ಪ್ರಕೃತಿಯ ಮೈಮಾಟವನ್ನು ನೋಡಬೇಕೆ? ಸಮತಗೆ ಬನ್ನಿ
ಸಮತ ರೆಸಾರ್ಟ್ ನಲ್ಲಿ ತಂಗುವ ಪ್ರವಾಸಿಗರು ರೆಸಾರ್ಟ್ ನ ಸುತ್ತಮುತ್ತ ಇರುವ ಅಷ್ಟೂ ಸೌಂದರ್ಯವನ್ನು ಸವಿಯಬಹುದು. ಸಮತದಲ್ಲಿ ಅಚ್ಚುಕಟ್ಟಾದ ಆತಿಥ್ಯವಿದೆ. ರುಚಿಕಟ್ಟಾದ ಊಟವಿದೆ. ಅಲ್ಲಿರುವ ಸಿಬ್ಬಂದಿಗಳು ಆತ್ಮೀಯವಾಗಿ ಮಾತಿಗಿಳಿಯುತ್ತಾರೆ. ಸಮತ ಎಂದರೆ ಅದು ನಾಲ್ಕು ಗೋಡೆಗಳಿರುವ ಕಟ್ಟಡ ಮಾತ್ರವಲ್ಲ. ಅಲ್ಲಿ ಪ್ರಕೃತಿಯ ಮೈ ಮಾಟವಿದೆ.
ಆಪ್ತವಾಗಿ ಮಾತನಾಡುತ್ತಾ, ಮುಗ್ಧವಾಗಿ ನಗುತ್ತಲೇ ಸಮತದೊಳಗೆ ಪ್ರವಾಸಿಗರನ್ನು ಕರೆದೊಯ್ಯುತ್ತಾರೆ ಕೋಡಿಹಳ್ಳಿ ಭೀಮಪ್ಪ. ಸಮತ ರೆಸಾರ್ಟ್ ಪ್ರಕೃತಿ ಪ್ರಿಯರಿಗೆ ಹೇಳಿ ಮಾಡಿಸಿದ ತಾಣ. ಅತ್ಯಂತ ವಿಶಾಲವಾದ ಜಾಗದಲ್ಲಿ ನಿರ್ಮಾಣಗೊಂಡಿರುವ ಈ ರೆಸಾರ್ಟ್ ಎಂಥವರನ್ನೂ ಸೆಳೆಯುತ್ತದೆ. ಅಲ್ಲಿ ಹೋಗುವ ಪ್ರತಿ ಅತಿಥಿಗೂ ರಾಜಾತಿಥ್ಯ. ಸಮತ ಬಜೆಟ್ ಸ್ನೇಹಿ ರೆಸಾರ್ಟ್. ಆದರೆ ಅಲ್ಲಿನ ವಾತಾವರಣ ಮಜಬೂತಾಗಿದೆ. ಸೌಕರ್ಯವೂ ಜಬರ್ದಸ್ತಾಗಿದೆ. ಅಲ್ಲಿ ಬೆಳಗಿನ ಸೂರ್ಯೋದಯ ಮತ್ತು ಇಳಿ ಸಂಜೆಯ ಸೂರ್ಯಾಸ್ತವನ್ನು ಕಣ್ತುಂಬಿಕೊಳ್ಳಬಹುದು. ಸಮತ ಅಕ್ಷರಶಃ ನಿಸರ್ಗದ ಸೌಂದರ್ಯವನ್ನು ಮೆತ್ತಿಕೊಂಡಿದೆ. ಅದು ಹಳ್ಳಿಯ ಸೊಗಡನ್ನು ನೆನಪಿಸುತ್ತದೆ. ಪಟ್ಟಣದ ಆಧುನಿಕತೆಯನ್ನೂ ನೆನಪಿಸುತ್ತದೆ. ಅಲ್ಲಿ ಪ್ರವಾಸಿಗರು ನೋಡುವ ಪ್ರತಿ ವಸ್ತುವಿನಲ್ಲೂ ಕಲಾವಿದನೊಬ್ಬನ ಪ್ರತಿಭೆ ಅರಳಿದೆ. ಅವನ ಜೀವಂತಿಕೆಯಿದೆ. ಸಮತ ಎಂದರೆ ಎಲ್ಲವನ್ನೂ ಬೆರೆತ ಅದ್ಭುತ ತಾಣ. "ನಾನು ಆತಿಥ್ಯದ ವಿಚಾರದಲ್ಲಿ ರಾಜಿ ಆಗುವುದೇ ಇಲ್ಲ. ಎಷ್ಟೋ ದೂರದ ಊರುಗಳಿಂದ ನಮ್ಮ ರೆಸಾರ್ಟ್ ಗೆ ಬರುವ ಪ್ರವಾಸಿಗರಿಗೆ ನಾವು ಬೇಸರ ತರಿಸುವುದಿಲ್ಲ" ಎನ್ನುತ್ತಾರೆ ಸಮತ ರೆಸಾರ್ಟ್ ನ ಮಾಲೀಕ ಕೋಡಿಹಳ್ಳಿ ಭೀಮಪ್ಪ.
