Monday, December 15, 2025
Monday, December 15, 2025

ಗುರು ರಾಯರ ಸನ್ನಿಧಾನದಲ್ಲಿ ಕೆಎಸ್‌ಟಿಡಿಸಿ ತೇರು!

ಶ್ರೀ ಗುರು ರಾಘವೇಂದ್ರರು ಇಂದಿನ ಆಂಧ್ರಪ್ರದೇಶದಲ್ಲಿರುವ ಮಂತ್ರಾಲಯದ ಬಳಿಯ ಪಂಚಮುಖಿ ಎಂಬ ಸ್ಥಳದಲ್ಲಿ ತಪಸ್ಸುಆಚರಿಸಿದ್ದರು, ಅಲ್ಲಿ ಅವರು ಪಂಚಮುಖಿ ಮುಖ್ಯಪ್ರಾಣ ರೂಪದಲ್ಲಿ ಹನುಮಂತನ ದರ್ಶನ ಪಡೆದರು. ಇದೇ ಸ್ಥಳದಲ್ಲಿ ಪಂಚಮುಖಿ ಮೂಕ್ಯ ಪ್ರಾಣದೇವರ ದೇವಾಲಯವನ್ನು ನೀವು ಕಾಣಬಹುದು.

ತಿರುಗಿ ಕೆಟ್ಟವರಿಲ್ಲ ಎಂಬ ಮಾತು ಸಾರ್ವಕಾಲಿಕ ಸತ್ಯ. ಪ್ರವಾಸ ಒಂದೇ ವ್ಯಕ್ತಿಯನ್ನು ವೈವಿಧ್ಯ ಜನಮನಗಳ ಮಧ್ಯೆ ಬೆರೆಸುತ್ತದೆ. ವಿಶ್ವ ಮಾನವನನ್ನಾಗಿ ಮಾಡುತ್ತದೆ. ದೇಶ, ಭಾಷೆ, ವೈವಿಧ್ಯ ಭಾವಗಳನ್ನು ನಮ್ಮ ಮುಂದೆ ತಂದು ನಿಲ್ಲಿಸುತ್ತದೆ. ಲೋಕೋ ಭಿನ್ನ ರುಚಿ ಇದರ ಅನುಭವವೂ ಸುತ್ತುವುದರಲ್ಲೇ ಅಡಗಿದೆ. ಎಲ್ಲ ಕಡೆಯೂ ತಿರುಗಾಡಬೇಕು. ತಿನ್ನಲೂಬೇಕು ಕಣ್ರೀ. ಪ್ರವಾಸದ ಪೂರ್ಣ ಅನುಭವ, ತಾಣದ ಜತೆಗಿನ ಇಂಥ ಅವಕಾಶಗಳಲ್ಲಿ ಬೆರೆಯುವುದರಲ್ಲೂ ಇದೆ. ಸರೀ ಕಣಯ್ಯ, ನಾನದನ್ನು ತಿಂದು ತಿರುಗಿಯೇ ನೋಡಬೇಕು ಎನ್ನುವವರಿಗೆ ಇದೊಂದಿದೆ ಸುಂದರ ಅವಕಾಶ. ಮತ್ತದೇ ಜವಾಬ್ದಾರಿಯುತ ಪ್ರವಾಸ. ಇದರಿಂದಲೇ ಎಲ್ಲೆಡೆಯು ಇಂಥ ಸುಂದರ ಅನುಭವಗಳು ನಿಮಗಾಗಬಹುದು. ಸುತ್ತಿ ಸುಳಿದು ಸಾಕಷ್ಟು ತಿಳಿದರೂ ಈ ಇತಿಹಾಸ ಮುಗಿಯದು. ಸರ್ವಜ್ಞನೇ ಸರ್ವವನ್ನು ಪ್ರವಾಸದಲ್ಲಿ ಕಂಡು, ಕೇಳಿ, ಅನುಭವಿಸಿ ಅರಿತನಂತೆ. ಅದರಂತೆ ಸ್ಥಳವೊಂದರ ಪ್ರಸ್ತುತ ಮತ್ತು ಪುರಾತನ ಸ್ಥಿತಿಗತಿಗಳನ್ನು, ಅಲ್ಲಿಗೆ ಭೇಟಿ ನೀಡುವುದರಿಂದ ಅನುಭವದ ನೆಲೆಯಲ್ಲಿ ಅರಿವಿಗೆ ತಂದುಕೊಳ್ಳಬಹುದು. ಇಂಥ ಪ್ರವಾಸಕ್ಕೆ ಸಹಕರಿಸುವ ಹಲವು ಇತಿಹಾಸ, ವನವಾಸ, ಊಟೋಪಚಾರ, ಆಚರಣೆ, ಸಂಸ್ಕೃತಿ, ಉಡುಗೆ-ತೊಡುಗೆ, ಸ್ಥಳ ಪುರಾಣಗಳನ್ನು ಪರಿಚಯಿಸುತ್ತ ನಿಮ್ಮನ್ನು ಸುತ್ತಿಸಿ, ಆಯಾಸ ಮರೆಸಲು ಮನಮೋಹಿಸುವ ತಾಣಗಳಲ್ಲಿ ಉಳಿದುಕೊಳ್ಳಲು ವಾಸ್ತವ್ಯಗಳನ್ನು ಕಲ್ಪಿಸಿ ಕೆಎಸ್‌ಟಿಡಿಸಿ ಈಗಾಗಲೇ ಜನಮನಗಳನ್ನು ಗೆದ್ದಿದೆ.

