ಈ ಪ್ರಸಿದ್ಧ ಕೋಟೆಯೊಳಗಿದೆಯೇ ಪೇಶ್ವೆಯ ಆತ್ಮ?
ಶನಿವಾರ್ ವಾಡಾ ಮಹಾರಾಷ್ಟ್ರದ ಪುಣೆಯ ಮಧ್ಯಭಾಗದಲ್ಲಿರುವ ಪುರಾತನ ಪ್ರಸಿದ್ಧ ಕೋಟೆ. ಈ ಕೋಟೆಯೊಳಗೆ ಪೇಶ್ವೆಯೊಬ್ಬನ ಆತ್ಮವಿದೆ ಎಂದು ಜನರು ನಂಬಿದ್ದಾರೆ. ಇಲ್ಲಿಗೆ ಹೋಗಲು ಬಹುತೇಕರು ಈಗಲೂ ಹೆದರುತ್ತಾರೆ.
ನಮ್ಮ ದೇಶದಲ್ಲಿರುವ ಪ್ರತಿ ಪ್ರವಾಸ ತಾಣಕ್ಕೂ ಐತಿಹ್ಯವಿದೆ. ಪುರಾಣವಿದೆ. ದಂತಕತೆಯಿದೆ. ಅಲ್ಲಿ ಹೀಗಂತೆ? ಹೀಗೆ ಆಗಿತ್ತಂತೆ? ಎಂಬಂಥ ಕಟ್ಟು ಕತೆಗಳೂ ಇದೆ. ಆದರೆ ಯಾವುದು ಎಷ್ಟು ಸತ್ಯ ಎಂಬುದರ ಕುರಿತು ಅಷ್ಟಾಗಿ ಮಾಹಿತಿ ಇರುವುದಿಲ್ಲ. ಪುಣೆ ಜಂಕ್ಷನ್ನಿಂದ ಸರಿ ಸುಮಾರು 3 ಕಿ.ಮೀ ದೂರದಲ್ಲಿರುವ ಶನಿವಾರ್ ವಾಡಾ ಮಹಾರಾಷ್ಟ್ರದ ಪುಣೆಯ ಮಧ್ಯಭಾಗದಲ್ಲಿರುವ ಪ್ರಸಿದ್ಧ ಕೋಟೆಯಾಗಿದೆ. ಇದು ಪುಣೆಯ ಪ್ರಖ್ಯಾತ ಪ್ರವಾಸಿ ತಾಣಗಳಲ್ಲಿ ಒಂದು ಎಂಬ ಅಗ್ಗಳಿಕೆಗೆ ಪಾತ್ರವಾಗಿದೆ. ಅಂದಹಾಗೆ ಈ ಕೋಟೆಗೆ ಒಂದು ಕತೆಯೂ ಅಂಟಿಕೊಂಡಿದೆ. ಏನು ಆ ಕತೆ? ಕತೆಯ ಹಿಂದಿನ ಕತೆಯೇನು? ಇಲ್ಲಿದೆ ಮಾಹಿತಿ.
ಕ್ರಿ.ಶ 1732 ರಲ್ಲಿ ನಿರ್ಮಿಸಲಾದ ಶನಿವಾರ್ ವಾಡಾ ಕ್ರಿ.ಶ 1818 ರವರೆಗೆ ಮೂರನೆಯ ಆಂಗ್ಲೋ-ಮರಾಠ ಯುದ್ಧದ ನಂತರ ಬ್ರಿಟಿಷರಿಗೆ ಶರಣಾಗುವ ತನಕ ಮರಾಠ ಸಾಮ್ರಾಜ್ಯದ ಪೇಶ್ವಾ ಆಡಳಿತಗಾರರ ಸ್ಥಾನವಾಗಿತ್ತು. ಮರಾಠ ಸಾಮ್ರಾಜ್ಯದ ಸ್ಥಾಪನೆಯ ನಂತರ, ಅರಮನೆಯು 18 ನೇ ಶತಮಾನದಲ್ಲಿ ಭಾರತೀಯ ರಾಜಕೀಯದ ಕೇಂದ್ರವಾಯಿತು.
ಕೋಟೆಯೊಳಗಿದ್ಯ ಪೇಶ್ವೆಯ ಆತ್ಮ?
ಮಹಾರಾಷ್ಟ್ರದ ಈ ಪ್ರವಾಸಿ ತಾಣವು ಸಾಕಷ್ಟು ಹೆಸರುವಾಸಿಯಾಗಿದೆ. ಆದರೆ ಪ್ರವಾಸಿಗರು ಅಲ್ಲಿಗೆ ಹೋಗಲು ಹೆದರುತ್ತಾರೆ. ಅದನ್ನು ಭೂತಬಂಗಲೆ ಎಂದು ಕರೆಯುತ್ತಾರೆ. ಕೋಟೆಗೊಂದು ಕಥೆ ಅಂಟಿಕೊಂಡಿದೆ. ಪೇಶ್ವಾ ನಾರಾಯಣ್ ರಾವ್ಗೆ ತೀರಾ ದುರಾಸೆಯಿತ್ತು. ಅವನಿಗೆ ತನ್ನ ಚಿಕ್ಕಪ್ಪ ರಘುನಾಥ ರಾವ್ ಅವರೊಂದಿಗೆ ಭಿನ್ನಾಭಿಪ್ರಾಯಗಳಿದ್ದವು. 'ನಾರಾಯಣ್ ರಾವ್ ಲಾ ಧಾರಾ', ಅಂದರೆ 'ನಾರಾಯಣ್ ರಾವ್ ಅವರನ್ನು ಬಂಧಿಸಿ ಎಂದು ಹೇಳುವ ಮೂಲಕ ರಘುನಾಥ ರಾವ್ ಅವರು ನಾರಾಯಣ್ ರಾವ್ ಅವರನ್ನು ಬಂಧಿಸುವಂತೆ ಹೇಳುತ್ತಾರೆ.
ಆದರೆ ಆ ಸಂದೇಶವು ಕಾವಲುಗಾರರನ್ನು ತಲುಪುವ ಮೊದಲು, ರಘುನಾಥ ರಾವ್ ಅವರ ಪತ್ನಿ ಆನಂದಿಬಾಯಿ ಚಿಕ್ಕಪ್ಪನನ್ನು ಉಳಿಸಿ ಎಂದು ಕಿರುಚುತ್ತಾ ಕೋಟೆಯ ಸುತ್ತಲೂ ಓಡುತ್ತಾರೆ. ಪೇಶ್ವೆಯ ಘೋರ ಹತ್ಯೆಯಾದ ದಿನದಿಂದ ಇಲ್ಲಿಯವರೆಗೂ ಅವರ ಆತ್ಮವು ಕೋಟೆಯ ಸುತ್ತಲೂ ಓಡಾಡುತ್ತಿದೆ ಎಂದು ಜನರು ನಂಬಿದ್ದಾರೆ.