ಸಮತದಲ್ಲಿ ಏನೆಲ್ಲಾ ಇದೆ?
ಸಮತ ರೆಸಾರ್ಟ್ ನಲ್ಲಿ ತಂಗುವ ಪ್ರವಾಸಿಗರು ರೆಸಾರ್ಟ್ ನ ಸುತ್ತಮುತ್ತ ಇರುವ ಅಷ್ಟೂ ಸೌಂದರ್ಯವನ್ನು ಸವಿಯಬಹುದು. ಸಮತದಲ್ಲಿ ಅಚ್ಚುಕಟ್ಟಾದ ಆತಿಥ್ಯವಿದೆ. ರುಚಿಕಟ್ಟಾದ ಊಟವಿದೆ. ಅಲ್ಲಿರುವ ಸಿಬ್ಬಂದಿಗಳು ಆತ್ಮೀಯವಾಗಿ ಮಾತಿಗಿಳಿಯುತ್ತಾರೆ. ಸಮತ ಎಂದರೆ ಅದು ನಾಲ್ಕು ಗೋಡೆಗಳಿರುವ ಕಟ್ಟಡ ಮಾತ್ರವಲ್ಲ. ಅಲ್ಲಿ ಪ್ರಕೃತಿಯ ಮೈ ಮಾಟವಿದೆ. ನವಿಲುಗಳ ಕುಲುಕುಲು ಸದ್ದಿದೆ. ಹಕ್ಕಿಗಳ ಕಲರವವಿದೆ. ನೀರಿನ ಜುಳು ಜುಳು ನಾದವಿದೆ. ಮನಸ್ಸಿಗೆ ಕಚಗುಳಿ ಇಡುವ ತಂಗಾಳಿಯಿದೆ. ರೆಸಾರ್ಟ್ ನಲ್ಲಿ ಕೂತು ಸಾಕಾದಾಗ ಅಲ್ಲಿಂದ ಎದ್ದು ಹೊರ ನಡೆದರೆ ಸಾಕಷ್ಟು ಪ್ರೇಕ್ಷಣೀಯ ಸ್ಥಳಗಳು ಸಿಗುತ್ತವೆ. ಐತಿಹಾಸಿಕ ಬಾಗಳಿಯ ಕಲ್ಲೇಶ್ವರ, ಪಂಚಗಣಾಧೀಶ್ವರ ಮದ್ದಾನೇಶ್ವರ, ಗೋಣಿ ಬಸವೇಶ್ವರರ ದೇವಸ್ಥಾನ ಮತ್ತು ಗುಹೆಗಳಿವೆ.

