Monday, December 8, 2025
Monday, December 8, 2025

ಕಾಫಿ ನಾಡಿನಲ್ಲಿ ಕೆಎಸ್‌ಟಿಡಿಸಿ

ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನಲ್ಲಿನ ಹೊಟೇಲ್‌ ಮಯೂರ ಯಗಚಿ ತುಂಬಾ ಸುಂದರ ಸ್ಥಳದಲ್ಲಿ ನೆಲೆಯಾಗಿದೆ. ಚಿಕ್ಕಮಗಳೂರು ಬಳಿಯ ಪಶ್ಚಿಮ ಘಟ್ಟಗಳಲ್ಲಿ ಹುಟ್ಟುವ ಯಗಚಿ ನದಿಯಿಂದ ಇದಕ್ಕೆ ಈ ಹೆಸರು ಬಂದಿದೆ. ಈ ಹೊಟೇಲ್‌ ಯಗಚಿ ಅಣೆಕಟ್ಟಿನ ಎದುರಿಗೇ ಇದೆ. ಇಲ್ಲಿಗೆ ಬರುವ ಅತಿಥಿಗಳು ಯಗಚಿ ಅಣೆಕಟ್ಟನ್ನು ಕಂಡು, ಅಲ್ಲಿ ಹರಿಯುವ ಜಲದ ಜುಳುಜುಳು ತಿಲ್ಲಾನವನ್ನು ಆಲಿಸಿ ಆನಂದಿಸಬಹುದು.

ನಮಗಿರುವುದು ಕೆಲವು ದಿನಗಳ ಬಿಡುವು, ಇರುವ ಅಷ್ಟು ಸಮಯವನ್ನಾದರೂ ನಾವು ಈ ನೆಲ-ಜಲ ನೋಡಲು ಮತ್ತು ನುಡಿಗಳನ್ನು ಅರಿಯಲು, ಆದಷ್ಟು ತಿಳಿಯಲು ವಿನಿಯೋಗಿಸಬೇಕು. ಲೋಕೋ ಭಿನ್ನ ರುಚಿ ಎನ್ನುತ್ತಾರೆ, ನಾನದನ್ನು ತಿಂದು ತಿರುಗಿಯೇ ನೋಡಬೇಕು ಎನ್ನುವವರಿಗೆ ಕೆಎಸ್‌ಟಿಡಿಸಿ ಸುಂದರ ಅವಕಾಶ ಮಾಡಿಕೊಟ್ಟಿದೆ. ಜವಾಬ್ದಾರಿಯುತ ಪ್ರವಾಸೋದ್ಯಮದ ಜಾಡಿನಲ್ಲಿ ನಿಮ್ಮನ್ನು ಕೈ ಹಿಡಿದು ನಡೆಸಲು ಹಾತೊರೆಯುತ್ತಿದೆ. ನಿಮ್ಮ ಆಯವ್ಯಯದ ಭಾರ ಕಡಿಮೆ ಮಾಡುವ ಮತ್ತು ಕೈಗೆಟುಕುವ ದರದ ಪ್ಯಾಕೇಜ್‌ಗಳನ್ನು ನೀಡಿದೆ. ಪ್ರಬುದ್ಧ ಪಯಣಿಗನಾಗಿ ನೀವು ತಿರುಗಲು, ತಿಳಿಯಲು, ಅನುಭವಗಳನ್ನು ಕಲೆಹಾಕಲು ಕೆಎಸ್‌ಟಿಡಿಸಿ ನಿಮ್ಮ ಸಂಗಾತಿಯಾಗಿರಲಿ. ಬಾವಿಯೊಳಗಿನ ಕಪ್ಪೆಯಾಗದೆ, ಬಾಂದಳದ ಹಕ್ಕಿಯಂತೆ ಸ್ವತಂತ್ರವಾಗಿ ಓಡಾಡಿ. ಸಾಕಷ್ಟು ಸುತ್ತಾಡಿ, ನಗರ ಜೀವನ ನಿಮ್ಮ ಮನಸನ್ನು ಒತ್ತಡಕ್ಕೆ ದೂಡಿರುತ್ತದೆ. ವಿಶ್ರಾಂತಿಗೆ ವಿಹಾರ ಅಗತ್ಯ. ತಿಲ್ಲಾನ ಹಾಡುವ ನದಿ, ತಂಪೆರೆಯುವ ಮಲೆನಾಡು, ಜೋಶ್‌ ನೀಡುವ ಜಲಪಾತಗಳು, ಕಾನನದ ನಡುವೆ ತುಸುದೂರ ನಡೆದಾಡಿ ಒಂದೆರಡು ದಿನ ಕಳೆದು ಬನ್ನಿ. ಮನಸಿನ ಆಯಾಸ ಮರೆಸುವ ಇಂಥ ಪ್ರವಾಸಕ್ಕೆ, ಮನಮೋಹಿಸುವ ತಾಣಗಳನ್ನು ಹುಡುಕಿ ಸುತ್ತಾಡಿಸಿ, ಸುವ್ಯಸ್ಥಿತ ವಾಸ್ತವ್ಯ ನೀಡುವ ಮೂಲಕ ಕೆಎಸ್‌ಟಿಡಿಸಿ ಈಗಾಗಲೇ ಜನಮನಗಳನ್ನು ಗೆದ್ದಿದ್ದು, ಇದು ನಮ್ಮದೇ ರಾಜ್ಯದ ಪ್ರವಾಸೋದ್ಯಮ ಇಲಾಖೆಗೆ ಗರಿ ತಂದುಕೊಟ್ಟಿದೆ. ರಾಜ್ಯದಲ್ಲಿನ ಎಲ್ಲ ಪ್ರವಾಸಿ ತಾಣಗಳನ್ನು ಬಲ್ಲ ಹಿರಿಯಣ್ಣ, ಪ್ರವಾಸದ ನಕ್ಷೆ ನೀಡಿದ್ದಾನೆ ಎಂದರೆ ಕೇಳಬೇಕೆ. ಆ ತಾಣದ ತನ್ಮಯತೆಯನ್ನು ನಿಮಗೆ ಕಟ್ಟಿಕೊಡುತ್ತದೆ. ಇದರಿಂದ ನೀವು ಅಲ್ಲಿನ ಜನಮನ, ಇತಿಹಾಸ, ಆಚರಣೆ, ಊಟೋಪಚಾರ, ತಾಣದ ವಿಶೇಷಗಳನ್ನು ಸುಲಭವಾಗಿ ಅರಿವಿಗೆ ತಂದುಕೊಳ್ಳಬಹುದು.

