Thursday, March 12, 2026
Thursday, March 12, 2026

ಆಂಧ್ರಪ್ರದೇಶ ಪ್ರವಾಸೋದ್ಯಮ ಯೋಜನೆಗಳಿಗೆ 2,000 ಕೋಟಿ ರು. ಅನುಮೋದನೆ

ಆಂಧ್ರಪ್ರದೇಶದ ರಾಜಧಾನಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರವು (APCRDA) ಅಮರಾವತಿಯಲ್ಲಿ ಸುಮಾರು 2,316 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಅನುಮೋದನೆ ನೀಡುವ ಮೂಲಕ ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಕ್ರಮವು ಆಂಧ್ರಪ್ರದೇಶದ ಹೂಡಿಕೆ ಮೇಲೆ ಮತ್ತು ಪ್ರವಾಸೋದ್ಯಮ ಬೆಳವಣಿಗೆಗೆ ಉತ್ತೇಜನ ನೀಡಲಿದೆ.

ಅಮರಾವತಿಯನ್ನು ಕೇವಲ ರಾಜಕೀಯ ರಾಜಧಾನಿಯನ್ನಾಗಿ ಮಾತ್ರವಲ್ಲದೆ, ಹೂಡಿಕೆದಾರರನ್ನು ಸೆಳೆಯುವ, ಅತ್ಯಾಧುನಿಕ ಮೂಲಸೌಕರ್ಯ ಹೊಂದಿರುವ ಮತ್ತು ಜಾಗತಿಕ ಮಟ್ಟದ ಪ್ರವಾಸಿ ಕೇಂದ್ರವನ್ನಾಗಿ ಮಾಡುವ ಗುರಿಯನ್ನು ಆಂಧ್ರಪ್ರದೇಶ ಸರಕಾರ ಹೊಂದಿದೆ.

ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅಧ್ಯಕ್ಷತೆಯಲ್ಲಿ ನಡೆದ 59ನೇ APCRDA ಸಭೆಯಲ್ಲಿ, ಅಮರಾವತಿ ಸಚಿವಾಲಯ ಸಂಕೀರ್ಣ ಮತ್ತು ವಿಭಾಗೀಯ ಮುಖ್ಯಸ್ಥರ ಕಚೇರಿಗಳ ಗೋಪುರಗಳ ಮೆಕ್ಯಾನಿಕಲ್, ಎಲೆಕ್ಟ್ರಿಕಲ್ ಮತ್ತು ಪ್ಲಂಬಿಂಗ್ ಕಾಮಗಾರಿಗಳಿಗಾಗಿ 2,316 ಕೋಟಿ ರುಪಾಯಿಗಳ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಅಮರಾವತಿಯಲ್ಲಿ ತೆಲುಗು ಸಂಸ್ಕೃತಿಯ ಶ್ರೀಮಂತಿಕೆಯನ್ನು ಬಿಂಬಿಸಲು 119 ಕೋಟಿ ರು. ವೆಚ್ಚದಲ್ಲಿ 'ತೆಲುಗು ಸಾಂಸ್ಕೃತಿಕ ಕೇಂದ್ರ' ನಿರ್ಮಿಸಲು ಪ್ರಾಧಿಕಾರ ಒಪ್ಪಿಗೆ ನೀಡಿದೆ. ಇದು ಈ ಪ್ರದೇಶದ ಪ್ರಮುಖ ಸಾಂಸ್ಕೃತಿಕ ಪ್ರವಾಸೋದ್ಯಮ ತಾಣವಾಗಲಿದೆ.

ಪರಿಸರ ಸ್ನೇಹಿ ಪ್ರವಾಸೋದ್ಯಮ:

ರಾಜಧಾನಿ ಪ್ರದೇಶದ ನೀರುಕೊಂಡದಲ್ಲಿ ಸುಮಾರು 167 ಎಕರೆ ಪ್ರದೇಶದಲ್ಲಿ ಬೃಹತ್ ಪ್ರವಾಸೋದ್ಯಮ ಯೋಜನೆಯನ್ನು ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ. ಇದು ವಾಟರ್‌ಫ್ರಂಟ್, ಹೊಟೇಲ್‌ಗಳು, ಮನರಂಜನಾ ಉದ್ಯಾನವನಗಳು ಮತ್ತು ಸಾಂಸ್ಕೃತಿಕ ಕೇಂದ್ರಗಳನ್ನು ಒಳಗೊಂಡಿರುತ್ತದೆ. ತೆಲುಗು ಪರಂಪರೆಯನ್ನು ಪ್ರತಿಬಿಂಬಿಸುವ ರೀತಿಯಲ್ಲಿ ಇದನ್ನು ವಿನ್ಯಾಸಗೊಳಿಸಲು ಸಿಎಂ ಸೂಚಿಸಿದ್ದಾರೆ.

