾಶ. ಇಲ್ಲವಾದರೆ ಯಾತ್ರೆಯಿಂದ ವಾಪಸಾಗಬೇಕಾಗುತ್ತದೆ. ಯಾತ್ರೆಯಲ್ಲಿಮಾರ್ಗದರ್ಶನ ಮಾಡುವವರು, ತರಬೇತಿ ಪಡೆದ ತುರ್ತು ವೈದ್ಯಕೀಯ ನೆರವು ಒದಗಿಸುವವರೂ ಇರುತ್ತಾರೆ.

5 ವರ್ಷಗಳ ಬಳಿಕದ ಯಾತ್ರೆ

2020ರಲ್ಲಿ ಕರೊನಾ ವೈರಸ್‌ ಇಡೀ ವಿಶ್ವವನ್ನು ಆವರಿಸಿಕೊಂಡು ಲಕ್ಷಾಂತರ ಜೀವಗಳನ್ನು ಬಲಿಪಡೆದುಕೊಂಡ ಸಂದರ್ಭ ಮಾನಸ ಸರೋವರ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿತ್ತು. ಪ್ರತಿ ವರ್ಷ ಆಯೋಜಿಸಲಾಗುತ್ತಿದ್ದ ಈ ಯಾತ್ರೆಯನ್ನು 2020ರಲ್ಲಿ ಕೋವಿಡ್-‌19 ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ನಿಲ್ಲಿಸಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರಾಖಂಡ್‌ ಮುಖ್ಯಮಂತ್ರಿ ಪುಷ್ಕರಸಿಂಗ್ ಧಾಮಿ ಅವರ ಪ್ರಯತ್ನದ ಫಲದಿಂದಾಗಿ ಈ ವರ್ಷ ಯಾತ್ರೆ ಪುನಾರಂಭಗೊಳ್ಳುತ್ತಿದೆ. ಭಕ್ತರು, ಪರ್ವತಾರೋಹಿಗಳ ಸತತ ಬೇಡಿಕೆ ಹಿನ್ನೆಲೆ ಕೇಂದ್ರ ಸರಕಾರ ಮಾನಸ ಸರೋವರ ಯಾತ್ರೆಯನ್ನು ಐದು ವರ್ಷಗಳ ಬಳಿಕ ಮರಳಿ ಆರಂಭಗೊಳ್ಳುತ್ತಿದೆ. ಜೂನ್ 30 ರಂದು ಯಾತ್ರೆಯ ಪುನಾರಂಭಕ್ಕೆ ದಿನ ನಿಗದಿಯಾಗಿದೆ. ಯಾತ್ರೆಯನ್ನು ಮರಳಿ ಆರಂಭಿಸುವ ಕುರಿತು ಉತ್ತರಾಖಂಡ ರಾಜ್ಯ ಸರಕಾರ ಮತ್ತು ಭಾರತೀಯ ವಿದೇಶಾಂಗ ಸಚಿವಾಲಯ ಜತೆಗೂಡಿ ದೆಹಲಿಯಲ್ಲಿ ಸೋಮವಾರ ಸಭೆ ನಡೆಸಿ ಚರ್ಚಿಸಿವೆ. ತೀರ್ಥಯಾತ್ರೆಯ ಪುನಾರಂಭ ಬಗ್ಗೆ ಉಲ್ಲೇಖವಾಗಿದೆ.

250 ಯಾತ್ರಿಕರ ಮೊದಲ ತಂಡ

250 ಯಾತ್ರಿಕರು ತಲಾ 50 ಮಂದಿಯ ಐದು ಗುಂಪುಗಳಾಗಿ ದೆಹಲಿಯಿಂದ ಪ್ರಯಾಣ ಆರಂಭಿಸಲಿದ್ದಾರೆ. ಕೈಲಾಸ ಮಾನಸ ಸರೋವರ ಯಾತ್ರೆಯ ಈ ಪಯಣ ಒಟ್ಟು 22 ದಿನಗಳದ್ದಾಗಿರುತ್ತದೆ. ಭಾರತದ ಗಡಿ ದಾಟಿ ʼಲಿಪುಲೇಖ್ ಪಾಸ್' ಸ್ಥಳದಲ್ಲಿ ಚೀನಾವನ್ನು ಪ್ರವೇಶಿಸಿ ಕೈಲಾಸ ಪರ್ವತದತ್ತ ಸಾಗುವ ಯಾತ್ರಿಕರು ಕಡಿದಾದ ಮಾರ್ಗದಲ್ಲಿ ಸಾಗಿ, ಹಿಮಮಯವಾದ ಪರ್ವತವೇರಿ, ಮಾನಸ ಸರೋವರ ಯಾತ್ರೆಯ ಪ್ರಮುಖ ಘಟ್ಟವನ್ನು ಮುಟ್ಟುತ್ತಾರೆ. 22 ದಿನಗಳ ಈ ಪಯಣದ ಬಳಿಕ ದೆಹಲಿಗೆ ಮರಳುತ್ತಾರೆ.