Mullayyanagiri peak

ಮುಳ್ಳಯ್ಯನಗಿರಿ

ಇದು ಕರ್ನಾಟಕದ ಅತಿ ಎತ್ತರದ ಬೆಟ್ಟ. ಸಮುದ್ರ ಮಟ್ಟದಿಂದ 1923 ಮೀಟರ್‌ ಎತ್ತರವಾಗಿದ್ದು, ಬಾಂದಳದ ಮೋಡಗಳು ಗಿರಿಯ ತುದಿ ಹತ್ತಿ ನಿಂತಾಗ ಸ್ವರ್ಗ ಸದೃಶವಾಗಿ ಕಾಣುತ್ತವೆ. ಇದಕ್ಕೆ ಟ್ರೆಕ್ಕಿಂಗ್‌ ಪ್ರಿಯರ ತವರು ಎಂದರೆ ತಪ್ಪಾಗದು. ಇಲ್ಲಿಗೆ ಚಾರಣಕ್ಕೆ ಬರುವವರ ಸಂಖ್ಯೆಯೇ ಅತ್ಯಧಿಕವಾಗಿದೆ. ಅಲ್ಲಿ ನಿಂತು ಕಣ್ಣು ಹಾಯಿಸಿದರೆ ಬಾಬಾ ಬುಡನ್‌ಗಿರಿಯನ್ನು ಕಣ್ತುಂಬಿಕೊಳ್ಳಬಹುದು. ಗಿರಿಯ ಮೇಲೆ ಮುಳ್ಳಯ್ಯ ಸ್ವಾಮಿಯ ದೇವಾಲಯವಿದ್ದು, ಮುಳ್ಳಯ ಎಂಬ ಮುನಿ ಇಲ್ಲಿನ ಗುಹೆಯೊಂದರಲ್ಲಿ ತಪಸ್ಸು ಆಚರಿಸಿದ ಕಾರಣಕ್ಕೆ ಈ ಗಿರಿಗೆ ಮುಳ್ಳಯ್ಯನಗಿರಿ ಎಂಬ ಹೆಸರು ಬಂದಿದೆ ಎಂದು ನಂಬಲಾಗಿದೆ.