  • ಸಿಬಿಎಸ್ಇ(CBSE): ಪ್ರಾದೇಶಿಕ ಕಚೇರಿ ನಿರ್ಮಾಣಕ್ಕಾಗಿ 80 ಸೆಂಟ್ಸ್ ಭೂಮಿ.
  • ಆಂಧ್ರಪ್ರದೇಶ ಗ್ರಾಮೀಣಾಭಿವೃದ್ಧಿ ಸಂಸ್ಥೆ(APSIRD): 5 ಎಕರೆ ಭೂಮಿ.
  • ತುಳ್ಳೂರು ಎಜುಕೇಶನಲ್ ಸೊಸೈಟಿ: ಪರಿಹಾರವಾಗಿ 3 ಎಕರೆ ಭೂಮಿ ಹಂಚಿಕೆ ಮಾಡಲಾಗಿದೆ.

ಕಸ ವಿಲೇವಾರಿಗೆ NGT ನಿಯಮ ಪಾಲಿಸಿ: ಸೋನ್ಮಾರ್ಗ್‌ ಪ್ರವಾಸೋದ್ಯಮ ಪ್ರಾಧಿಕಾರ

ಕ್ರೀಡಾ ನಗರಿ ಮತ್ತು ಸಮಾವೇಶ ಕೇಂದ್ರ:

ಅಮರಾವತಿಯನ್ನು ಕ್ರೀಡೆ ಮತ್ತು ಹೂಡಿಕೆಯ ಹಬ್ ಆಗಿ ರೂಪಿಸಲು ಯೋಜಿಸಲಾಗಿದೆ. ವಾಣಿಜ್ಯ ಸಾಮರ್ಥ್ಯವನ್ನು ಗಮನದಲ್ಲಿಟ್ಟುಕೊಂಡು 'ಸ್ಪೋರ್ಟ್ಸ್ ಸಿಟಿ' ಮಾಸ್ಟರ್ ಪ್ಲಾನ್ ಸಿದ್ಧಪಡಿಸಲಾಗಿದೆ. ಅಲ್ಲದೆ, ದೊಡ್ಡ ಸರ್ಕಾರಿ ಕಾರ್ಯಕ್ರಮಗಳನ್ನು ನಡೆಸಲು ಬೃಹತ್ ಸಮಾವೇಶ ಕೇಂದ್ರವನ್ನು (Convention Centre) ಸ್ಥಾಪಿಸಲು ಪ್ರಸ್ತಾಪಿಸಲಾಗಿದೆ. ಈ ಬೃಹತ್ ಹೂಡಿಕೆಯು ಅಮರಾವತಿಯ ಆರ್ಥಿಕ ಬೆಳವಣಿಗೆಗೆ ನೇರವಾಗಿ ಕೊಡುಗೆ ನೀಡಲಿದೆ. ಪ್ರವಾಸೋದ್ಯಮ ಮತ್ತು ಮೂಲಸೌಕರ್ಯ ಅಭಿವೃದ್ಧಿಯಿಂದಾಗಿ ಸ್ಥಳೀಯ ವ್ಯವಹಾರಗಳು ವೃದ್ಧಿಯಾಗಲಿವೆ ಮತ್ತು ಆತಿಥ್ಯ ಕ್ಷೇತ್ರದಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ.

ಅಮರಾವತಿಯನ್ನು ಕೇವಲ ರಾಜಕೀಯ ರಾಜಧಾನಿಯನ್ನಾಗಿ ಮಾತ್ರವಲ್ಲದೆ, ಹೂಡಿಕೆದಾರರನ್ನು ಸೆಳೆಯುವ, ಅತ್ಯಾಧುನಿಕ ಮೂಲಸೌಕರ್ಯ ಹೊಂದಿರುವ ಮತ್ತು ಜಾಗತಿಕ ಮಟ್ಟದ ಪ್ರವಾಸಿ ಕೇಂದ್ರವನ್ನಾಗಿ ಮಾಡುವ ಗುರಿಯನ್ನು ಆಂಧ್ರಪ್ರದೇಶ ಸರಕಾರ ಹೊಂದಿದೆ.

Pramod Mohan Hegde

Pramod Mohan Hegde

A media professional with four years of experience in journalism, having worked with leading Kannada publications such as Vistara, Vijayavani, and Vijaya Karnataka as a cinema journalist. Also an author with a keen interest in travel and cinema. Currently serving as Senior Sub Editor at Pravasi Prapancha, contributing editorial expertise and engaging storytelling to the media industry.

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

Read Previous

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!

Read Next

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!