ಇದು ನಮ್ಮ ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ವಿನೂತನ ಪ್ರಯತ್ನ. ಹೀಗಂದ ಮೇಲೆ ಇನ್ನೂ ಹೇಳುವ ಅವಶ್ಯಕತೆಯಿಲ್ಲ. ರಾಜ್ಯದಲ್ಲಿನ ಎಲ್ಲಾ ಪ್ರವಾಸಿ ತಾಣಗಳನ್ನು ಬಲ್ಲ ಹಿರಿಯಣ್ಣ ನಿಮ್ಮ ಕೈಹಿಡಿದು ನಡೆಸುತ್ತಾನೆ ಎಂದಮೇಲೆ ಮತ್ತೆ ಕಾಯುವುದೇಕೆ, ನಮ್ಮ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ನಿಗಮ ತೋರಿಸದ ತಾಣವಿಲ್ಲ. ಪ್ರವಾಸಿ ತಾಣಗಳ ನೈಜ ಸ್ಥಳೀಯತೆಯ ಸ್ವಾದವನ್ನು ತನ್ನ ಜತೆಗೆ ಪ್ರವಾಸಕ್ಕೆ ಬರುವ ಪಯಣಿಗನಿಗೆ ನೀಡಬೇಕು ಎನ್ನುವ ತವಕ ಅದರದ್ದು.

ಹಾಗಾಗಿಯೇ, ವಿಶ್ವ ಪ್ರಸಿದ್ಧ ಮೈಸೂರಿನಿಂದ ಮಂತ್ರಾಲಯಕ್ಕೆ ಪಯಣಿಗರನ್ನು ಹೊತ್ತು ಸಾಗಲು, ನೂತನ ಪ್ರವಾಸ ಪ್ಯಾಕೇಜ್‌ ಹೊರ ತಂದಿದೆ. ಎರಡು ದಿನಗಳ ಈ ಪ್ರವಾಸ ಪ್ಯಾಕೇಜ್‌ ಬೇರೆಲ್ಲೆಡೆಗಿಂತ ಕಡಿಮೆ ಖರ್ಚು ಅನುಭವ ಹೆಚ್ಚು ನೀಡುವ ಬಜೆಟ್‌ ಸ್ನೇಹಿ ಪ್ಯಾಕೇಜ್‌ ಆಗಿದೆ. ಇಲ್ಲಿ ಧಾರ್ಮಿಕ ಪ್ರವಾಸ ಇದೆ. ಜಂಜಾಟಗಳನ್ನೆಲ್ಲ ಬದಿಗಿಟ್ಟು ಇದೋ ಬಂದೆ ಗುರುರಾಯರೇ ಎಂದು ಓಡಾಡಿ ಬರಲು ಇದೊಂದು ಸುಂದರ ಅವಕಾಶ. ಮತ್ತೇಕೆ ತಡ ಸಿದ್ಧರಾಗಿ ಹೊರಡಿ, ಕೆಎಸ್‌ಟಿಡಿಸಿ ನಿಮಗಾಗಿ ಕಾಯುತ್ತಿದೆ.