ಸೀತಾಳಯ್ಯನಗಿರಿ

ಈ ಗಿರಿಯು ಮುಳ್ಳಯ್ಯನಗಿರಿ ಚಾರಣದ ಆರಂಭಿಕ ಹಂತದಲ್ಲಿದೆ. ಮುಳ್ಳಯ್ಯನಗಿರಿಗೆ ಹೋಗುವ ಮೊದಲು ಸೀತಾಳಯ್ಯನ ಗಿರಿಯ ದೇವಸ್ಥಾನದಲ್ಲಿ ದೇವರ ದರ್ಶನ ಪಡೆದು ಹೋಗುವುದು ಪ್ರತೀತಿ. ಸೀತಾಳಯ್ಯ ಸಂತ ಇಲ್ಲಿ ತಪಸ್ಸು ಆಚರಿಸಿದ್ದರಿಂದ ಈ ಗಿರಿಗೆ ಸೀತಾಳಯ್ಯನಗಿರಿ ಎಂಬ ಹೆಸರು ಬಂದಿದೆ ಎನ್ನಲಾಗಿದೆ. ಸೀತಾಲಯ್ಯ ಮಲ್ಲಿಕಾರ್ಜುನ ಸ್ವಾಮಿಯ ದೇವಾಲಯವೂ ಇದೆ. ಇಲ್ಲಿಂದ ಕಣ್ಣು ನೆಟ್ಟರೆ ಕಾಣಸಿಗುವುದೆಲ್ಲ ಹಸಿರು. ಇಂಥ ಹತ್ತು ಹಲವು ರೋಚಕ ತಾಣಗಳಿಗೆ ಚಿಕ್ಕಮಗಳೂರು ತವರಿನಂತಿದೆ. ಕೆಎಸ್‌ಟಿಡಿಸಿ ಮೂಲಕ ನೀವಲ್ಲಿಗೆ ಹೋದರೆ ಎಲ್ಲವನ್ನು ನೋಡಿಬರಬಹುದು.

Mullayyanagiri trek

ಪ್ಯಾಕೇಜ್

ಕೆಎಸ್‌ಟಿಡಿಸಿ ಬುಕ್ ಮಾಡುವವರಿಗೆ ವಿಶೇಷ ಅವಕಾಶಗಳಿವೆ.

ಡಿಲಕ್ಸ್ ಎಸಿ ಬಸ್‌ನಲ್ಲಿ ಆರಾಮದಾಯಕ ಸುಖ ಪ್ರಯಾಣ.

ಆಯ್ಕೆ ಮಾಡಿಕೊಂಡ ಪ್ಯಾಕೇಜ್ ಅನ್ವಯ ಪ್ರವಾಸ

ರಾಜ್ಯ, ಕೇಂದ್ರ ಮತ್ತು ಸಾರ್ವಜನಿಕ ವಲಯದ ಉದ್ಯೋಗಿಗಳಿಗೆ ಎಲ್‌ಟಿಸಿ ಸೌಲಭ್ಯ

ಕೆ ಎಸ್ ಟಿ ಡಿ ಸಿ ನಿಮ್ಮ ಆಯ್ಕೆಯಾಗಲಿ

ಕೆ ಎಸ್ ಟಿ ಡಿ ಸಿ ಯ ಪ್ಯಾಕೇಜ್ ಬಜೆಟ್ ಸ್ನೇಹಿಯಾಗಿದ್ದು, ಬೇರೆಲ್ಲೂ ಸಿಗದ ಆರಾಮದಾಯಕ, ಸುರಕ್ಷಿತ ಮತ್ತು ಸುಸಜ್ಜಿತ ಯೋಜನೆಯ ಪ್ರವಾಸದ ಭರವಸೆಯನ್ನು ನೀಡುತ್ತದೆ.

ಆರಾಮದಾಯಕ ಪ್ರಯಾಣ: ಆಧುನಿಕ ಬಸ್‌ಗಳು ಮತ್ತು ಅನುಭವಿ ಚಾಲಕರೊಂದಿಗೆ ಇಡೀ ದಿನ ಸುರಕ್ಷಿತ ಪ್ರಯಾಣ ಮಾಡಬಹುದು.

