Tuesday, October 7, 2025
Tuesday, October 7, 2025

ಭಾರತ್ ಗೌರವ್ ಟ್ರೈನ್‌ನಲ್ಲಿ ಪ್ರಸಿದ್ಧ ದೇವಾಲಯಗಳ ದರ್ಶನ!

ಕೇಂದ್ರ ಪ್ರವಾಸೋದ್ಯಮ ಸಚಿವಾಲಯದಿಂದ ಮಾನ್ಯತೆ ಪಡೆದ ಟೂರ್ ಟೈಮ್ಸ್ ಸಂಸ್ಥೆಯ ವತಿಯಿಂದ, ತಮಿಳುನಾಡು, ಕೇರಳ ಮತ್ತು ಪಂಚ ದ್ವಾರಕಾದ ಪ್ರಸಿದ್ಧ ದೇವಾಲಯಗಳಿಗೆ ಎರಡು ವಿಶಿಷ್ಟ ಪ್ರವಾಸಿ ಸರ್ಕ್ಯೂಟ್ ರೈಲುಗಳನ್ನು ಹೊರಡಿಸಲಾಗುತ್ತಿದೆ ಎಂದು ಟೂರ್ ಟೈಮ್ಸ್ ಸಂಸ್ಥೆಯ ನಿರ್ದೇಶಕ ವಿಗ್ನೇಶ್.ಜಿ ತಿಳಿಸಿದ್ದಾರೆ. ವಿಜಯವಾಡ ಮತ್ತು ಹೈದರಾಬಾದ್‌ನಿಂದ ದೇವಾಲಯಾಧಾರಿತ ಪ್ರವಾಸೋದ್ಯಮವನ್ನು ಪ್ರೋತ್ಸಾಹಿಸುವುದೇ ಈ ಪ್ರಯಾಣಗಳ ಉದ್ದೇಶವಾಗಿದೆ.

ಭಾರತೀಯ ಪ್ರವಾಸೋದ್ಯಮವನ್ನು ಉತ್ತೇಜಿಸುವ ಭಾರತ್ ಗೌರವ್ ಟೂರಿಸ್ಟ್ ಟ್ರೈನ್‌ಗಳು ಇದೀಗ ದೇವಾಲಯ ಪ್ರವಾಸೋದ್ಯಮಕ್ಕೆ ವಿಶಿಷ್ಟ ಮೆರಗು ನೀಡುತ್ತಿವೆ. ಕೇಂದ್ರ ಪ್ರವಾಸೋದ್ಯಮ ಸಚಿವಾಲಯದಿಂದ ಮಾನ್ಯತೆ ಪಡೆದ ಟೂರ್ ಟೈಮ್ಸ್ ಸಂಸ್ಥೆಯ ವತಿಯಿಂದ, ತಮಿಳುನಾಡು, ಕೇರಳ ಮತ್ತು ಪಂಚ ದ್ವಾರಕಾದ ಪ್ರಸಿದ್ಧ ದೇವಾಲಯಗಳಿಗೆ ಎರಡು ವಿಶಿಷ್ಟ ಪ್ರವಾಸಿ ಸರ್ಕ್ಯೂಟ್ ರೈಲುಗಳನ್ನು ಹೊರಡಿಸಲಾಗುತ್ತಿದೆ ಎಂದು ಟೂರ್ ಟೈಮ್ಸ್ ಸಂಸ್ಥೆಯ ನಿರ್ದೇಶಕ ವಿಘ್ನೇಶ್.ಜಿ ತಿಳಿಸಿದ್ದಾರೆ. ಈ ಪ್ರಯಾಣಗಳ ಉದ್ದೇಶ ವಿಜಯವಾಡ ಮತ್ತು ಹೈದರಾಬಾದ್‌ನಿಂದ ದೇವಾಲಯಾಧಾರಿತ ಪ್ರವಾಸೋದ್ಯಮವನ್ನು ಪ್ರೋತ್ಸಾಹಿಸುವುದಾಗಿದೆ.