A Journey of Faith, A Stay of Comfort_ KSTDC Mantralaya Tour

ಮಂತ್ರಮುಗ್ದರಾಗಿಸುವ ಮಂತ್ರಾಲಯ

ಮಂತ್ರಾಲಯವು ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಒಂದು ಯಾತ್ರಾ ಗ್ರಾಮ. 1671ರಲ್ಲಿ ಶ್ರಾವಣ ಕೃಷ್ಣ ಪಕ್ಷದ ದ್ವಿತೀಯ ದಿನದಂದು ಶ್ರೀ ಗುರು ರಾಘವೇಂದ್ರ ಸ್ವಾಮಿಗಳು ಇಲ್ಲಿ ಬೃಂದಾವನ ವಾಸಿಗಳಾಗಿದ್ದಾರೆ. 700 ವರ್ಷಗಳ ಕಾಲ ಬೃಂದಾವನದಲ್ಲಿಯೇ ನೆಲೆಸಿ ಭಕ್ತರನ್ನು ಹರಸುತ್ತಿದ್ದಾರೆ ಎನ್ನಲಾಗಿದೆ. ಶ್ರೀ ಗುರು ರಾಘವೇಂದ್ರ ಸ್ವಾಮಿಗಳು ದ್ವಾಪರ ಯುಗದಲ್ಲಿ ರಾಜ ಪ್ರಹ್ಲಾದನು ಭಗವಾನ್ ರಾಮನಿಗಾಗಿ ಯಜ್ಞಗಳನ್ನು ಮಾಡಿದ ಪ್ರದೇಶ ಎಂಬುದಾಗಿ ಈ ತಾಣದ ಕುರಿತು ಹೇಳಿದ್ದಾರೆ. ತುಂಗಭದ್ರಾ ನದಿಯ ದಡದಲ್ಲಿ ಈ ಮಂತ್ರಾಲಯವಿದ್ದು, ಯುಗಯುಗಗಳಲ್ಲೂ ಅನೇಕ ಯುಗಪುರುಷರ ಓಡಾಡಿದ ಪುಣ್ಯ ನೆಲ ಇದಾಗಿದೆ.

Mantralaya

ಪಂಚಮುಖಿ ಪ್ರಾಣದೇವರು

ಶ್ರೀ ಗುರು ರಾಘವೇಂದ್ರರು ಇಂದಿನ ಆಂಧ್ರಪ್ರದೇಶದಲ್ಲಿರುವ ಮಂತ್ರಾಲಯದ ಬಳಿಯ ಪಂಚಮುಖಿ ಎಂಬ ಸ್ಥಳದಲ್ಲಿ ತಪಸ್ಸುಆಚರಿಸಿದ್ದರು, ಅಲ್ಲಿ ಅವರು ಪಂಚಮುಖಿ ಮುಖ್ಯಪ್ರಾಣ ರೂಪದಲ್ಲಿ ಹನುಮಂತನ ದರ್ಶನ ಪಡೆದರು. ಇದೇ ಸ್ಥಳದಲ್ಲಿ ಪಂಚಮುಖಿ ಮೂಕ್ಯ ಪ್ರಾಣದೇವರ ದೇವಾಲಯವನ್ನು ನೀವು ಕಾಣಬಹುದು.

