ಈ ಮೂರು ಜಾಗಗಳಿಗೆ ನೀವು ಹೋಗದಿದ್ದರೆ ಹೇಗೆ?
ಇಂಥ ಬೇಸಿಗೆ ಕಾಲದಲ್ಲೂ ಪ್ರವಾಸಿಗರು ದಂಡು ದಂಡಾಗಿ ಈ ಜೈಪುರ ಸಿಟಿ ಪ್ಯಾಲೇಸ್ಗೆ ಭೇಟಿ ನೀಡುತ್ತಾರೆ. ವಿಶೇಷವೆಂದರೆ ಬೇಸಿಗೆ ದಿನಗಳಲ್ಲೇ ಈ ಅರಮನೆ ಹೆಚ್ಚು ಕಳೆ ಕಟ್ಟುತ್ತದೆ. ವರ್ಷದ ಅಷ್ಟೂ ದಿನ ಈ ಜಾಗ ಪ್ರವಾಸಿಗರನ್ನು ಸೆಳೆದರೂ ಬೇಸಿಗೆಯಲ್ಲಿ ತನ್ನ ಮಹತ್ವವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುತ್ತದೆ.
ಈ ರಣ ಬಿಸಿಲಿನಲ್ಲಿ ಸುಮ್ಮನೆ ಮನೆಯಲ್ಲಿ ಕೂತು ದಣಿವಾರಿಸಿಕೊಳ್ಳುತ್ತಿದ್ದೀರಾ? ಹೊರಗೆಲ್ಲೂ ಹೋಗುವುದೇ ಬೇಡ ಎಂಬ ನಿರ್ಧಾರಕ್ಕೆ ಬಂದಿದ್ದೀರಾ? ಈ ಸುಡು ಬಿಸಿಲಿನಲ್ಲೂ ನೀವು ಒಂದಷ್ಟು ಜಾಗಗಳಿಗೆ ಹೋಗಬೇಕು. ಆ ಜಾಗ ಕೊಡುವ ದಿವ್ಯ ಅನುಭೂತಿಯನ್ನು ಅನುಭವಿಸಬೇಕು. ಮನಸ್ಸನ್ನು ಚಿಲ್ ಆಗಿ ಇಟ್ಟುಕೊಳ್ಳಬೇಕು. ಬಿಸಿಲನ್ನೇ ನೆಪವಾಗಿಸಿಕೊಂಡು ಸುಮ್ಮನೆ ಸಮಯವನ್ನು ವ್ಯರ್ಥ ಮಾಡಬೇಡಿ. ಬಿಸಿಲಿನ ಝಳದಲ್ಲೂ ನಿಮ್ಮನ್ನು ತಂಪಾಗಿಸುವ ಮೂರು ಜಾಗಗಳಿವೆ. ಈಗಲೇ ಅಲ್ಲಿಗೆ ಹೊರಟು ನಡೆಯಿರಿ. ಅಲ್ಲಿಗೆ ಹೋದ ಕೂಡಲೇ ನಿಮ್ಮ ಭಾವ ಪ್ರಪಂಚ ಉಬ್ಬಿ ನಲಿಯಲಿ. ನಿಮಗೊಂದು ರಿಲ್ಯಾಕ್ಸೇಷನ್ ಸಿಗಲಿ. ಅಷ್ಟಕ್ಕೂ ಆ ಮೂರು ಜಾಗಗಳು ಯಾವುವು?
ಜೈಪುರ ಸಿಟಿ ಪ್ಯಾಲೇಸ್
ಜೈಪುರದ ಸಿಟಿ ಪ್ಯಾಲೇಸ್(Jaipur City Palace) ಅದ್ಭುತ ವಿನ್ಯಾಸವುಳ್ಳ ಅರಮನೆಯಾಗಿದೆ. ಕಣ್ಮನ ಸೆಳೆಯುವ ವಾಸ್ತುಶಿಲ್ಪವು ಇತಿಹಾಸದ ಬಗ್ಗೆ ಆಸಕ್ತಿಯುಳ್ಳವರನ್ನು ಬಹುವಾಗಿ ಆಕರ್ಷಿಸುತ್ತದೆ. ಮಹಾರಾಜ ಸವಾಯಿ ಜೈ ಸಿಂಗ್ II 1727 ರಲ್ಲಿ ಈ ಅರಮನೆಯನ್ನು ನಿರ್ಮಿಸಿದ್ದಾನೆ ಎಂದು ಹೇಳಲಾಗಿದೆ. ಇಲ್ಲಿ ಮಹಾರಾಜ ಸವಾಯಿ ಜೈ ಸಿಂಗ್(Maharaj Savai Jai Singh) ಅವರ ವಸ್ತು ಸಂಗ್ರಹಾಲಯವು ಇದೆ. ಅಲ್ಲಿ ಸಂಗ್ರಹವಾಗಿರುವ ಪ್ರತಿ ವಸ್ತುವನ್ನೂ ದಿಟ್ಟಿಸುತ್ತಾ, ಮಾಹಿತಿ ಸಂಗ್ರಹಿಸುತ್ತಾ ಹೋದರೆ ನಮ್ಮನ್ನು ನಾವೇ ಮರೆತು ಬಿಡುತ್ತೇವೆ. ಅರಮನೆಯ ಸಂಕೀರ್ಣವು ಹಲವಾರು ಕಟ್ಟಡಗಳು, ವಿವಿಧ ಪ್ರಾಂಗಣಗಳು, ಗ್ಯಾಲರಿಗಳು, ರೆಸ್ಟೋರೆಂಟ್ಗಳು ಮತ್ತು ಮ್ಯೂಸಿಯಂ ಟ್ರಸ್ಟ್ನ ಕಚೇರಿಗಳನ್ನು ಹೊಂದಿದೆ. ಇಂಥ ಬೇಸಿಗೆ ಕಾಲದಲ್ಲೂ ಪ್ರವಾಸಿಗರು ದಂಡು ದಂಡಾಗಿ ಈ ಜೈಪುರ ಸಿಟಿ ಪ್ಯಾಲೇಸ್ಗೆ ಭೇಟಿ ನೀಡುತ್ತಾರೆ. ವಿಶೇಷವೆಂದರೆ ಬೇಸಿಗೆ ದಿನಗಳಲ್ಲೇ ಈ ಅರಮನೆ ಹೆಚ್ಚು ಕಳೆ ಕಟ್ಟುತ್ತದೆ. ವರ್ಷದ ಅಷ್ಟೂ ದಿನ ಈ ಜಾಗ ಪ್ರವಾಸಿಗರನ್ನು ಸೆಳೆದರೂ ಬೇಸಿಗೆಯಲ್ಲಿ ತನ್ನ ಮಹತ್ವವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುತ್ತದೆ.