ವಿಶೇಷ ಗೈಡ್‌ಗಳು: ತಾಣಗಳ ಇತಿಹಾಸ ಮತ್ತು ಮಹತ್ವವನ್ನು ವಿವರಿಸುವ ತಜ್ಞ ಗೈಡ್‌ಗಳು ಪ್ರವಾಸಿಗರೊಂದಿಗೆ ಇರುತ್ತಾರೆ.

ಸಮಗ್ರ ಯೋಜನೆ: ಪ್ಯಾಕೇಜ್‌ನಲ್ಲಿ ಇರುವ ಎಲ್ಲ ತಾಣಗಳನ್ನೂ ಮನಸ್ಸಿಗೆ ಸಮಾಧಾನ ಆಗುವವರೆಗೂ ನೋಡಬಹುದು. ಹಿತಾನುಭವ ಪಡೆಯಬಹುದು. ಸಮಯದ ಪ್ಲ್ಯಾನಿಂಗ್ ಕೂಡ ಅತ್ಯಂತ ಶಿಸ್ತಿನಿಂದ ರೂಪಿಸಿರಲಾಗುತ್ತದೆ.

ಕೈಗೆಟುಕುವ ಬೆಲೆ: ಎಲ್ಲರಿಗೂ ಒಗ್ಗುವ, ಮಧ್ಯಮ ವರ್ಗದವರ ಕನಸು ನನಸು ಮಾಡುವ, ಕೈಗೆಟುಕುವ ದರದಲ್ಲಿ ಪ್ರಯಾಣ ಸೇವೆ ಸಿಗುತ್ತದೆ. ಮತ್ತೇನು ಯೋಚನೆ ಮಾಡ್ತಿದ್ದೀರಿ? ಕೆಎಸ್‌ಟಿಡಿಸಿ ನಿಮ್ಮ ಸಂಗಾತಿ. ಈಗಲೇ ಬುಕ್ ಮಾಡಿ. ಹೊರಡಿ. ಜಗತ್ತು ಕೈ ಬೀಸಿ ಕರೆಯುತ್ತಿದೆ.

Chikkamagaluru scenic beauty

ಪ್ಯಾಕೇಜ್‌ಗಳು

ಬೆಂಗಳೂರು ಟು ಯಗಚಿ, ಚಿಕ್ಕಮಗಳೂರು ಟೂರು

ದಿನ – 1

ಬೆಳಗ್ಗೆ 6:00ಕ್ಕೆ ಯಶವಂತಪುರದ ಬಿಎಂಟಿಸಿ ಬಸ್ ನಿಲ್ದಾಣದ ಕೆಎಸ್‌ಟಿಡಿಸಿ ಬುಕಿಂಗ್ ಕೌಂಟರ್‌ನಿಂದ ಹೊರಡಲಾಗುತ್ತದೆ

ಬೆಳಗ್ಗೆ 8:00 - 8:30ರವರೆಗೆ ಉಪಾಹಾರ

ಬೆಳಗ್ಗೆ 11:00ರಿಂದ ಮಧ್ಯಾಹ್ನ 2:00ರವರೆಗೆ ಯಗಚಿ ಅಣೆಕಟ್ಟು, ದೋಣಿ ವಿಹಾರ ಮತ್ತು ಊಟ

ಮಧ್ಯಾಹ್ನ 2:30ರಿಂದ ಸಂಜೆ 6:00ರವರೆಗೆ ಯಗಚಿ ಅಣೆಕಟ್ಟು, ಭದ್ರಾ ವನ್ಯಜೀವಿ ಅಭಯಾರಣ್ಯ ಮತ್ತು ಯಗಚಿಯಲ್ಲಿ ನಿಲುಗಡೆ

ದಿನ - 2

ಬೆಳಗ್ಗೆ 8:00 - 8:30ರವರೆಗೆ ಉಪಾಹಾರದ ನಂತರ ಹೊಟೇಲ್ ಚೆಕ್ ಔಟ್

ಬೆಳಗ್ಗೆ 8:30 - ಸಂಜೆ 4:0ರವರೆಗೆ ಸಿರಿ ಪ್ರತಿಮೆ, ಹೊನ್ನಮಹಳ್ಳ ಜಲಪಾತ, ಶೂಟಿಂಗ್ ಪಾಯಿಂಟ್, ಬಾಬಾಬುಡನಗಿರಿ, ಝಡ್ ಪಾಯಿಂಟ್, ಮಾಣಿಕ್ಯಧಾರ ಜಲಪಾತ, ಝರಿ ವಾಟರ್ ಫಾಲ್ಸ್ (ಹೆಚ್ಚುವರಿ ಜೀಪ್ ಶುಲ್ಕ ರೂ. 100 – 150/-) ಊಟದ ಸಮಯ, ಸೀತಾಲಯ್ಯನಗಿರಿ, ಮುಳ್ಳಯ್ಯನಗಿರಿ ಚಾರಣ

ರಾತ್ರಿ 11:00ಕ್ಕೆ ಬೆಂಗಳೂರಿಗೆ ಹಿಂತಿರುಗಲಾಗುತ್ತದೆ.

Siri nature park

ಹೊಟೇಲ್‌ ಮಯೂರ ಯಗಚಿ

ಕನ್ನಡದ ಕಲಿಪುರುಷನ ಹೆಸರನ್ನೇ ತಾನು ಇಟ್ಟುಕೊಂಡು, ಆತಿಥ್ಯ ಕ್ಷೇತ್ರದ ಹೆಗ್ಗುರುತಾಗಿ ಮಯೂರ ಹೊಟೇಲ್‌ಗಳು ಗುರುತಿಸಿಕೊಂಡಿವೆ.ಇವುಗಳನ್ನು ಕರ್ನಾಟಕದ ರಾಜ್ಯದಾದ್ಯಂತ ಕಾಣಬಹುದು. ಈ ಹೊಟೇಲ್‌ಗಳು ಆತಿಥ್ಯ ಮತ್ತು ಊಟೋಪಚಾರಕ್ಕೆ ದೇಶ ವಿದೇಶಗಳಲ್ಲೂ ಹೆಸರು ಮಾಡಿವೆ. ರಾಜ್ಯದ ಸುಂದರ ಅರಣ್ಯಧಾಮಗಳು, ಐತಿಹಾಸಿಕ ಪುಣ್ಯ ಸ್ಥಳಗಳು, ಪ್ರವಾಸಿ ತಾಣಗಳು, ವಿಶ್ವ ಪರಂಪರೆಯ ತಾಣಗಳಲ್ಲೂ ಈ ಮಯೂರ ನೆಲೆಸಿದೆ. ಅಲ್ಲೆಲ್ಲ ಅತಿಥಿಯಾಗಿ ಬರುವ ಜನರು ಮಯೂರವನ್ನು ಮೆಚ್ಚಿಕೊಂಡಿದ್ದಾರೆ.

ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನಲ್ಲಿನ ಹೊಟೇಲ್‌ ಮಯೂರ ಯಗಚಿ ತುಂಬಾ ಸುಂದರ ಸ್ಥಳದಲ್ಲಿ ನೆಲೆಯಾಗಿದೆ. ಚಿಕ್ಕಮಗಳೂರು ಬಳಿಯ ಪಶ್ಚಿಮ ಘಟ್ಟಗಳಲ್ಲಿ ಹುಟ್ಟುವ ಯಗಚಿ ನದಿಯಿಂದ ಇದಕ್ಕೆ ಈ ಹೆಸರು ಬಂದಿದೆ. ಈ ಹೊಟೇಲ್‌ ಯಗಚಿ ಅಣೆಕಟ್ಟಿನ ಎದುರಿಗೇ ಇದೆ. ಇಲ್ಲಿಗೆ ಬರುವ ಅತಿಥಿಗಳು ಯಗಚಿ ಅಣೆಕಟ್ಟನ್ನು ಕಂಡು, ಅಲ್ಲಿ ಹರಿಯುವ ಜಲದ ಜುಳುಜುಳು ತಿಲ್ಲಾನವನ್ನು ಆಲಿಸಿ ಆನಂದಿಸಬಹುದು. ಚಿಕ್ಕಮಗಳೂರು, ಬೇಲೂರು, ಹಳೇಬೀಡು ಮತ್ತು ಹಾಸನದಂಥ ಪಟ್ಟಣಗಳು ಅನತಿ ದೂರದಲ್ಲೇ ಇರುವುದರಿಂದ, ಹೊಟೇಲ್‌ ಮಯೂರ ಯಗಚಿ ಕುಟುಂಬ ವಿಹಾರಕ್ಕೆ ಸೂಕ್ತ ಸ್ಥಳವಾಗಿದೆ. ಅತ್ತ ಪ್ರವಾಸ ಹೋದಾಗ ಉಳಿದುಕೊಳ್ಳಲು ಈ ಹೊಟೇಲ್‌ ಸೂಕ್ತವಾಗಿದೆ. ಹೊಟೇಲ್‌ನಲ್ಲಿರುವ ಕೊಠಡಿಗಳು ಆರಾಮದಾಯಕ ಮತ್ತು ಕೈಗೆಟುಕುವ ದರದಲ್ಲಿವೆ. ಅತಿಥಿಗಳು ವಿವಿಧ ರೀತಿಯ ಅಡುಗೆಗಳನ್ನು ಇಲ್ಲಿ ಆಸ್ವಾದಿಸಬಹುದು. ಅದನ್ನು ರುಚಿಕಟ್ಟಾಗಿ ಮಾಡಿ ನೀಡಲು ಇಲ್ಲಿ ಸುಸಜ್ಜಿತ ಮತ್ತು ಸ್ವಚ್ಛ ರೆಸ್ಟೋರೆಂಟ್‌ ಸದಾ ನಿಮ್ಮ ಸೇವೆಗೆ ಸಿದ್ಧವಾಗಿರುತ್ತದೆ. ಆತಿಥ್ಯದಲ್ಲಿ ಮಯೂರ ಪ್ರವಾಸ ಪ್ರಿಯರಿಗೆ ಚಿರಪರಿಚಿತವಾಗಿದ್ದು, ಆತ್ಮೀಯ ಮತ್ತು ಸ್ನೇಹಪರ ಸಿಬ್ಬಂದಿಗಳು ನಗುಮೊಗದಲ್ಲೆ ನಿಮ್ಮನ್ನು ಸತ್ಕರಿಸುತ್ತಾರೆ. ಮರಳಿ ಬರುವಾಗ ಅವರನ್ನು ನೀವು ಮರೆಯುವುದೇ ಕಷ್ಟವಾದೀತು. ಅಷ್ಟು ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಾರೆ. ಆ ಸಮಯದಲ್ಲಿ ನಿಮಗೆ ಮನೆಯ ಅನುಭವವಾಗುವುದಂತೂ ಖಾಯಂ. ಪ್ರವಾಸಿಗರ ಬಯಕೆಗಳನ್ನು ಈಡೇರಿಸಿ ಅವರನ್ನು ಸಂತೃಪ್ತಿಗೊಳಿಸಲು ಪ್ರತಿ ಪ್ರವಾಸಿ ತಾಣದಲ್ಲೂ ಮಯೂರ ಹೊಟೇಲ್‌ ಇದ್ದೇ ಇದೆ. ಆತಿಥ್ಯ ಕ್ಷೇತ್ರ ಎಂದ ಕೂಡಲೇ ಮಯೂರ ಹೆಸರು ನೆನಪಾಗಿಯೇ ಆಗುತ್ತದೆ. ಅಷ್ಟರಮಟ್ಟಿಗೆ ಅದು ಪ್ರಸಿದ್ಧಿಗಳಿಸಿದೆ. ಊರಿನ ಗುರುತು ಪರಿಚಯವಿಲ್ಲದ ಪ್ರವಾಸಿಗರ ಆಯ್ಕೆಯೂ ಮಯೂರವೇ ಆಗಿರುತ್ತದೆ. ಕೆಎಸ್‌ಟಿಡಿಸಿ ಪ್ಯಾಕೇಜ್‌ನಡಿ ಪ್ರವಾಸಕ್ಕೆ ಹೊರಡುವ ಎಲ್ಲ ಪ್ರವಾಸಿಗರದೂ ಮಯೂರವೇ ಆಯ್ಕೆ.

ವಿಳಾಸ:

ಯಗಚಿ ಡ್ಯಾಂ ಎದುರು, ಚಿಕ್ಕಮಗಳೂರು ರಸ್ತೆ,

ಚಿಕ್ಕಬಿದಿಗೆರೆ ಗ್ರಾಮ, ಬೇಲೂರು -573115, ಹಾಸನ

ಮಾಹಿತಿಗಾಗಿ: 8970650041, ಶ್ರೀ ಕೆವಿನ್ ಡಿ'ಸೋಜಾ

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!