ಪ್ಯಾಕೇಜ್

ದಿನ : 1

ಸಂಜೆ 4:30 ಗಂಟೆಗೆ ಹೊಟೇಲ್‌ ಮಯೂರ ಹೊಯ್ಸಳ, ಮೈಸೂರಿನಿಂದ ಹೊರಡುವುದು

ರಾತ್ರಿ 8:30 ಗಂಟೆಗೆ ಮಾರ್ಗ ಮಧ್ಯೆ ಊಟ

ದಿನ : 2

ಬೆಳಗ್ಗೆ 5:30 ಗಂಟೆಗೆ ಮಂತ್ರಾಲಯಕ್ಕೆ ತಲುಪುತ್ತದೆ.

ಬೆಳಗ್ಗೆ 5.30 – 10:30ರವರೆಗೆ ಫ್ರೆಶಪ್‌, ದರ್ಶನ ಮುಗಿಸಿ, ಉಪಾಹಾರ.

ಬೆಳಗ್ಗೆ 11:00 – ಮಧ್ಯಾಹ್ನ12:30ರವರೆಗೆ ಪಂಚಮುಖಿ ಆಂಜನೇಯನ ದರ್ಶನ.

ಮಧ್ಯಾಹ್ನ 1:00– 2.30ರವರೆಗೆ ಮಂತ್ರಾಲಯದಲ್ಲಿ ಊಟ.

ಸಂಜೆ 3:00 ಗಂಟೆಗೆ ಮಂತ್ರಾಲಯದಿಂದ ಹೊರಡುವುದು

ಬೆಳಗ್ಗೆ 2:00 ಗಂಟೆಗೆ ಹೊಟೇಲ್‌ ಮಯೂರ ಹೊಯ್ಸಳ, ಮೈಸೂರಿನಲ್ಲಿ ಪ್ರವಾಸ ಕೊನೆಗೊಳ್ಳುತ್ತದೆ.

ಪ್ಯಾಕೇಜ್

ಕೆಎಸ್‌ಟಿಡಿಸಿ ಬುಕ್ ಮಾಡುವವರಿಗೆ ವಿಶೇಷ ಅವಕಾಶಗಳಿವೆ.

ಡಿಲಕ್ಸ್ ಎಸಿ ಬಸ್‌ನಲ್ಲಿ ಆರಾಮದಾಯಕ ಮತ್ತು ಸುಖಕರ ಪ್ರಯಾಣ.

ಆಯ್ಕೆ ಮಾಡಿಕೊಂಡ ಪ್ಯಾಕೇಜ್ ಅನ್ವಯ ಪ್ರವಾಸ.

ರಾಜ್ಯ, ಕೇಂದ್ರ ಮತ್ತು ಸಾರ್ವಜನಿಕ ವಲಯದ ಉದ್ಯೋಗಿಗಳಿಗೆ ಎಲ್‌ಟಿಸಿ ಸೌಲಭ್ಯ.

ಕೆಎಸ್‌ಟಿಡಿಸಿ ನಿಮ್ಮ ಆಯ್ಕೆಯಾಗಲಿ

ಕೆಎಸ್‌ಟಿಡಿಸಿಯ ಪ್ಯಾಕೇಜ್ ಬಜೆಟ್ ಸ್ನೇಹಿಯಾಗಿದೆ.

ಪ್ರವಾಸಿಗರಿಗೆ ಆರಾಮದಾಯಕ, ಸುರಕ್ಷಿತ ಮತ್ತು ಸುಸಜ್ಜಿತ ಯೋಜಿತ ಪ್ರವಾಸದ ಭರವಸೆಯನ್ನು ನೀಡುತ್ತದೆ.