Rameshwaram temple

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 11 ದಿನಗಳ ತಮಿಳುನಾಡು ಮತ್ತು ಕೇರಳ ಪ್ಯಾಕೇಜ್ ನವೆಂಬರ್ 16 ರಿಂದ ಪ್ರಾರಂಭವಾಗಲಿದ್ದು, ಇದರಡಿ ನಟರಾಜ ಸ್ವಾಮಿ, ಅರುಣಾಚಲೇಶ್ವರ, ತ್ರಿಚಿ, ತಂಜಾವೂರು, ರಾಮೇಶ್ವರಂ, ಮಧುರೈ, ಕನ್ಯಾಕುಮಾರಿ ಹಾಗೂ ಗುರುವಾಯೂರಿನ ಪ್ರಸಿದ್ಧ ದೇವಾಲಯಗಳಲ್ಲಿ ದರ್ಶನ ಸಿಗಲಿದೆ ಎಂದು ತಿಳಿಸಿದರು. ಭಕ್ತರು ತಮ್ಮ ಪ್ರಯಾಣದ ಟಿಕೆಟ್‌ಗಳನ್ನು www.tourtimes.in ನಲ್ಲಿ ಆನ್‌ಲೈನ್ ಮೂಲಕ ಅಥವಾ 93550 21516 ಸಂಖ್ಯೆಗೆ ಕರೆ ಮಾಡಿ ಪಡೆಯಬಹುದು ಎಂದು ಅವರು ಹೇಳಿದರು.

Panchadwaraka Temple

ಈ ಪ್ರವಾಸದ ಇನ್ನೊಂದು ಭಾಗವಾಗಿ, ಪಂಚ ದ್ವಾರಕಾ ಜ್ಯೋತಿರ್ಲಿಂಗ ಯಾತ್ರೆ ನವೆಂಬರ್ 26 ರಂದು ಆರಂಭವಾಗಲಿದೆ ಎಂದು ಭಾರತ್ ಗೌರವ್ ವಿಜಯವಾಡ ವಲಯ ವ್ಯವಸ್ಥಾಪಕ ಟಿ. ಕಾರ್ತಿಕ್ ಕುಮಾರ್ ಅವರು ಪ್ರಕಟಿಸಿದ್ದಾರೆ. ಹಿರಿಯ ನಾಗರಿಕರಿಗೆ ಅನುಕೂಲವಾಗುವಂತೆ ವಿನ್ಯಾಸಗೊಳಿಸಿದ ಈ 10 ದಿನಗಳ ಪ್ಯಾಕೇಜ್‌ನಲ್ಲಿ ದ್ವಾರಕಾ, ನಾಥದ್ವಾರಕಾ, ಕಂಕ್ರೋಳಿ ದ್ವಾರಕಾ, ನಿಷ್ಕಲಂಕ ಮಹಾದೇವ ಸಮುದ್ರ ದೇವಾಲಯ, ಯಾದಾದ್ರಿ, ಸಮಾನತೆಯ ಪ್ರತಿಮೆ (Statue of Equality), ಸೋಮನಾಥ, ನಾಗೇಶ್ವರ ಮುಂತಾದ ಪವಿತ್ರ ಸ್ಥಳಗಳು ಸೇರಿವೆ.

ಪ್ರತಿ ರೈಲಿನಲ್ಲಿ ಭದ್ರತಾ ಸಿಬ್ಬಂದಿಗಳಿರುವರು ಮತ್ತು ಪ್ರಯಾಣ ವಿಮೆ, ಭಾರತೀಯ ರೈಲ್ವೆಯಿಂದ 33 ಶೇಕಡಾ ಸಬ್ಸಿಡಿ, ಲೀವ್ ಟ್ರಾವೆಲ್ ಕನ್ಸೆಷನ್ (LTC) ಮತ್ತು ಇತರ ಸೌಲಭ್ಯಗಳು ನೀಡಲಾಗುತ್ತವೆ ಎಂದು ವಿಘ್ನೇಶ್ ವಿವರಿಸಿದರು.

ಭಾರತದ ಸಾಂಸ್ಕೃತಿಕ ಮತ್ತು ಧಾರ್ಮಿಕ ವೈಭವವನ್ನು ಅನಾವರಣಗೊಳಿಸುವ ಈ ಭಾರತ್ ಗೌರವ್ ಸರ್ಕ್ಯೂಟ್ ರೈಲುಗಳು, ಭಕ್ತರಿಗೆ ಮಾತ್ರವಲ್ಲ, ಪ್ರವಾಸಿಗರಿಗೂ ಆಧ್ಯಾತ್ಮಿಕತೆಯ ಜತೆಗೆ ಅನನ್ಯ ಅನುಭವವನ್ನು ನೀಡಲಿವೆ. ಇದು ದೇವಾಲಯ ಪ್ರವಾಸೋದ್ಯಮಕ್ಕೆ ಹೊಸ ಚೈತನ್ಯ ತುಂಬುವ ಮಹತ್ವದ ಹೆಜ್ಜೆಯಾಗಿದೆ.

Soumya

Soumya

I am Soumya Shindhe, an engineering graduate with a strong passion for literature and journalism. I have contributed interview articles to Chittara cine magazine and possess keen interest in writing, communication, and creative expression, aspiring to grow professionally.

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

Read Previous

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

Read Next

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