Friday, June 13, 2025
Friday, June 13, 2025

ಕರ್ನಾಟಕದ ಮೊದಲ ಕಡಲ ವನ್ಯ ಜೀವಿಧಾಮ: ಏನಿದರ ವಿಶೇಷತೆ?

ಕರ್ನಾಟಕ ರಾಜ್ಯದ ಮೊದಲ ಕಡಲ ವನ್ಯ ಜೀವಿಧಾಮವು ಕಾರವಾರದಲ್ಲಿ ಶೀಘ್ರದಲ್ಲಿಯೇ ಪ್ರಾರಂಭಗೊಳ್ಳಲಿದೆ. ಜಿಲ್ಲೆಯ ಅಪ್ಸರಕೊಂಡ-ಮುಗಲಿ ಕಡಲನ್ನು ಸರ್ಕಾರವು ವನ್ಯ ಜೀವಿಧಾಮವಾಗಿ ಘೋಷಿಸಿದೆ.

ಕಾರವಾರ: ಕರ್ನಾಟಕ(Karnataka) ರಾಜ್ಯದ ಮೊದಲ ಕಡಲ ವನ್ಯ ಜೀವಿಧಾಮವು(Marine Life Sanctuary) ಕಾರವಾರದಲ್ಲಿ(Karwar) ಶೀಘ್ರದಲ್ಲಿಯೇ ಪ್ರಾರಂಭಗೊಳ್ಳಲಿದೆ. ಜಿಲ್ಲೆಯ ಅಪ್ಸರಕೊಂಡ-ಮುಗಲಿ( Mugli-Apsarakonda ) ಕಡಲನ್ನು ಸರ್ಕಾರವು ವನ್ಯ ಜೀವಿಧಾಮವಾಗಿ ಘೋಷಿಸಿದೆ. ಈ ಮೂಲಕ ಕರ್ನಾಟಕ ಸರ್ಕಾರವು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆಯನ್ನು ಇಟ್ಟಿದೆ.

ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿರುವ ಅಪ್ಸರಕೊಂಡ-ಮುಗಲಿ ಬೀಚ್‌ ಅನ್ನು ರಾಜ್ಯದ ಮೊದಲ ಕಡಲ ವನ್ಯ ಜೀವಿಧಾಮವನ್ನಾಗಿ ಸರ್ಕಾರ ಘೋಷಿಸಿದೆ. ಸರ್ಕಾರದ ನಿರ್ಧಾರವು ಈ ಪ್ರದೇಶದಲ್ಲಿನ ಸಮುದ್ರ ಜೀವವೈವಿಧ್ಯತೆಯನ್ನು ಸಂರಕ್ಷಿಸಲಿದೆ. ಅರಣ್ಯ ಸಚಿವ ಈಶ್ವರ್ ಖಂಡ್ರೆ ಅಧ್ಯಕ್ಷತೆಯಲ್ಲಿ ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿಯ (SBWL) ಪ್ರಮುಖ ಸಮಿತಿಯು ಅಭಯಾರಣ್ಯದ ಪ್ರಸ್ತಾವನೆಯನ್ನು ಅಧಿಕೃತವಾಗಿ ಅನುಮೋದಿಸಿದೆ. ರಾಜ್ಯ ಸಚಿವ ಸಂಪುಟದಿಂದ ಔಪಚಾರಿಕವಾಗಿ ಅನುಮೋದನೆ ಸಿಗುವುದು ಬಾಕಿಯಿದೆ.

ಅಪ್ಸರಕೊಂಡ-ಮುಗಲಿ ಕಡಲ ವನ್ಯ ಜೀವಿಧಾಮವು ಭಾರತದ ಏಳನೇ ಅಭಯಾರಣ್ಯವಾಗಲಿದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಈ ಜೀವಿಧಾಮವಿದ್ದು, ಗುಜರಾತ್, ಒಡಿಶಾ, ತಮಿಳುನಾಡು ಮತ್ತು ಮಹಾರಾಷ್ಟ್ರದಲ್ಲಿಯೂ ಬಹಳ ವಿಶೇಷವಾದ ಕಡಲ ವನ್ಯ ಜೀವಿಧಾಮವಿದೆ.

ಈ ಅಭಯಾರಣ್ಯವು ಅರೇಬಿಯನ್ ಸಮುದ್ರದ 835 ಹೆಕ್ಟೇರ್ ಪ್ರಾದೇಶಿಕ ನೀರನ್ನು ಒಳಗೊಂಡಂತೆ ಒಟ್ಟು 5,960 ಹೆಕ್ಟೇರ್ ಪ್ರದೇಶವನ್ನು ಒಳಗೊಳ್ಳಲು ಸಿದ್ಧವಾಗಿದೆ. ಈ ಸಮುದ್ರಮಟ್ಟವು ಕರಾವಳಿಯಿಂದ ಸುಮಾರು ಆರು ಕಿ.ಮೀ. ವಿಸ್ತರಿಸಲಿದ್ದು, ವಿವಿಧ ಸಮುದ್ರ ಪ್ರಭೇದಗಳು ಮತ್ತು ಪರಿಸರ ವ್ಯವಸ್ಥೆಗಳಿಗೆ ಬಹಳ ಸುರಕ್ಷಿತವಾದ ಆವಾಸಸ್ಥಾನವನ್ನು ಸೃಷ್ಟಿಸುತ್ತದೆ. ಇದರ ಜೊತೆಗೆ, ಅಭಯಾರಣ್ಯವು ಮತ್ತೊಂದು 835 ಹೆಕ್ಟೇರ್ ಲ್ಯಾಟರೈಟ್ ಪ್ರಸ್ಥಭೂಮಿಯನ್ನು ಸಂಯೋಜಿಸಲಿದೆ.ಇದು ಕೂಡ ಪರಿಸರ ವೈವಿಧ್ಯತೆಯನ್ನು ಮತ್ತಷ್ಟು ಶ್ರೀಮಂತಗೊಳಿಸುತ್ತದೆ.

Deekshith Nair

Deekshith Nair

Travel blogger and adventurer passionate about exploring new cultures and sharing travel experiences.

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!