ಆರಾಮದಾಯಕ ಪ್ರಯಾಣ: ಆಧುನಿಕ ಬಸ್‌ಗಳು ಮತ್ತು ಅನುಭವಿ ಚಾಲಕರೊಂದಿಗೆ ಇಡೀ ದಿನ ಸುರಕ್ಷಿತ ಪ್ರಯಾಣ ಮಾಡಬಹುದು.

ವಿಶೇಷ ಗೈಡ್‌ಗಳು: ತಾಣಗಳ ಇತಿಹಾಸ ಮತ್ತು ಮಹತ್ವವನ್ನು ವಿವರಿಸುವ ತಜ್ಞ ಗೈಡ್‌ಗಳು ಪ್ರವಾಸಿಗರೊಂದಿಗೆ ಇರುತ್ತಾರೆ.

ಸಮಗ್ರ ಯೋಜನೆ: ಪ್ಯಾಕೇಜ್‌ನಲ್ಲಿ ಇರುವ ಎಲ್ಲ ತಾಣಗಳನ್ನೂ ಮನತಣಿಯುವವರೆಗೂ ನೋಡಬಹುದು. ಹಿತಾನುಭವ ಪಡೆಯಬಹುದು. ಸಮಯದ ಪ್ಲ್ಯಾನಿಂಗ್ ಕೂಡ ಅತ್ಯಂತ ಶಿಸ್ತಿನಿಂದ ರೂಪಿಸಿರಲಾಗುತ್ತದೆ.

ಕೈಗೆಟುಕುವ ಬೆಲೆ: ಎಲ್ಲರಿಗೂ ಒಗ್ಗುವ, ಮಧ್ಯಮ ವರ್ಗದವರ ಕನಸು ನನಸು ಮಾಡುವ, ಕೈಗೆಟುಕುವ ದರದಲ್ಲಿ ಪ್ರಯಾಣ ಸೇವೆ ಸಿಗುತ್ತದೆ. ಮತ್ತೇನು ಯೋಚನೆ ಮಾಡ್ತಿದ್ದೀರಿ? ಕೆಎಸ್‌ಟಿಡಿಸಿ ನಿಮ್ಮ ಪ್ರವಾಸ ಸಂಗಾತಿ. ಈಗಲೇ ಬುಕ್ ಮಾಡಿ. ಹೊರಡಿ. ಜಗತ್ತು ಕೈ ಬೀಸಿ ಕರೆಯುತ್ತಿದೆ.

