ಭಾರೀ ಮಳೆ: ಹಾರುವಾಗ ಇಂಡಿಗೋ ವಿಮಾನಕ್ಕೆ ಹಾನಿ
ದೆಹಲಿಯಿಂದ ಶ್ರೀನಗರದತ್ತ ಹೊರಟಿದ್ದ ಇಂಡಿಗೋ ವಿಮಾನಕ್ಕೆ ಹಾನಿ, ಪ್ರಯಾಣಿಕರಿಗೆ ಯಾವುದೇ ತೊಂದರೆ ಆಗಿಲ್ಲ.
ದೆಹಲಿಯಿಂದ (Dehli) ಶ್ರೀನಗರದತ್ತ (Srinagar) ಹೊರಟಿದ್ದ ಇಂಡಿಗೋ ವಿಮಾನ (Indigo Flight) (ಫ್ಲೈಟ್ ನಂ. 6E2142) ಬಲವಾದ ಆಣಿಕಲ್ಲು ಸಹಿತ ಮಳೆಗೆ ಸಿಲುಕಿ, ವಿಮಾನದ ನೋಸ್ಕೋನ್ ಗಂಭೀರ ಹಾನಿ ಸಂಭವಿಸಿದೆ. ಘಟನೆಯ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪ್ರಯಾಣಿಕರಲ್ಲಿ ಭಯ ಮತ್ತು ಆಕ್ರೋಶ ಉಂಟುಮಾಡಿವೆ.
ಹವಾಮಾನ ತೀವ್ರತೆಯಿಂದ ವಿಮಾನದಲ್ಲಿ ಅತಿ ಭಯ ಅವರಿಸಿದ್ದರೂ, ವಿಮಾನ ಸಿಬ್ಬಂದಿ ತಕ್ಷಣದ ಪ್ರತಿಕ್ರಿಯೆ ತೋರಿದ್ದು, ಶ್ರೀನಗರ ವಿಮಾನ ನಿಲ್ದಾಣದಲ್ಲಿ ವಿಮಾನವನ್ನು ಸುರಕ್ಷಿತವಾಗಿ ಇಳಿಸಿದ್ದಾರೆ. ಪೈಲಟ್ ತಕ್ಷಣ ಏರ್ ಟ್ರಾಫಿಕ್ ಕಂಟ್ರೋಲ್ಗೆ (ATC) ತುರ್ತು ಪರಿಸ್ಥಿತಿ ಘೋಷಿಸಿ ಸಹಾಯ ಕೋರಿದರು.
ವಿಮಾನ ಲ್ಯಾಂಡ್ ಆದ ಬಳಿಕ, 227 ಪ್ರಯಾಣಿಕರು ಹಾಗೂ ಸಿಬ್ಬಂದಿಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು. ಯಾರಿಗೂ ಗಾಯವಾಗಿಲ್ಲ. ಆದರೆ ವಿಮಾನಕ್ಕೆ ಗಂಭೀರ ಹಾನಿಯಾದ ಕಾರಣ, ಅದನ್ನು ತಾತ್ಕಾಲಿಕವಾಗಿ ಸೇವೆಯಿಂದ ಹೊರಗಿಡಲಾಗಿದೆ. ಇದನ್ನು ಇಂಡಿಗೋ “Aircraft on Ground” (AOG) ಎಂದು ಘೋಷಿಸಿದೆ.
ಘಟನೆ ನಂತರ ಇಂಡಿಗೋ ತನ್ನ ಪ್ರಕಟಣೆಯಲ್ಲಿ ಸಿಬ್ಬಂದಿ ಪ್ರೋಟೋಕಾಲ್ ಪ್ರಕಾರ ಕೆಲಸ ಮಾಡಿದರೆಂಬುದನ್ನು ತಿಳಿಸಿದೆ. “ವಿಮಾನ ಮತ್ತು ಕ್ಯಾಬಿನ್ ಸಿಬ್ಬಂದಿ ಸಂಪೂರ್ಣ ನಿಯಮಾನುಸಾರ ನಡೆದು, ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್ ಮಾಡಿದರು. ವಿಮಾನ ನಿಲ್ದಾಣದ ಸಿಬ್ಬಂದಿ ಪ್ರಯಾಣಿಕರ ಆರೈಕೆಯಲ್ಲಿ ತಕ್ಷಣ ತೊಡಗಿದರು. ವಿಮಾನವನ್ನು ಅಗತ್ಯ ತಪಾಸಣೆ ಮತ್ತು ನಿರ್ವಹಣೆಯ ಬಳಿಕ ಮಾತ್ರ ಮರಳಿ ಸೇವೆಗೆ ಬಿಡುಗಡೆ ಮಾಡಲಾಗುವುದು” ಎಂದು ಇಂಡಿಗೋ ತಿಳಿಸಿದೆ.
ಈ ತೀವ್ರ ಹವಾಮಾನ ಬದಲಾವಣೆಗೆ ಕಾರಣವಾಯಿತೆಂದರೆ, ಹರಿಯಾಣ ಮತ್ತು ಸುತ್ತಮುತ್ತ cyclonic circulation (ಭ್ರಮಣಮಾಲೆ) ಉಂಟಾಗಿದೆ. ಇದು ಪಂಜಾಬಿನಿಂದ ಬಾಂಗ್ಲಾದೇಶದವರೆಗಿನ ಟ್ರಫ್ನ ಭಾಗವಾಗಿದ್ದು, ಇಡೀ ಉತ್ತರ ಭಾರತದ ಹವಾಮಾನವನ್ನು ಪ್ರಭಾವಿತ ಮಾಡುತ್ತಿದೆ.
ಈ ಹವಾಮಾನ ಬದಲಾವಣೆಯ ಪರಿಣಾಮವಾಗಿ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹಲವು ಆಂತರಿಕ ಮತ್ತು ಅಂತಾರಾಷ್ಟ್ರೀಯ ವಿಮಾನಗಳು ಮುಂದೂಡಿಕೆ ಅಥವಾ ಬೇರೆ ದಿಕ್ಕಿಗೆ ತಿರುಗಿಸುವಂತಾಯಿತು.