Friday, May 8, 2026
Friday, May 8, 2026

ಮಲ್ಪೆಯಲ್ಲಿ ಕಸದ ರಾಶಿ

ಕಡಲತೀರದ ಉದ್ದಕ್ಕೂ ಪ್ಲಾಸ್ಟಿಕ್ ಬಾಟಲಿಗಳು, ತಿಂಡಿಗಳ ಪ್ಯಾಕೆಟ್ ಮತ್ತು ಗಾಜಿನ ತುಂಡುಗಳು ಬಿದ್ದಿರುವುದು ಬೀಚ್‌ನ ನೈಸರ್ಗಿಕ ಸೌಂದರ್ಯವನ್ನು ಹಾಳುಮಾಡುತ್ತಿದೆ.

ಕರ್ನಾಟಕದ ಕರಾವಳಿಯ ಪ್ರಮುಖ ಆಕರ್ಷಣೆಯಾದ ಮಲ್ಪೆ ಬೀಚ್‌ನಲ್ಲಿ ಇತ್ತೀಚಿನ ದಿನಗಳಲ್ಲಿ ಕಸದ ಪ್ರಮಾಣ ವಿಪರೀತವಾಗಿ ಏರಿಕೆಯಾಗಿದ್ದು, ಇದು ಪ್ರವಾಸಿಗರು ಮತ್ತು ಸ್ಥಳೀಯರಲ್ಲಿ ತೀವ್ರ ಆತಂಕ ಮೂಡಿಸಿದೆ.

ಕಡಲತೀರದ ಉದ್ದಕ್ಕೂ ಪ್ಲಾಸ್ಟಿಕ್ ಬಾಟಲಿಗಳು, ತಿಂಡಿಗಳ ಪ್ಯಾಕೆಟ್ ಮತ್ತು ಗಾಜಿನ ತುಂಡುಗಳು ಬಿದ್ದಿರುವುದು ಬೀಚ್‌ನ ನೈಸರ್ಗಿಕ ಸೌಂದರ್ಯವನ್ನು ಹಾಳುಮಾಡುತ್ತಿದೆ. ವಿಶೇಷವಾಗಿ ವಾರಾಂತ್ಯಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾದಂತೆ ಕಸದ ಪ್ರಮಾಣವೂ ದುಪ್ಪಟ್ಟಾಗುತ್ತಿದೆ.

ಇದನ್ನೂ ಓದಿ: ಬೆಟ್ಟ-ಸಮುದ್ರಗಳ ನಡುವೆ ನಿಂತ ಸಮಯ

ಮಳೆಗಾಲದ ಸಮಯದಲ್ಲಿ ಸಮುದ್ರದ ಅಲೆಗಳು ಟನ್ ಗಟ್ಟಲೆ ತ್ಯಾಜ್ಯವನ್ನು ದಡಕ್ಕೆ ತಳ್ಳುತ್ತಿವೆ. ಇದು ಕೇವಲ ಪ್ರವಾಸಿಗರು ಹಾಕಿದ ಕಸವಲ್ಲದೆ, ನದಿಗಳ ಮೂಲಕ ಸಮುದ್ರ ಸೇರುವ ಪಟ್ಟಣದ ತ್ಯಾಜ್ಯವೂ ಆಗಿರುವುದು ಪರಿಸ್ಥಿತಿಯನ್ನು ಜಟಿಲಗೊಳಿಸಿದೆ.

ಕಡಲತೀರದಲ್ಲಿರುವ ಪ್ಲಾಸ್ಟಿಕ್ ತ್ಯಾಜ್ಯವು ಸಮುದ್ರದ ಜೀವಿಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದ್ದು, ಪರಿಸರ ಸಮತೋಲನವನ್ನು ಕದಡುತ್ತಿದೆ. ಏಪ್ರಿಲ್ 2026ರಲ್ಲಿ ಕರ್ನಾಟಕ ಸರಕಾರವು 320 ಕಿಮೀ ಉದ್ದದ ಕರಾವಳಿಯನ್ನು ಕಸಮುಕ್ತಗೊಳಿಸಲು ʼಕರ್ನಾಟಕ ಜೀರೋ ವೇಸ್ಟ್ ಇನಿಶಿಯೇಟಿವ್ʼ ಎಂಬ ಬೃಹತ್ ಯೋಜನೆಯನ್ನು ಪ್ರಾರಂಭಿಸಿದೆ. ಮಲ್ಪೆ ಸೇರಿದಂತೆ 50 ಕರಾವಳಿ ಹಳ್ಳಿಗಳಲ್ಲಿ ವೈಜ್ಞಾನಿಕ ಕಸ ವಿಲೇವಾರಿ ಮತ್ತು ಮರುಬಳಕೆ ಘಟಕಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ.

Pramod Mohan Hegde

Pramod Mohan Hegde

A media professional with four years of experience in journalism, having worked with leading Kannada publications such as Vistara, Vijayavani, and Vijaya Karnataka as a cinema journalist. Also an author with a keen interest in travel and cinema. Currently serving as Senior Sub Editor at Pravasi Prapancha, contributing editorial expertise and engaging storytelling to the media industry.

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

Read Previous

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

ಬೇಸಿಗೆಯ ಪ್ರವಾಸಕ್ಕಿದು ಸೂಕ್ತ ಸಮಯ; ತೆರಳುವ ಮುನ್ನ ಪೊಲೀಸರ ಈ ಸಲಹೆಗಳನ್ನು ಪಾಲಿಸಿ

Read Next

ಬೇಸಿಗೆಯ ಪ್ರವಾಸಕ್ಕಿದು ಸೂಕ್ತ ಸಮಯ; ತೆರಳುವ ಮುನ್ನ ಪೊಲೀಸರ ಈ ಸಲಹೆಗಳನ್ನು ಪಾಲಿಸಿ