ಯಾತ್ರೆಯ ಹಾದಿಯಲ್ಲಿ..

ಕೈಲಾಸ ಮಾನಸ ಸರೋವರ ಯಾತ್ರೆಯ ಮೊದಲ ತಂಡ ಜುಲೈ 10ರಂದು ಲಿಪು ಲೇಖ್ ಪಾಸ್ ಮೂಲಕ ಚೀನಾವನ್ನು ಪ್ರವೇಶಿಸಲಿದೆ. ಕೊನೆಯ ತಂಡ ಆಗಸ್ಟ್ 22ರಂದು ಚೀನಾದಿಂದ ಭಾರತಕ್ಕೆ ತೆರಳಲಿದೆ. ದೆಹಲಿಯಿಂದ ಹೊರಡುವ ಪ್ರತಿ ತಂಡ ಉತ್ತರಾಖಂಡ ರಾಜ್ಯದ ಚಂಪಾವತ್ ಜಿಲ್ಲೆಯ ಠನಕಪುರದಲ್ಲಿ ಒಂದು ರಾತ್ರಿ, ಪಿಥೋರಗಢ ಜಿಲ್ಲೆಯ ಧಾರ್ಚುಲಾದಲ್ಲಿ ಒಂದು ರಾತ್ರಿ, ಗುಂಜಿಯಲ್ಲಿ ಎರಡು ರಾತ್ರಿ ಮತ್ತು ನಭಿದಂಗ್‌ನಲ್ಲಿ ಎರಡು ರಾತ್ರಿ ತಂಗಬೇಕಾಗುತ್ತದೆ. ಆ ಬಳಿಕ ಚೀನಾದ ಟಕಲಕೋಟ್ ಪ್ರವೇಶಿಸಲಿದೆ. ಆ ಬಳಿಕ ಕೈಲಾಸ ಪರ್ವತದ ಪಾದದ ಬಳಿ ತೆರಳುವ ಯಾತ್ರಿಕರು ಅಲ್ಲಿ ಮಾನಸ ಸರೋವರದ ದರ್ಶನ ಮಾಡಲಿದ್ದಾರೆ. ಮಾನಸ ಸರೋ ವರ ವೀಕ್ಷಣೆ ಬಳಿಕ ಯಾತ್ರಿಕರು ಚೀನಾ ಮಾರ್ಗದಿಂದ ಹೊರಟು ಪಿಥೋರಗಢ ಜಿಲ್ಲೆಯ ಬುಂಡಿಯಲ್ಲಿ ಒಂದು ರಾತ್ರಿ, ಚೌಕೋರಿಯಲ್ಲಿ ಒಂದು ರಾತ್ರಿ ಮತ್ತು ಅಲ್ಲೋರಾದಲ್ಲಿ ಒಂದು ರಾತ್ರಿ ತಂಗಬೇಕಾ ಗುತ್ತದೆ. ಆ ಬಳಿಕ ದೆಹಲಿಗೆ ವಾಪಸಾಗಲಿ ದ್ದಾರೆ. ದೆಹಲಿಯಿಂದ ಆರಂಭಗೊಂಡು ದೆಹಲಿಯಲ್ಲೇ ಕೊನೆಗೊಳ್ಳುವ ಈ ಯಾತ್ರೆ ಒಟ್ಟು 22 ದಿನಗಳ ಪ್ರಯಾಣವಾಗಿರುತ್ತದೆ.

