Friday, June 13, 2025
Friday, June 13, 2025

ಇದು ಅಮರಶಿಲ್ಪಿ ಜಕಣಾಚಾರಿ ಕೆತ್ತಿದ ಕೊನೆಯ ವಿಗ್ರಹ!

ಅಮರಶಿಲ್ಪಿ ಜಕಣಾಚಾರಿ ಭಾರತದ ಪ್ರಖ್ಯಾತ ಶಿಲ್ಪಿ. ಅವನು ಸಾವಿರಾರು ವಿಗ್ರಹಗಳನ್ನು ಕೆತ್ತಿದ್ದಾನೆ. ಅವನು ಕೆತ್ತಿದ ಪ್ರತಿ ವಿಗ್ರಹವೂ ಪ್ರಸಿದ್ದಿಯಾಗಿದೆ. ಕೈದಾಳದಲ್ಲಿ ಅಮರಶಿಲ್ಪಿಯ ಕೊನೆಯ ಕೆತ್ತನೆಯಿದೆ. ಆ ವಿಗ್ರಹ ಹೇಗಿದೆ ಗೊತ್ತಾ? ಇಲ್ಲಿದೆ ಆಸಕ್ತಿಕರ ಮಾಹಿತಿ.

ಅಮರಶಿಲ್ಪಿ ಜಕಣಾಚಾರಿ ಭಾರತದ ಪ್ರಖ್ಯಾತ ಶಿಲ್ಪಿ. ಅವನು ಸಾವಿರಾರು ವಿಗ್ರಹಗಳನ್ನು ಕೆತ್ತಿದ್ದಾನೆ. ಅವನು ಕೆತ್ತಿದ ಪ್ರತಿ ವಿಗ್ರಹವೂ ಪ್ರಸಿದ್ದಿಯಾಗಿದೆ. ಈಗಲೂ ಅವನ ಕಲೆಯನ್ನು ಸ್ಮರಿಸಲಾಗುತ್ತದೆ. ಕರ್ನಾಟಕದಲ್ಲಿ ಅವನ ಪರಂಪರೆಯಿದೆ. ಅವನು ಕೆತ್ತಿದ ವಿಗ್ರಹಗಳೇ ಅವನ ಕತೆಗಳನ್ನು ಹೇಳುತ್ತವೆ. ಸಾವಿರಾರು ವಿಗ್ರಹಗಳನ್ನು ಕೆತ್ತಿದ ಜಕಣಾಚಾರಿಯ ಕೊನೆಯ ವಿಗ್ರಹ ಯಾವುದು ಎಂಬ ಸಹಜ ಕುತೂಹಲ ಹಲವರಲ್ಲಿ ಇರುತ್ತದೆ. ಹಾಗಿದ್ದರೆ ಅವನು ಕೆತ್ತಿದ ಕೊನೆಯ ವಿಗ್ರಹ ಯಾವುದು? ಬಹುತೇಕರಿಗೆ ಗೊತ್ತಿರುವ ಹಾಗೆ ಅಮರಶಿಲ್ಪಿಯ ಹುಟ್ಟೂರು ಕೈದಾಳ. ಅಲ್ಲಿಯೇ ಕೊನೆಯದಾಗಿ ಅವನು ಕೆತ್ತನೆ ಮಾಡಿರುವ ಚನ್ನಕೇಶವನ ಮೂರ್ತಿಯಿದೆ. ಈ ದೇವಾಲಯದಲ್ಲಿ ಪ್ರತಿದಿನ ವಿಶೇಷವಾಗಿ ಪೂಜೆಯನ್ನು ಸಲ್ಲಿಸಲಾಗುತ್ತದೆ. ದೇವಾಲಯದ ಇತಿಹಾಸ, ವಿಶೇಷ ಮತ್ತು ಕೈದಾಳದ ಕುರಿತಾದ ಆಸಕ್ತಿಕರ ಮಾಹಿತಿ ಇಲ್ಲಿದೆ.