Hotel mayura durga chitradurga

ದುರ್ಗದಲ್ಲಿ ಹೊಟೇಲ್‌ ಮಯೂರ ದುರ್ಗ ಆತಿಥ್ಯ

ಕಲಿ ಪುರುಷ ಮಯೂರ ಹೆಸರಿನ ಹೊಟೇಲ್‌ ಹೆಸರಿಗೆ ತಕ್ಕಂತ ಅದ್ಭುತ ಹೊಟೇಲ್‌. ಇದು ಜಗತ್ತಿನ ಮೂಲೆ ಮೂಲೆಗಳಿಂದ ರಾಜ್ಯಕ್ಕೆ ಬರುವ ಜನರ ಮನದಲ್ಲೂ ಅದರಷ್ಟೇ ಹೆಸರು ಮಾಡಿದೆ. ಇಲ್ಲಿನ ಊಟ, ಉಪಚಾರ, ವಾಸ್ತವ್ಯ ಎಲ್ಲವೂ ಜನಮನ ಗೆದ್ದಿದೆ. ಸುಂದರ ಅನುಭವ, ಅಚ್ಚಳಿಯದ ನೆನಪುಗಳ ಗಂಟನ್ನು ಉಡುಗೊರೆಯಾಗಿ ನೀಡಿ ಪ್ರವಾಸಿಗರನ್ನು ಉಪಚರಿಸಿ ನೋಡಿಕೊಳ್ಳುವ ಇದು ಹೊಟೇಲ್‌ ಇಂಡಸ್ಟ್ರಿಯ ಬ್ರಾಂಡ್‌. ಪ್ರತಿ ಪ್ರವಾಸಿ ತಾಣದಲ್ಲೂ ಅನುಭವಿ ಪಯಣಿಗನ ವಾಸ್ತವ್ಯ ಹೊಟೇಲ್‌ ಮಯೂರದಲ್ಲೇ ಆಗಿರುತ್ತದೆ. ಅಷ್ಟರಮಟ್ಟಿಗೆ ಮಯೂರ ಪ್ರಸಿದ್ಧಿಗಳಿಸಿದೆ. ಕೆಎಸ್‌ಟಿಡಿಸಿ, ಪ್ರವಾಸದಲ್ಲಿ ನಿಮ್ಮ ಆಯ್ಕೆಯಾಗಿದ್ದರೆ, ಈ ಪ್ಯಾಕೇಜ್‌ನಡಿ ಪ್ರವಾಸಕ್ಕೆ ಹೊರಡುವ ಎಲ್ಲರಿಗೂ ಹೊಟೇಲ್ ಮಯೂರ ಅಚ್ಚುಕಟ್ಟಾದ ವಾಸ್ತವ್ಯ ಮತ್ತು ಊಟೋಪಚಾರಗಳನ್ನು ನೀಡುತ್ತದೆ. ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲೂ ಮಯೂರ ಹೊಟೇಲ್‌ನ ಶಾಖೆಗಳಿವೆ. ಇದು ಗುಣಮಟ್ಟ ಮತ್ತು ಆತ್ಮೀಯವಾದ ಆತಿಥ್ಯದ ಹೆಗ್ಗುರುತು. ಶುಚಿ ಮತ್ತು ರುಚಿ ಎರಡಕ್ಕೂ ಮಯೂರ ದಿ ಬೆಸ್ಟ್. ಅಲ್ಲಿನ ಸಿಬ್ಬಂದಿಯೂ ನಿಮ್ಮನ್ನು ಆತ್ಮೀಯವಾಗಿ ಉಪಚರಿಸುತ್ತಾರೆ. ಇವುಗಳ ಜತೆಗೆ ನಿಮಗೆ ಚಾರಣ, ಪ್ರಕೃತಿ ಪ್ರಿಯರಿಗೂ ಪ್ರಿಯವಾದ, ಒನಕೆ ಓಬವ್ವನ ಸಾಹಸಗೀತೆಯನ್ನು ಸಾರುವ, ಹೊನಲು ಬಿಸಿಲು ಒಗ್ಗೂಡುವ ಬೆಟ್ಟಗಾಡು ಚಿತ್ರದುರ್ಗದ ಸಾಂಗತ್ಯ ಸಿಕ್ಕರೆ ಹೇಗಿರುತ್ತದೆ? ಹೌದು, ಇಂತದ್ದೊಂದು ಅವಕಾಶ ಹೊಟೇಲ್‌ ಮಯೂರ ದುರ್ಗದಲ್ಲಿದೆ. ವಿಶೇಷವೆಂದರೆ ಇದು ಚಿತ್ರದುರ್ಗ ಕೋಟೆಯ ಬಳಿಯೇ ಇದೆ. ನೀವಲ್ಲಿ ಉಳಿಯುವ ಅಷ್ಟು ಘಳಿಗೆಯೂ ರಾಜರಂತೆ ಇರಬಹುದು. ಅಂದರೆ ಹೊಟೇಲ್‌ನ ಆತಿಥ್ಯ ಅಷ್ಟು ಅಚ್ಚುಕಟ್ಟಾಗಿರುತ್ತದೆ. ವಿಷಯ ವಿಶೇಷಗಳಿಂದ ಇತಿಹಾಸ ನಿಬ್ಬೆರಗಾಗಿ ನೋಡುವಂತೆ ಮಾಡಿದ ಚಿತ್ರದುರ್ಗವನ್ನು ಹತ್ತಿರದಲ್ಲೇ ಉಳಿದು ನೀವೂ ನೋಡಬಹುದು. ಇತಿಹಾಸ ಪ್ರಸಿದ್ಧ ಚಿತ್ರದುರ್ಗದ ವಿಳಾಸ ನಿಮಗೆ ಹೇಳುವ ಅವಶ್ಯಕತೆಯಿಲ್ಲ. ಅಲ್ಲಿಗೆ ಹೋದಾಗ ಹೊಟೇಲ್‌ ಮಯೂರ ದುರ್ಗಕ್ಕೆ ನೀವೂ ಹೀಗೆ ಹೋದರಾಯಿತು. ಹೊಟೇಲ್ ಮಯೂರ ದುರ್ಗ ಚಿತ್ರದುರ್ಗ ಕೋಟೆಯ ಎದುರಿಗೆ, ಮಹಾರಾಣಿ ಕಾಲೇಜು ಪಕ್ಕದಲ್ಲೇ ಇದೆ.