17000 ಅಡಿಗಳಷ್ಟು ಎತ್ತರ

ಉತ್ತರಾಖಂಡ ರಾಜ್ಯದ ಪಿಥೋರಗಢ ಜಿಲ್ಲೆಯಲ್ಲಿ 17,000 ಅಡಿ ಎತ್ತರದಲ್ಲಿರುವ ಲಿಪುಲೇಖ್ ಪಾಸ್ ಮೂಲಕ ಕೈಲಾಸ ಮಾನಸ ಸರೋವರ ಯಾತ್ರೆ ಹಾದು ಹೋಗಲಿದೆ. ಸನಾತನ ಧರ್ಮದ ನಂಬಿಕೆಗಳನ್ವಯ ಕೈಲಾಸ ಪರ್ವತ ಶಿವನ ವಾಸ ಸ್ಥಾನವಾಗಿದೆ. ಇದೇ ಕೈಲಾಸ ಪರ್ವತದಲ್ಲಿ ಮಾನಸ ಸರೋವರವಿದೆ. ಈ ಸರೋವರದ ದರ್ಶನ ಮಾತ್ರದಿಂದಲೇ ಸಕಲ ಪಾಪಗಳ ನಿವಾರಣೆ ಆಗುತ್ತದೆ. ಮನಸ್ಸು-ಆತ್ಮ ಪರಿಶುದ್ಧವಾಗುತ್ತದೆ ಎಂಬುದು ಸನಾತನ ಧರ್ಮದ ನಂಬಿಕೆ.

ಕೈಲಾಸ ಪರ್ವತವನ್ನು ಪರಿಕ್ರಮಿಸಿ,ಮಾನಸ ಸರೋವರದಲ್ಲಿ ಒಮ್ಮೆ ಮಿಂದರೆ ಬದುಕಿಗೆ ಮುಕ್ತಿ ದೊರೆಯುತ್ತದೆ ಎಂಬ ಮಾತಿದೆ. ಜೈನ ಮತ್ತು ಬೌದ್ಧ ಧರ್ಮ ದವರೂ ಈ ಯಾತ್ರೆ ಕೈಗೊಳ್ಳುವುದಿದೆ.

ಮಾನಸ ಸರೋವರ ವೈಶಿಷ್ಟ್ಯ

ಮಾನಸ ಸರೋವರ ಸ್ವಾಯತ್ತ ಟಿಬೆಟ್ ಪ್ರದೇಶದಲ್ಲಿದೆ. ಇದು ಚೀನಾದ ಒಂದು ಭಾಗವಾಗಿದೆ. ಇಲ್ಲಿ ಸಿಂಧೂ, ಬ್ರಹ್ಮಪುತ್ರ, ಸಟ್ಲಜ್ ನದಿಗಳ ಉಗಮವಾಗುತ್ತದೆ. ಸಮುದ್ರ ಮಟ್ಟದಿಂದ 4600 ಮೀಟರ್ (15100 ಅಡಿ) ಎತ್ತರದಲ್ಲಿ ಮಾನಸ ಸರೋವರವಿದೆ. 320 ಚದರ ಕಿಮೀಗಳಷ್ಟು ವಿಸ್ತಾರವಾಗಿದೆ. ಗರಿಷ್ಠ 100 ಮೀಟರ್ (330 ಅಡಿ) ಆಳವಿದೆ. ಪರಬ್ರಹ್ಮನ ಮನಸ್ಸಿನಲ್ಲಿ ಮೊದಲು ಮೂಡಿದ ಸರೋವರ ಆ ಬಳಿಕ ಭೂಮಿಯ ಮೇಲೆ ಸಾಕಾರ ಗೊಂಡಿತು. ಇದು ಪರಶಿವ ಮತ್ತು ಪಾರ್ವತಿ ದೇವಿಗೆ ಬಲು ಇಷ್ಟವಾದ ಸ್ಥಳ ವಾಗಿದೆ. ಪರಿಶುದ್ಧ ಜಲದಿಂದ ಕೂಡಿರುವ ಈ ಸರೋವರದಲ್ಲಿ ಒಮ್ಮೆ ಮಿಂದರೆ ಪಾಪವೆಲ್ಲಾ ತೊಳೆದು ಹೋಗಿ ಆತ್ಮ ಪರಿಶುದ್ಧವಾಗುತ್ತದೆ ಎಂಬ ನಂಬಿಕೆ ಇದೆ.

Bhagyalakshmi N

Bhagyalakshmi N

Travel blogger and adventurer passionate about exploring new cultures and sharing travel experiences.

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

Read Previous

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

Read Next

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