ಕಲ್ಲುಗುಡ್ಡವೇ ಪ್ರವಾಸಿ ತಾಣ
ರೆಸಾರ್ಟ್ ನ ಮಾಲೀಕ ಕೋಡಿಹಳ್ಳಿ ಭೀಮಪ್ಪ ಅತ್ಯಂತ ಮಹತ್ವಕಾಂಕ್ಷಿ ವ್ಯಕ್ತಿ. ಅವರು ಪ್ರಕೃತಿಯೊಂದಿಗೆ ಒಡನಾಡುವ ಅಪ್ಪಟ ಮನುಷ್ಯ. ಅವರಿಗೆ ಪ್ರವಾಸಿಗರ ರುಚಿ ಮತ್ತು ಅಭಿರುಚಿ ಗೊತ್ತಿದೆ. ಹಾಗಾಗಿಯೇ ರೆಸಾರ್ಟ್ ನಿಂದ ಸ್ವಲ್ಪ ದೂರವಿರುವ ಶೃಂಗಾರ ತೋಟ ಗ್ರಾಮದಲ್ಲಿ ಸಮತ ಉದ್ಯಾನವನ್ನು ನಿರ್ಮಿಸಿದ್ದಾರೆ. ರೆಸಾರ್ಟ್ ಅಷ್ಟೇ ಅಲ್ಲದೆ ಆ ಪುಷ್ಪ ಉದ್ಯಾನವೂ ಪ್ರವಾಸಿಗರನ್ನು ಸೆಳೆಯುತ್ತದೆ. ಭೀಮಪ್ಪ ಅಲ್ಲಿನ ಕಲ್ಲು ಗುಡ್ಡವನ್ನೇ ಪ್ರವಾಸಿ ತಾಣವನ್ನಾಗಿ ಮಾಡಿದ್ದಾರೆ. ಅಚ್ಚರಿ ಎಂದರೆ ಹಂಪಿಯ ಸಾಮ್ರಾಜ್ಯವನ್ನು ನೆನಪಿಸುವ ಕಲ್ಲು ಬಂಡೆಯ ಗುಡ್ಡದ ಒಂದು ಬಂಡೆಯನ್ನು ಬಡಿದರೆ ಶ್ರುತಿಬದ್ಧವಾದ ಘಂಟಾನಾದ ಹೊರಹೊಮ್ಮುತ್ತದೆ. ಅಲ್ಲಿಗೆ ಯಾವುದೇ ಪ್ರವೇಶ ಶುಲ್ಕವಿಲ್ಲ. ಎಲ್ಲರಿಗೂ ಉಚಿತ ಪ್ರವೇಶ. ರೆಸಾರ್ಟ್ ನಿಂದ ಕಲ್ಲು ಗುಡ್ಡವು ಕೇವಲ 1 ಕಿ. ಮೀ ದೂರದಲ್ಲಿದೆ.
ಸಮತ ಸೌಂದರ್ಯ-ಸೌಕರ್ಯ
ಸಮತಾ ರೆಸಾರ್ಟ್ ನಿಂದ ಒಂದು ಕಿ.ಮೀ ದೂರವಿರುವ ಕಲ್ಲು ಗುಡ್ಡದಲ್ಲಿ ಔಷಧ ಮೂಲಿಕೆಯ ಗಿಡಗಳಿವೆ. ಹರಳೆ, ಬೋಧಿವೃಕ್ಷ, ಪಾಮ್, ಪತ್ರಿ ಮತ್ತು 80 ಕದಂಬ ಗಿಡಗಳಿವೆ. ಬುದ್ಧ, ಶಿವ ಪಾರ್ವತಿ, ವಾಲ್ಮೀಕಿ, ಜಾನಪದ ಸಂಸ್ಕೃತಿಯನ್ನು ಬಿಂಬಿಸುವ ಪ್ರತಿಮೆಗಳು ಸಮತ ಉದ್ಯಾನದ ಮೆರುಗನ್ನು ಹೆಚ್ಚಿಸಿವೆ. ರೆಸಾರ್ಟ್ ನಲ್ಲಿ ವಸತಿ, ವಿವಿಧ ಒಳಾಂಗಣ ಕ್ರೀಡೆಗಳು ಮತ್ತು ಸಭಾಂಗಣದ ಸೌಕರ್ಯಗಳಿವೆ. ಪ್ರತಿಯೊಂದಕ್ಕೂ ಇಂತಿಷ್ಟು ಶುಲ್ಕವನ್ನು ನಿಗದಿಪಡಿಸಲಾಗಿದೆ.

