ಹಿಸಾರ್ ನಿಂದ ಅಯೋಧ್ಯೆ ವಿಮಾನಯಾನಕ್ಕೆ ಮೋದಿ ಹಸಿರು ನಿಶಾನೆ
ಹರಿಯಾಣದ ಹಿಸಾರ್ ನಿಂದ ಆಯೋಧ್ಯೆ ನಡುವಿನ ವಿಮಾನಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಹಸಿರು ನಿಶಾನೆ ತೋರಿಸಿ, ಹೊಸ ಟರ್ಮಿನಲ್ ಗೆ ಶಂಖು ಸ್ಥಾಪನೆ ನೆರವೇರಿಸಿದರು.
ಹಿಸಾರ್(Hisar): ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರು ಏಪ್ರಿಲ್ 14 ರಂದು ಹಿಸಾರ್ ನಿಂದ ಅಯೋಧ್ಯೆ (Ayodhye) ನಡುವಿನ ವಾಣಿಜ್ಯ ವಿಮಾನ ಹಾರಾಟಕ್ಕೆ ಹಸಿರು ನಿಶಾನೆ ತೋರಿ, ವಿಮಾನ ನಿಲ್ದಾಣದಲ್ಲಿ ಹೊಸ ಟರ್ಮಿನಲ್ (New Terminal) ಕಟ್ಟಡಕ್ಕೆ ಶಂಖುಸ್ಥಾಪನೆ ಮಾಡಿದರು.
ವಿಮಾನ ಪ್ರಯಾಣವನ್ನು ಸುರಕ್ಷಿತ, ಕೈಗೆಟುಕುವ ಮತ್ತು ಎಲ್ಲರಿಗೂ ಪ್ರವೇಶಿಸುವಂತೆ ಮಾಡುವ ತಮ್ಮ ಬದ್ಧತೆಗೆ ಅನುಗುಣವಾಗಿ, ಪ್ರಧಾನಿ ಮೋದಿ ಅವರು 410 ಕೋಟಿ ರು.ಗಳಿಗೂ ಹೆಚ್ಚು ಅಂದಾಜು ವೆಚ್ಚದಲ್ಲಿ ನಿರ್ಮಿಸಲಾಗುವ ಮಹಾರಾಜ ಅಗ್ರಸೇನ್ ವಿಮಾನ ನಿಲ್ದಾಣದ (Maharaj Agrasen Airport) ಹೊಸ ಟರ್ಮಿನಲ್ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.
ಇದು ಅತ್ಯಾಧುನಿಕ ಪ್ರಯಾಣಿಕರ ಟರ್ಮಿನಲ್, ಸರಕು ಸಾಗಣೆ ಟರ್ಮಿನಲ್ ಮತ್ತು ಎಟಿಸಿ ಕಟ್ಟಡವನ್ನು ಒಳಗೊಂಡಿರುತ್ತದೆ. ಈ ಯೋಜನೆಯನ್ನು ಎರಡು ವರ್ಷಗಳಲ್ಲಿ ಪೂರ್ಣಗೊಳಿಸುವ ಗುರಿಯನ್ನು ಹೊಂದಿದೆ.
ಹರಿಯಾಣದ ಹಿಸಾರ್ ನಿಂದ ಅಯೋಧ್ಯೆಗೆ ವಾರಕ್ಕೆ ಎರಡು ಬಾರಿ ಮತ್ತು ಜಮ್ಮು, ಅಹಮದಾಬಾದ್, ಜೈಪುರ ಮತ್ತು ಚಂಡೀಗಢಕ್ಕೆ ವಾರದಲ್ಲಿ ಮೂರು ವಿಮಾನಗಳು ಹರಿಯಾಣದ ವಾಯುಯಾನ ಸಂಪರ್ಕದಲ್ಲಿ ಗಮನಾರ್ಹ ಪ್ರಗತಿಯನ್ನು ಸೂಚಿಸುತ್ತವೆ ಎಂದು ತಿಳಿಸಲಾಗಿದೆ.