ಈ ಸುಂದರ ಹೊಟೇಲ್‌ನಲ್ಲಿ 8 ಹವಾನಿಯಂತ್ರಿತ, 8 ಹಾಸಿಗೆಗಳ 4 ಡಾರ್ಮಿಟರಿಗಳು, ಸಭಾಂಗಣ ಮತ್ತು ಕ್ರಿಯೇಟಿವ್‌ ಸಭಾಂಗಣ ಹೀಗೆ ವೈವಿಧ್ಯ ಆಯ್ಕೆಗಳಿವೆ. ಮನೆಯಲ್ಲಿ ಕೂತಿದ್ದರೆ ಕೂತೇ ಇರುತ್ತೀರಿ. ಆದರೆ ಇಲ್ಲಿಗೆ ಬಂದರೆ ಸ್ಥಳೀಯ ಸೇರಿ ಭಾರತೀಯ ವಿವಿಧ ಖಾದ್ಯಗಳನ್ನು ಸವಿಯಬಹುದು. ದುರ್ಗವನ್ನು ಸುತ್ತಲು ಮಾರ್ಗದರ್ಶಿಗಳನ್ನು ಮಯೂರ ನಿಮಗೆ ನೀಡುತ್ತದೆ. ಮನೆಯಲ್ಲಿ ಸಿಗುವ ವಾತಾವರಣ ಹೊಟೇಲ್ ಮಯೂರದಲ್ಲಿಯೂ ಸಿಗುತ್ತದೆ. ಆದರೆ ಅಲ್ಲಿನ ವಾತಾವರಣ ಹಿತವಾಗಿರುತ್ತದೆ. ಹೊಸತನವೂ ಇರುತ್ತದೆ. ಉಳಿದುಕೊಳ್ಳೋದಕ್ಕೇನು ಎಲ್ಲಿ ಬೇಕಾದರೂ ಉಳಿದುಕೊಳ್ಳಬಹುದು ಎನ್ನಬೇಡಿ. ಕೆಲವೊಮ್ಮೆ ಸ್ಟೇಯಿಂಗ್ ಕೂಡ ಒಳ್ಳೆಯ ವೈಬ್ ಕೊಡುತ್ತದೆ.

ಸಂಪರ್ಕ:

Yogesh. MK

Manager (Tours)

Mob No: +91 960 6987 822 | Email ID: tour.manager@kstdc.co

Karnataka State Tourism Development Corporation Ltd. (KSTDC)

Corporate Office: 5th Floor | Indhana Bhavan | Race Cource Road | Opposite to Renaissance Hotel,

Bangalore- 560009 | Karnataka | India

Office: 080-43344334 | Fax: 080-43344376

Email: feedback@kstdc.co | info@kstdc.co | website: www.kstdc.co | www.goldenchariot.org

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!