ಪ್ರವಾಸಿಗರು ಹಂಪಿ ಮತ್ತು ವಿಜಯನಗರ ಭಾಗಕ್ಕೆ ಬಂದಾಗ ನಮ್ಮ ಸಮತ ರೆಸಾರ್ಟ್ನಲ್ಲಿ ಉಳಿದುಕೊಳ್ಳಬಹುದು. ನಮ್ಮಲ್ಲಿ ಒಳ್ಳೆಯ ಆತಿಥ್ಯವಿದೆ. ಅದ್ಭುತವಾದ ವಾತಾವರಣದ ಮಧ್ಯೆ ಈ ರೆಸಾರ್ಟ್ ಅನ್ನು ನಿರ್ಮಿಸಿರುವುದರಿಂದ ಪ್ರವಾಸಿಗರಿಗೆ ಬೇರೆಯದ್ದೇ ಲೋಕಕ್ಕೆ ಬಂದ ಅನುಭವ ಸಿಗುತ್ತದೆ. ಅತ್ಯುತ್ತಮ ಆಮ್ಲಜನಕ ಸಿಗುವ ಕದಂಬ ಮರಗಳನ್ನು ನಾವು ನೆಟ್ಟಿದ್ದೇವೆ. ರೆಸಾರ್ಟ್ನ ಆಚೆ ನಿಂತು ನೋಡಿದರೆ ಸುತ್ತಲೂ ಗುಡ್ಡಗಳು ಕಾಣುತ್ತವೆ. ಸಮತ ಎಂದರೆ ಹಚ್ಚ ಹಸಿರಿನ ನಡುವೆ ಇರುವ ರೆಸಾರ್ಟ್. ಇಲ್ಲಿ ಹಿಂಡು ನವಿಲುಗಳಿವೆ. ಬೆಳಗ್ಗೆ ಮತ್ತು ಸಂಜೆ ನೂರಾರು ಹಕ್ಕಿಗಳು ಬರುತ್ತವೆ. ರೆಸಾರ್ಟ್ನಿಂದ ಸ್ವಲ್ಪ ದೂರದಲ್ಲೇ ಸಾಕಷ್ಟು ದೇವಾಲಯಗಳು ಮತ್ತು ಪ್ರವಾಸಿ ತಾಣಗಳಿವೆ. ನಮ್ಮ ರೆಸಾರ್ಟ್ಗೆ ಯಾವ ಸೀಸನ್ನಲ್ಲಿಯಾದರೂ ಬರಬಹುದು. ಮಾನ್ಸೂನ್ನಲ್ಲಿ ಬಂದರೆ ಸ್ವರ್ಗ ಎನ್ನುತ್ತಾರೆ ಸಮತ ಮಾಲಿಕರಾದ ಕೋಡಿಹಳ್ಳಿ ಭೀಮಪ್ಪ.
ಸಮತಗೆ ದಾರಿ
ಸಮತ ರೆಸಾರ್ಟ್ ಹೊಸಪೇಟೆ ಮಾರ್ಗದಲ್ಲಿದೆ. ದಾವಣಗೆರೆ ಹಾವೇರಿ, ಬಳ್ಳಾರಿ ಜಿಲ್ಲಾ ಕೇಂದ್ರ ಅಥವಾ ಕೊಟ್ಟೂರು ನಗರಗಳ ಮೂಲಕ ಹರಪ್ಪನಹಳ್ಳಿಯನ್ನು ತಲುಪಬೇಕು. ಅಲ್ಲಿ ಅದ್ಭುತ ವಿನ್ಯಾಸದೊಂದಿಗೆ ನಿರ್ಮಾಣಗೊಂಡಿರುವ ರೆಸಾರ್ಟ್ ಸಿಗುತ್ತದೆ. ಸಮತ ರೆಸಾರ್ಟ್ನಿಂದ ಅನತಿ ದೂರದಲ್ಲಿಯೇ ಅಂದರೆ ಸುಮಾರು 2 ಕಿ.ಮೀ ದೂರದಲ್ಲಿ ಶೃಂಗಾರ ತೋಟವಿದ್ದು, 1 ಕಿ. ಮೀ ದೂರದಲ್ಲಿ ಕರೆಕಲ್ ಗುಡ್ಡ ಇದೆ. ಅಲ್ಲಿನ ಹಿತವಾದ ವಾತಾವರಣವು ಪ್ರವಾಸಿಗರನ್ನು ಆಕರ್ಷಿಸುತ್ತದೆ.