ಪಂಜಾಬ್ ಗೋಲ್ಡನ್ ಟೆಂಪಲ್
ಪಂಜಾಬ್ನ ಅಮೃತಸರದಲ್ಲಿರುವ ಪ್ರಸಿದ್ಧ ಗೋಲ್ಡನ್ ಟೆಂಪಲ್(Golden Temple) ಸಿಖ್(Sikh) ಧರ್ಮದ ಪ್ರಮುಖ ಯಾತ್ರಾ ಸ್ಥಳವಾಗಿದೆ. ಆಲಯದ ಒಳಭಾಗದಲ್ಲಿ ಮಾನವ ನಿರ್ಮಿತ ಪವಿತ್ರ ಕೊಳವಿದೆ. ಇಳಿ ಸಂಜೆಯಲ್ಲಿ ಕತ್ತಲು ಆವರಿಸುತ್ತಿದ್ದಂತೆ ದೇವಾಲಯವು ಮತ್ತಷ್ಟು ಆಕರ್ಷಿತವಾಗಿ ಕಾಣಿಸುತ್ತದೆ. ಸುಮಾರು 16 ನೇ ಶತಮಾನದಲ್ಲಿ ನಿರ್ಮಿಸಲಾದ ಈ ಆಲಯಕ್ಕೆ ದೇಶ-ವಿದೇಶಗಳಿಂದ ಪ್ರವಾಸಿಗರು ಭೇಟಿ ನೀಡುತ್ತಾರೆ. 1604 ರಲ್ಲಿ 5ನೇ ಸಿಖ್ ಗುರು ಅರ್ಜನ್ ಮೊದಲ ಹರ್ಮಂದಿರ್ ಸಾಹಿಬ್ ನಿರ್ಮಿಸಿದರು ಎಂದು ಹೇಳಲಾಗಿದೆ. ಪಂಜಾಬ್ ರಾಜ್ಯಕ್ಕೆ ಹೋಗುವ ಪ್ರತಿಯೊಬ್ಬರೂ ಈ ಜಾಗವನ್ನು ನೋಡಿ ಕಣ್ತುಂಬಿಕೊಳ್ಳುತ್ತಾರೆ. ಬೇಸಿಗೆಯಲ್ಲಿ ಭೇಟಿ ಕೊಡಬಹುದಾದ ಪ್ರಮುಖ ಸ್ಥಳಗಳಲ್ಲಿ ಇದೂ ಒಂದು.

ರಣಥಂಬೋರ್ ರಾಷ್ಟ್ರೀಯ ಉದ್ಯಾನವನ
ರಾಜಸ್ಥಾನದಲ್ಲಿರುವ(Rajasthan) ರಣಥಂಬೋರ್ ರಾಷ್ಟ್ರೀಯ ಉದ್ಯಾನವನವು(Ranthambore National Park) ಅತ್ಯಂತ ಪ್ರಸಿದ್ಧತೆಯನ್ನು ಪಡೆದಿದೆ. ಅಲ್ಲಿ ವಿವಿಧ ರೀತಿಯ ವನ್ಯ ಜೀವಿಗಳಿವೆ. ವನ್ಯಜೀವಿಗಳ ಪ್ರೇಮಿಗಳು ರಣಥಂಬೋರ್ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಬಹುದು. ಈ ಉದ್ಯಾನವನಕ್ಕೆ ಐತಿಹಾಸಿಕ ರಣಥಂಬೋರ್ ಕೋಟೆಯ ಹೆಸರನ್ನು ಇಡಲಾಗಿದೆ. 282 ಕಿ.ಮೀ ವಿಸ್ತೀರ್ಣವನ್ನು ಹೊಂದಿರುವ ಈ ಉದ್ಯಾನವು 1955 ರಲ್ಲಿ ಸವಾಯಿ ಮಾಧೋಪುರ್ ಆಟದ ಅಭಯಾರಣ್ಯವಾಗಿ ಸ್ಥಾಪಿಸಲಾಯಿತು. ಇನ್ನು ಸಫಾರಿ ಮಾಡಲು ಇದೊಂದು ದಿ ಬೆಸ್ಟ್ ಅಭಯಾರಣ್ಯ ಎಂದೇ ಹೇಳಬಹುದು. ಬೆಳಗಿನ ಜಾವದ ಸಣ್ಣ ಕತ್ತಲಿನಲ್ಲಿ ಸಫಾರಿ ಹೊರಟಾಗ ಸಿಗುವ ಮಜಾವೇ ಬೇರೆ.
