ಹಿಮವದ್ ಗೋಪಾಲ ಸ್ವಾಮಿ ಬೆಟ್ಟ!
ರಾಜ್ಯದ ಅತ್ಯಂತ ಎತ್ತರದ ಬೆಟ್ಟಗಳಲ್ಲಿ ಮೂರನೇ ಸ್ಥಾನದಲ್ಲಿರುವ ಹಿಮವದ್ ಗೋಪಾಲಸ್ವಾಮಿ ಬೆಟ್ಟವು ಸಮುದ್ರಮಟ್ಟದಿಂದ ಸುಮಾರು 1440 ಮೀ ಎತ್ತರದಲ್ಲಿ ಬೆಟ್ಟವಿದೆ ಮತ್ತು ಶ್ರೀ ಕೃಷ್ಣನ ದೇವಾಲಯವಿದೆ ಪುರಾಣದಲ್ಲಿ ಕೃಷ್ಣನ ಕೊಳಲ ನಿನಾದಕ್ಕೆ ಗೋವುಗಳು ಕೃಷ್ಣಪರಮಾತ್ಮರ ಸುತ್ತ ನಿಲ್ಲುತ್ತಿದ್ದವು.
ಧಾರ್ಮಿಕ ಹಾಗೂ ಐತಿಹಾಸಿಕ ಪರಂಪರೆ ಹೊಂದಿರುವ ನಿಸರ್ಗಗಳ ತಾಣ ಹಾಗೂ ದ್ವಾಪರ ಕೃಷ್ಣನ ದೇವಾಲಯವೆ ಹಿಮವದ್ ಗೋಪಾಲ ಸ್ವಾಮಿ ಬೆಟ್ಟ(Himavad Gopalaswamy). ಒಮ್ಮೆ ನೋಡಿದರೆ ಮತ್ತೊಮ್ಮೆ ನೋಡಲೇ ಬೇಕೆನಿಸುವ ಕರ್ನಾಟಕದ ರಮಣೀಯ ಸ್ಥಳ. ಗರ್ಭಗುಡಿಯ ಬಾಗಿಲಿನ ಮೇಲ್ಭಾಗದಿಂದ ಸತತವಾಗಿ ಹಿಮದನೀರು ಸುರಿಯುತ್ತದೆ, ಅದಕ್ಕಾಗಿಯೇ ಹಿಮವದ್ ಗೋಪಾಲಸ್ವಾಮಿ ಬೆಟ್ಟ ಎಂಬ ಹೆಸರು ಬಂದಿದೆ. ವರ್ಷಪೂರ್ತಿ ಹಿಮಗಳಿಂದಲೇ ಆವರಿಸಿರುವ ಬೆಟ್ಟವು ಮಂಜು ಮುಸುಕಿದ ದೃಶ್ಯಗಳ ಬಿಂಬಿಸುವ ಹಿತವಾದ ವಾತಾವರಣ, ತಂಗಾಳಿಯು ಇಲ್ಲೇ ಹುಟ್ಟಿದ್ದು ಅನ್ನಿಸುವಷ್ಟು ಗಾಳಿ ಈ ಬೆಟ್ಟದಲ್ಲಿ ಜೀವಿಸುವುದು. ಹಿಮಗಳಿಂದ ಮುತ್ತಿಟ್ಟ ಮಣಿಗಳಂತೆ ಕಂಗೊಳಿಸುವ ಈ ಬೆಟ್ಟವು ಕಣ್ಮನ ಸೆಳೆಯುವುದು.
ಬೆಟ್ಟದ ಸುತ್ತೆಲ್ಲ ಒಂದು ಪ್ರದಕ್ಷಿಣೆ ಹಾಕಿದರೆ ತಂಗಾಳಿಯಲಿ ತೇಲಿ ಹೋಗುವ ಸುಂದರ ಅನುಭವದ ಕಚಗುಳಿ ನೋಡುಗರ ಪಾಲಿಗೆ ರಮಿಸುವುದು ಇಷ್ಟೊಂದು ಹಸುರಿನ ಸಂಪತ್ತನ್ನು ಪ್ರಕೃತಿ ದೇವತೆಯು ಬಚ್ಚಿಟ್ಟ ಈ ಸುಂದರ ಕೃಷ್ಣನ ತಾಣಕ್ಕೆ ಸೋಲದೆ ಇರಲು ಸಾಧ್ಯವೇ? ನಿಸರ್ಗದ ಬಣ್ಣಗಳೆಲ್ಲ ಇಲ್ಲೇ ಅವಿತು ಮುದ ನೀಡಿವ ಆನಂದಕ್ಕೆ ಅದೆಷ್ಟು ಕುಣಿದು ಕುಪ್ಪಳಿಸುವುದು. ಮನ ಸುತ್ತೆಲ್ಲ ಹಸಿರಿನ ವೈಭೋಗದ ಅನುಪಮ ಸೌಂದರ್ಯ ಸ್ವರ್ಗವೇ ಕಣ್ಣಿನ ಮುಂದೆ ಇದೆ ಎನ್ನುವ ಭಾವ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಸಿಗುವುದು. ಮೋಡಗಳ ಜೊತೆಗೆ ಓಡಿದ ತಲ್ಲಣ ಗಾಳಿಯಲಿ ತೇಲಿ ಹೋದ ಭಾವಕ್ಕೆ ಏನೆಂದು ಹೆಸರಿಡಲಿ ಎನ್ನುವ ಗೊಂದಲವು ಸೃಷ್ಟಿಯಾಗುವುದರಲ್ಲಿ ಸಂದೇಹವಿಲ್ಲ. ಪ್ರಕೃತಿಯನ್ನು ಆರಾಧಿಸುವ ಮತ್ತು ಆಹ್ಲಾದಿಸುವ ಪ್ರೇಮಿಗಳಿಗೆ ಮಂಜಿನ ಹನಿ ಮೋಡಗಳನ್ನು ತಂದು ಭೂಮಿಯಲ್ಲಿ ಓಡಾಡಿಸಿದಂತೆ ಹೋಲುವ ನಿಸರ್ಗದ ಚಿತ್ತಾರಗಳನ್ನೇ ಹೆಕ್ಕಿ ಕಲೆ ಹಾಕಿದೆ ಹಿಮವದ್ ಗೋಪಾಲ ಸ್ವಾಮಿ ಬೆಟ್ಟವು. ರಾಜ್ಯದ ಅತ್ಯಂತ ಎತ್ತರದ ಬೆಟ್ಟಗಳಲ್ಲಿ ಮೂರನೇ ಸ್ಥಾನದಲ್ಲಿರುವ ಹಿಮವದ್ ಗೋಪಾಲಸ್ವಾಮಿ ಬೆಟ್ಟವು ಸಮುದ್ರಮಟ್ಟದಿಂದ ಸುಮಾರು 1440 ಮೀ ಎತ್ತರದಲ್ಲಿ ಬೆಟ್ಟವಿದೆ ಮತ್ತು ಶ್ರೀ ಕೃಷ್ಣನ ದೇವಾಲಯವಿದೆ ಪುರಾಣದಲ್ಲಿ ಕೃಷ್ಣನ ಕೊಳಲ ನಿನಾದಕ್ಕೆ ಗೋವುಗಳು ಕೃಷ್ಣಪರಮಾತ್ಮರ ಸುತ್ತ ನಿಲ್ಲುತ್ತಿದ್ದವು. ಕೊಳಲ ಸ್ವರಕ್ಕೆ ಮೈ ಮರೆತು ಗಾನಸುಧೆಯಲ್ಲಿ ಮಗ್ನರಾಗುತಿದ್ದರು ಮತ್ತು ಪ್ರಕೃತಿ ದೇವತೆಯು ಕೊಳಲ ಸುಧೆಗೆ ಸೋತು ಅಮೋಘವಾಗಿ ನರ್ತಿಸುತ್ತಿದ್ದಳು ಎನ್ನುವ ಪುರಾಣ ಕತೆಯ ಇತಿಹಾಸವೆ ಬೆಟ್ಟದ ಜೊತೆಗೆ ಇರುವುದು ಹೆಮ್ಮೆಯ ವಿಷಯ.
ಕಾಗೆಗಳೇ ಇಲ್ಲದ ಬೆಟ್ಟವು ಇದಾಗಿದೆ. ಬೆಟ್ಟದ ತುದಿಯಿಂದ ಸೂರ್ಯೋದಯ ಮತ್ತು ಸೂರ್ಯಾಸ್ತಗಳ ಅದ್ಭುತ ವಿಹಂಗಮ ನೋಟಗಳು ಸುಪ್ರಸಿದ್ಧಿ ಪಡೆದಿದೆ. ಪ್ರವಾಸಿಗರು ಮುಕ್ತವಾಗಿ ಓಡಾಡುವ ಅವಕಾಶವಿರುವುದಿಲ್ಲ ಏಕೆಂದರೆ ಸಮೀಪದಲ್ಲಿ ಬಂಡೀಪುರ(Bandipura) ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಪ್ರದೇಶವಾಗಿರುವುದರಿಂದ ಬೆಳಿಗ್ಗೆ 7 ರಿಂದ ಸಂಜೆ 5 ರ ಮೇಲೆ ಪ್ರವೇಶವಿಲ್ಲ ಮತ್ತು ಅಲ್ಲಿ ವಾಸಿಸುವ ಮಾತೆ ಇಲ್ಲ ಏಕೆಂದರೆ ಕಾಡಾನೆಗಳ ಸಂಚಾರವು ಮನುಷ್ಯರ ಪಾಲಿಗೆ ಅಪಾಯವಿದೆ ಎಂದು ಎಚ್ಚರಿಕೆ ವಹಿಸಿ ಅರಣ್ಯ ಇಲಾಖೆಗಳು ಕಾರ್ಯನಿರ್ವಹಿಸುತ್ತವೆ. ಸಮೀಪವಾಗಿ ಬಂಡಿಪುರ ಇರುವುದರಿಂದ ಅಲ್ಲಿಯೂ ಹೋಗಿ ನೋಡಿಕೊಂಡು ಕೊಂಡು ಬರಬಹುದು ಪ್ರವಾಸಿಗರು. ಹಿಮವದ್ ಗೋಪಾಲಸ್ವಾಮಿ ಬೆಟ್ಟವು ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿಗೆ ಸೇರಿರುತ್ತದೆ. ಗುಂಡ್ಲುಪೇಟೆಯಿಂದ (Gundlupete) 35 ಕಿಲೋಮೀಟರ್ ಮತ್ತು ಚಾಮರಾಜನಗರದಿಂದ 75 ಕಿ.ಮೀ ದೂರದಲ್ಲಿದೆ ಹಿಮವದ್ ಗೋಪಾಲಸ್ವಾಮಿ ಬೆಟ್ಟ.