ಚನ್ನಕೇಶವ ಹಾಗೂ ಗಂಗಾಧರೇಶ್ವರ ಮೂರ್ತಿಯನ್ನು ಕೈದಾಳದಲ್ಲಿ ಪೂಜಿಸಲಾಗುತ್ತದೆ. 12ನೇ ಶತಮಾನದ ಶಾಸನಗಳನ್ನು ಇಲ್ಲಿನ ಕಲ್ಲುಗಳ ಮೇಲೆ ಕಾಣಬಹುದು. ಇಲ್ಲಿಯ ಕೆಲವು ಅದ್ಭುತ ಕೆತ್ತನೆಗಳು ಬೇಲೂರು ಚನ್ನಕೇಶವ ದೇವಾಲಯವನ್ನು ನೆನಪಿಸುತ್ತವೆ. ಗರ್ಭಗುಡಿಯಲ್ಲಿರುವ 8.5 ಅಡಿ ಎತ್ತರದ ಚನ್ನಕೇಶವ ಮೂರ್ತಿ ಪಶ್ಚಿಮ ಮುಖವಾಗಿರುವುದು ತೀರಾ ವಿಶೇಷವಾಗಿದೆ. ಅಂದಹಾಗೆ ಕೈದಾಳದಲ್ಲಿರುವ ಚನ್ನಕೇಶವನ ವಿಗ್ರಹವನ್ನು ಅಮರಶಿಲ್ಪಿ ಜಕಣಾಚಾರಿ ಕೆತ್ತಿದ್ದು, ಅದು ಅವನ ಕೊನೆಯ ಕೆತ್ತನೆಯ ವಿಗ್ರಹವಾಗಿದೆ ಎಂದು ಹೇಳಲಾಗುತ್ತದೆ.

ಕೈಯನ್ನೇ ಬಲಿಕೊಟ್ಟ ಜಕಣಾಚಾರಿ
ಇತಿಹಾಸದ ಪ್ರಕಾರ ಜಕಣಾಚಾರಿ ಕೆತ್ತಿದ ಬೇಲೂರು ಚನ್ನಕೇಶವ(ಕಪ್ಪೆ ಚನ್ನಿಗರಾಯ) ಮೂರ್ತಿಯಲ್ಲಿ ದೋಷವಿದೆ ಎಂಬ ಮಾತುಗಳು ಕೇಳಿಬಂದಾಗ, ಬೇಸರಗೊಂಡ ಜಕಣಾಚಾರಿ ತನ್ನ ಕೈ ಬಲಿಕೊಟ್ಟನು ಎಂಬ ಕತೆಯಿದೆ. ದೇವರ ಅನುಗ್ರಹದಂತೆ ತನ್ನ ಹುಟ್ಟೂರಿನಲ್ಲಿ ಮತ್ತೊಂದು ದೇವಸ್ಥಾನವನ್ನು ಅಮರಶಿಲ್ಪಿ ನಿರ್ಮಿಸುತ್ತಾನೆ. ಆಗ ಪುನಃ ಅವನು ತನ್ನ ಕೈಯನ್ನು ಮರಳಿ ಪಡೆಯುತ್ತಾನೆ. ಬೇಲೂರಿನಲ್ಲಿ ಅತ್ಯದ್ಭುತವಾದ ಕೆತ್ತನೆಗಳನ್ನು ಮಾಡಿರುವ ಜಕಣಾಚಾರಿ ಕೊನೆಯದಾಗಿ ಕೈದಾಳಕ್ಕೆ ಬಂದು ತನ್ನ ಮೊಂಡಗೈಯಲ್ಲಿ ಚನ್ನಕೇಶವನ ವಿಗ್ರಹವನ್ನು ಕೆತ್ತಿದನು. ತದನಂತರ ದೇವರು ಅವನ ಭಕ್ತಿಗೆ ಮೆಚ್ಚಿ ಕೈಯನ್ನು ಮರಳಿ ನೀಡುತ್ತಾನೆ ಎಂಬ ಕತೆಯಿದೆ.

ಕೈದಾಳ ಅಮರಶಿಲ್ಪಿ

ಅಮರಶಿಲ್ಪಿಯು ಕೊನೆಯದಾಗಿ ಕೆತ್ತನೆ ಮಾಡಿರುವ ವಿಗ್ರಹ ಕೈದಾಳದ ದೇವಾಲಯದಲ್ಲಿದ್ದು, ಆ ವಿಗ್ರಹವು ಸರಿಸುಮಾರು ಎಂಟೂವರೆ ಅಡಿ ಎತ್ತರವಿದೆ. ದೇಗುಲದ ಕೆಲವೆಡೆ ವಿಷ್ಣುವಿನ ದಶಾವತಾರದ ಚಿತ್ರಗಳನ್ನು ಕೆತ್ತಲಾಗಿದೆ. ಪ್ರತಿಯೊಂದು ಕಂಬಕ್ಕೂ ವಿಶೇಷವಾದ ಕೆತ್ತನೆ ನೀಡಿರುವುದರಿಂದ ಆಕರ್ಷಣೆಯಿಂದ ಕೂಡಿದೆ.

ಕೈದಾಳವು ತುಮಕೂರಿನಿಂದ ಕೆಲವೇ ಕಿ.ಮೀ ದೂರದಲ್ಲಿದೆ. ವಾರದ ಅಷ್ಟು ದಿನವೂ ಅಲ್ಲಿಗೆ ಭೇಟಿ ನೀಡಲು ಅವಕಾಶವಿದೆ.

Deekshith Nair

Deekshith Nair

Travel blogger and adventurer passionate about exploring new cultures and sharing travel experiences.

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!